ಹೆಚ್.ಡಿ.ಕುಮಾರಸ್ವಾಮಿ

ಹರದನಹಳ್ಳಿ ದೇವೇಗೌಡ ಕುಮಾರಸ್ವಾಮಿ [3](ಜನನ: ೧೯ ಡಿಸೆಂಬರ್,೧೯೫೯)ಕರ್ನಾಟಕದ ಒಬ್ಬ ಪ್ರಭಾವಿ ರಾಜಕಾರಣಿ. ಇವರು ಕರ್ನಾಟಕದ ೧೮ನೆ ಮುಖ್ಯ ಮಂತ್ರಿಯಾಗಿದ್ದರು. ಕುಮಾರಸ್ವಾಮಿ[4], ಭಾರತದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ತೃತೀಯ ಪುತ್ರ ಹಾಗು ಕರ್ನಾಟಕ ರಾಜ್ಯ ಜನತಾ ದಳ (ಜಾತ್ಯಾತೀತ) ಪಕ್ಷದ ಶಾಸಕಾಂಗ ನಾಯಕ. ಕುಮಾರಸ್ವಾಮಿ ಚಲನಚಿತ್ರ ನಿರ್ಮಾಪಕರೂ ಕೂಡ ಆಗಿದ್ದಾರೆ.

ಹರದನಹಳ್ಳಿ ದೇವೇಗೌಡ ಕುಮಾರಸ್ವಾಮಿ
H. D. Kumaraswamy
ಅಧಿಕಾರ ಅವಧಿ
೨೩-ಮೇ-೨೦೧೮  26 July 2019
ಪೂರ್ವಾಧಿಕಾರಿ ಬಿ.ಎಸ್. ಯಡಿಯೂರಪ್ಪ
ಉತ್ತರಾಧಿಕಾರಿ ಬಿ.ಎಸ್. ಯಡಿಯೂರಪ್ಪ
ವೈಯಕ್ತಿಕ ಮಾಹಿತಿ
ಜನನ (1959-12-16) 16 December 1959
ಹರದನಹಳ್ಳಿ, ಹೊಳೆನರಸಿಪುರ,ಹಾಸನ, ಕರ್ನಾಟಕ
ರಾಜಕೀಯ ಪಕ್ಷ ಜನತಾದಳ(ಎಸ್)
ಸಂಗಾತಿ(ಗಳು) ಅನಿತಾ ಕುಮಾರಸ್ವಾಮಿ[1] and ರಾಧಿಕಾ ಕುಮಾರಸ್ವಾಮಿ[2]
ಮಕ್ಕಳು ಮಗ ನಿಖಿಲ್, ಮಗಳು ಶಮಿಕಾ k
ತಂದೆ/ತಾಯಿ ಹೆಚ್.ಡಿ.ದೇವೇಗೌಡ, ಚೆನ್ನಮ್ಮ ದೇವೇಗೌಡ,
ವಾಸಸ್ಥಾನ ಬೆಂಗಳೂರು, ಭಾರತ
ಅಭ್ಯಸಿಸಿದ ವಿದ್ಯಾಪೀಠ ವಿಜಯಾ ಕಾಲೇಜು, ಬೆಂಗಳೂರು (ಪಿಯುಸಿ)
ನ್ಯಾಶನಲ್ ಕಾಲೇಜ ,ಬೆಂಗಳೂರು (ಬಿಎಸ್ಸಿ)
ಧರ್ಮ ಹಿಂದು
ಜಾಲತಾಣ ಸರಕಾರಿ ಜಾಲತಾಣ

ಜೀವನ

  • ಹರದನಹಳ್ಳಿ ದೇವೇಗೌಡ ಕುಮಾರಸ್ವಾಮಿಯವರ ಜನನ ಡಿಸೆಂಬರ್ ೧೯, ೧೯೫೯ರಲ್ಲಾಯಿತು. ರಾಜಕೀಯ ಅನುಭವವಿಲ್ಲದಿದ್ದರೂ ೧೯೯೬ರಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದರು.
  • ೧೯೯೮ರಲ್ಲಿ ಕನಕಪುರ ಲೋಕಸಭೆ ಕ್ಷೇತ್ರದಿಂದ ಮತ್ತು ೧೯೯೯ರಲ್ಲಿ ಸಾತನೂರು ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಸೋಲುಂಡ ಕುಮಾರಸ್ವಾಮಿ, ೨೦೦೪ ವಿಧಾನಸಭೆ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದ ಆಯ್ಕೆಯಾದರು.
  • ಕಾಂಗ್ರೆಸ್ ಮತ್ತು ಜನತಾದಳ(ಎಸ್) ಮೈತ್ರಿಕೂಟದ ಸರ್ಕಾರ ಸ್ಥಾಪನೆಯ ಕಾಲದಲ್ಲಿ ಕುಮಾರಸ್ವಾಮಿ ಜನತಾದಳದ ಕಾರ್ಯಾಧ್ಯಕ್ಷರಾರಾದರು.೨೦೦೫ ಡಿಸೆಂಬರ್ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಜಯದೊಂದಿಗೆ ಬದಲಾದ ರಾಜಕೀಯ ಪರಿಸ್ಥಿತಿ ಹಾಗು ಕಾಂಗ್ರೆಸ್ ಮತ್ತು ಜನತಾದಳದಿಂದ ನಿರ್ಗಮಿಸಿದ್ದರು.
  • ಸಿದ್ದರಾಮಯ್ಯನವರ ನಡುವಿನ ಮೈತ್ರಿಯ ಮಾತುಕತೆಯಿಂದ ಅಸಂತುಷ್ಟರಾದ ಕುಮಾರಸ್ವಾಮಿ ೧೮ ಜನವರಿ, ೨೦೦೬ರೊಂದು, ತಮ್ಮ ತಂದೆ ಎಚ್.ಡಿ.ದೇವೇ ಗೌಡರ ಇಚ್ಚೆಯ ವಿರುದ್ದ, ತಮ್ಮ ಪಕ್ಷದ ೪೬ ಶಾಸಕರೊಡನೆ ರಾಜ್ಯಪಾಲರೊಡನೆ ಕಾಂಗ್ರೆಸ್‌ನ ಧರಂ ಸಿಂಗ್ ನೇತೃತ್ವದ ಸರ್ಕಾರಕ್ಕೆ ಕೊಟ್ಟ ಬೆಂಬಲ ಹಿಂದೆಗೆದುಕೊಂಡರು.
  • ಕುಮಾರಸ್ವಾಮಿ ಫೆಬ್ರುವರಿ ೩, ೨೦೦೬ರೊಂದು ಭಾರತೀಯ ಜನತಾ ಪಕ್ಷದ ಸಹಕಾರದೊಂದಿಗೆ ಸ್ಥಾಪಿಸಲಾದ ನೂತನ ಸರ್ಕಾರದ ನೇತೃತ್ವ ವಹಿಸಿ ಕರ್ನಾಟಕದ ೧೮ನೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ೨೦೦೭ ನವೆಂಬರ್ ೨ ರಂದು ಬಹುಮತ ಕಳೆದುಕೊಂಡರು.

ರಾಜಕೀಯ ಬೆಳವಣಿಗೆ

  1. ೧೯೯೬ರಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆ
  2. ೨೦೦೪ ರ ವಿಧಾನಸಭೆ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದ ಆಯ್ಕೆ
  3. ೧೮ನೇ ಮುಖ್ಯಮಂತ್ರಿಯಾಗಿ ಫೆಬ್ರುವರಿ ೩ ರಂದು ಪ್ರಮಾಣ ವಚನ ಸ್ವೀಕರಿಸಿದರು
  4. ೦೩-ಫೆಬ್ರುವರಿ-೨೦೦೬ರಿಂದ ೦೯-ಅಕ್ಟೋಬರ-೨೦೦೭ರ ತನಕ ಮುಖ್ಯಮಂತ್ರಿಯಾಗಿ ಅಧಿಕಾರ.
  5. ೨೫ನೇ ಮುಖ್ಯಮಂತ್ರಿ[5][6]ಯಾಗಿ ಮೇ ೨೩ರಂದು ೪.೩೨ ನಿಮಿಷದ ಸುಮಾರಿಗೆ ದೇವರು ಹಾಗೂ ಕನ್ನಡ ನಾಡಿನ ಜನರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು[7]

ಉಲ್ಲೇಖಗಳು





This article is issued from Wikipedia. The text is licensed under Creative Commons - Attribution - Sharealike. Additional terms may apply for the media files.