ವೀರಪ್ಪ ಮೊಯ್ಲಿ

ವೀರಪ್ಪ ಮೊಯ್ಲಿ ಕರ್ನಾಟಕ ರಾಜ್ಯದ ೧೩ ನೇ ಮುಖ್ಯಮಂತ್ರಿ ಯಾಗಿ ಸೇವೆ ಸಲ್ಲಿಸಿದ್ದಾರೆ. ವೀರಪ್ಪ ಮೊಯಿಲಿಯವರು ೧೯೪೦ ಜನೆವರಿ ೧೨ರಂದು ಜನಿಸಿದರು. ಇವರ ತಾಯಿ ಪೂವಮ್ಮ ; ತಂದೆ ತಮ್ಮಯ್ಯ ಮೊಯಿಲಿ.

Veerappa Moily
ವೀರಪ್ಪ ಮೊಯ್ಲಿ

ವಾಣಿಜ್ಯ ವ್ಯವಹಾರ ಸಚಿವ (ಭಾರತ)
ಹಾಲಿ
ಅಧಿಕಾರ ಸ್ವೀಕಾರ 
ಜುಲೈ ೧೩, ೨೦೧೧
ಪ್ರಧಾನ ಮಂತ್ರಿ ಮನಮೋಹನ್ ಸಿಂಗ್

Minister of Law and Justice
ಅಧಿಕಾರ ಅವಧಿ
28 May 2009  July 12, 2011
ಪ್ರಧಾನ ಮಂತ್ರಿ Manmohan Singh
ಪೂರ್ವಾಧಿಕಾರಿ Hansraj Bhardwaj
ಉತ್ತರಾಧಿಕಾರಿ Salman Khurshid

ಕರ್ನಾಟಕದ ಮುಖ್ಯಮಂತ್ರಿ
ಅಧಿಕಾರ ಅವಧಿ
19 November 1992  11 December 1994
ರಾಜ್ಯಪಾಲ Khurshed Alam Khan
ಪೂರ್ವಾಧಿಕಾರಿ S. Bangarappa
ಉತ್ತರಾಧಿಕಾರಿ H. D. Deve Gowda
ವೈಯಕ್ತಿಕ ಮಾಹಿತಿ
ಜನನ (1940-01-12) 12 January 1940
ಮೂಡಬಿದಿರೆ, British India
ರಾಜಕೀಯ ಪಕ್ಷ Indian National Congress
ಸಂಗಾತಿ(ಗಳು) ಮಾಲತಿ ಮೊಯಿಲಿ
ಮಕ್ಕಳು 3 daughters
1 son
ಅಭ್ಯಸಿಸಿದ ವಿದ್ಯಾಪೀಠ University College, Mangalore
Bangalore University
ಜಾಲತಾಣ Official Website
ವೀರಪ್ಪ ಮೊಯ್ಲಿ

ಶಿಕ್ಷಣ

ಮೊಯಿಲಿಯವರು ತಮ್ಮ ಪ್ರಾಥಮಿಕ ಹಾಗು ಮಾಧ್ಯಮಿಕ ಶಿಕ್ಷಣಗಳನ್ನು ಮೂಡಬಿದಿರಿಯಲ್ಲಿ ಪೂರೈಸಿ, ಮಂಗಳೂರಿನ ಸರಕಾರಿ ಕಾಲೇಜಿನಲ್ಲಿ ಅಧ್ಯಯನ ಪೂರೈಸಿ, ಪದವಿ ಪಡೆದರು. ಕರ್ನಾಟಕ ಸರಕಾರದ ಮೀನುಗಾರಿಕೆ ಇಲಾಖೆಯಲ್ಲಿ, ತನ್ನಂತರ ಭಾರತೀಯ ಜೀವವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿದ್ದಂತೆಯೆ , ಬೆಂಗಳೂರಿನ ಸರಕಾರಿ ಕಾನೂನು ಕಾಲೇಜಿನಿಂದ ಬಿ.ಎಲ್.ಪದವಿ ಪಡೆದರು.

ವೃತ್ತಿ ಜೀವನ

ಕಾರ್ಕಳ ಹಾಗು ಮಂಗಳೂರುಗಳಲ್ಲಿ ವೃತ್ತಿಯನ್ನಾರಂಭಿಸಿದ ಮೊಯಿಲಿಯವರು , ಬೆಂಗಳೂರಿನಲ್ಲಿ ಉಚ್ಚ ನ್ಯಾಯಾಲಯದಲ್ಲಿ ನ್ಯಾಯವಾದಿ ವೃತ್ತಿಯನ್ನು ಮುಂದುವರಿಸಿದರು.

ರಾಜಕಾರಣ

೧೯೬೮ರಲ್ಲಿ ಮೊಯಿಲಿಯವರು ಕಾಂಗ್ರೆಸ್ ಪಕ್ಷದ ಸದಸ್ಯರಾದರು. ೧೯೬೯ರಲ್ಲಿ ಕಿಸಾನ ಸಭಾ ಸ್ಥಾಪಿಸಿದರು.
೧೯೭೨ರಿಂದ ೧೯೯೯ರವರೆಗೆ ಮೊಯಿಲಿಯವರು ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ವಿಧಾನ ಸಭಾ ಕ್ಷೇತ್ರದ ಶಾಸಕರಾಗಿದ್ದರು.
೧೯೭೪ರಿಂದ ೧೯೭೭ರವರೆಗೆ ಮೊಯಿಲಿಯವರು ಸಣ್ಣ ಕೈಗಾರಿಕೆ ಖಾತೆಯ ಮಂತ್ರಿಯಾಗಿದ್ದರು.

೧೯೮೦ರಿಂದ ೧೯೮೨ರವರೆಗೆ ಹಣಕಾಸು ಮತ್ತು ಯೋಜನಾ ಖಾತೆಯ ಮಂತ್ರಿಯಾಗಿದ್ದರು.
೧೯೮೩ರಿಂದ ೧೯೮೫ರವರೆಗೆ ವಿರೋಧ ಪಕ್ಷದ ನಾಯಕರಾಗಿದ್ದರು.

ಸಿ ಭೈರೇಗೌಡರನ್ನು ೨ ಲಕ್ಷ ರೂಪಾಯಿ ನೀಡಿ, ಕಾಂಗ್ರೆಸ್ ಪಕ್ಷಕ್ಕೆ ಸೆಳೆಯಲು ಮೊಯಿಲಿ ಆಮಿಷ ಒಡ್ಡಿದರು ಎಂಬ ಹಗರಣ ೧೯೮೩ರಲ್ಲಿ ದೊಡ್ಡ ಸುದ್ದಿಯಾಯಿತು. ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಸಿ. ಎಂ. ಸ್ಟೀಫನ್ ರಾಮಕೃಷ್ಣ ಹೆಗಡೆ ಸರ್ಕಾರವನ್ನು ಉರುಳಿಸುವುದಾಗಿ ಘೋಷಿಸಿದ್ದ ವೇಳೆ, ಈ ಹಗರಣ ಬಂದುದು, ಮೊಯಿಲಿಯವರ ರಾಜಕೀಯ ಬದುಕಿಗೆ ಆಘಾತ ನೀಡಿತ್ತು. ನ್ಯಾ. ಆರ್. ಜಿ. ದೇಸಾಯಿ ನೇತೃತ್ವದ ವಿಚಾರಣಾ ಆಯೋಗ ಮೊಯಿಲಿಯವರು ನಿರ್ದೋಷಿ ಎಂದು ವರದಿ ಸಲ್ಲಿಸಿತು. [1]
[2] [3] ೧೯೮೯ರಿಂದ ೧೯೯೨ರ ವರೆಗೆ ವಿವಿಧ ಇಲಾಖೆಗಳ ಸಚಿವರಾಗಿದ್ದ ಮೊಯಿಲಿ,
೧೯೯೨ರಿಂದ ೧೯೯೪ರವರೆಗೆ ಕರ್ನಾಟಕದ ೧೩ನೆಯ ಮುಖ್ಯ ಮಂತ್ರಿಗಳಾಗಿ ಸೇವೆ ಸಲ್ಲಿಸಿದರು.

ಸಾಹಿತ್ಯ

ವೀರಪ್ಪ ಮೊಯಿಲಿಯವರು ಗಣ್ಯ ಸಾಹಿತಿಗಳೂ ಆಗಿದ್ದಾರೆ. ಅವರ ಪತ್ನಿ ಶ್ರೀಮತಿ ಮಾಲತಿ ಮೊಯಿಲಿ ಸಹ ಲೇಖಕಿಯಾಗಿದ್ದಾರೆ. ಮೊಯಿಲಿಯವರ ಕೃತಿಗಳು ಇಂತಿವೆ:

ಕೃತಿಗಳು

ಕಾದಂಬರಿ

  • ಸುಳಿಗಾಳಿ
  • ಸಾಗರದೀಪ
  • ಕೊಟ್ಟ
  • ತೆಂಬರೆ

ನಾಟಕಗಳು

  • ಮಿಲನ
  • ಪ್ರೇಮವೆಂದರೆ
  • ಪರಾಜಿತ
  • ಮೂರು ನಾಟಕಗಳು

ಕವನ ಸಂಕಲನ

  • ಹಾಲು ಜೇನು
  • ಮತ್ತೆ ಮಡೆಯಲಿ ಸಮರ
  • ಯಕ್ಷಪ್ರಶ್ನೆ
  • ಜೊತೆಯಾಗಿ ನಡೆಯೋಣ (ಶ್ರೀಮತಿ ಮಾಲತಿ ಮೊಯಿಲಿಯವರ ಜೊತೆಯಲ್ಲಿ)

ಮಹಾಕಾವ್ಯ

  • ಶ್ರೀರಾಮಾಯಣ ಅನ್ವೇಷಣಂ

ಪುರಸ್ಕಾರ

  • ೨೦೦೦ನೆಯ ಸಾಲಿನಲ್ಲಿ ಮೊಯಿಲಿಯವರಿಗೆ ಅಲ್-ಅಮೀನ್ ಸದ್ಭಾವನಾ ಪ್ರಶಸ್ತಿ ಲಭಿಸಿತು.
  • ೨೦೦೧ನೆಯ ಸಾಲಿನಲ್ಲಿ ಹಿಂದುಳಿದ ಹಾಗು ಅಲ್ಪಸಂಖ್ಯಾತ ವರ್ಗದವರ ಸುಧಾರಣೆಗಾಗಿ ಕೊಡಮಾಡುವ ದೇವರಾಜ ಅರಸ ಪ್ರಶಸ್ತಿ ದೊರೆಯಿತು.
  • ೨೦೦೧ಆರ್ಯಭಟ ಪುರಸ್ಕಾರ ದೊರೆತಿದೆ.
  • ೨೦೦೨ರಲ್ಲಿ ಗೊರೂರು ಪ್ರತಿಷ್ಠಾನದ ಸಮಗ್ರ ಸಾಹಿತ್ಯ ಪುರಸ್ಕಾರ ಲಭಿಸಿತು.
  • ೨೦೧೪ರ ಪ್ರತಿಷ್ಠಿತ ಸರಸ್ವತಿ ಸನ್ಮಾನ[4] [5]

ಉಲ್ಲೇಖಗಳು

  1. http://indiatoday.intoday.in/story/independent-mla-accuses-veerappa-moily-of-giving-him-rs-2-lakh-to-defect-to-congressi/1/372241.html
  2. http://indiatoday.intoday.in/story/independent-mla-accuses-veerappa-moily-of-giving-him-rs-2-lakh-to-defect-to-congressi/1/372241.html
  3. http://www.thehindu.com/todays-paper/tp-national/tp-karnataka/price-of-an-mla-went-up-1250-times-in-26-years/article844148.ece
  4. http://www.dnaindia.com/india/report-veerappa-moily-gets-saraswati-samman-for-his-kannada-poem-ramayana-mahaveshanam-2067290
  5. ಒನ್ ಇಂಡಿಯ (ಕನ್ನಡ) March 10, 2015 'ವೀರಪ್ಪ ಮೊಯ್ಲಿ ಅವರಿಗೆ ಸರಸ್ವತಿ ಸಮ್ಮಾನ್ ಪುರಸ್ಕಾರ'



This article is issued from Wikipedia. The text is licensed under Creative Commons - Attribution - Sharealike. Additional terms may apply for the media files.