ಸಿಂದಗಿ
ಸಿಂದಗಿ ಒಂದು ನಗರ ಹಾಗೂ ತಾಲ್ಲೂಕು ಕೇಂದ್ರ. ಇದು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯಲ್ಲಿದೆ. ಸಿಂದಗಿ ಪಟ್ಟಣವು ವಿಜಯಪುರ - ಗುಲ್ಬರ್ಗಾ ರಾಷ್ಟ್ರಿಯ ಹೆದ್ದಾರಿ - 218 ರಲ್ಲಿದೆ. ಜಿಲ್ಲಾ ಕೇಂದ್ರ ವಿಜಯಪುರದಿಂದ ಸುಮಾರು 60 ಕಿ.ಮಿ. ದೂರ ಇದೆ.
ಸಿಂದಗಿ | |
![]() ![]() ಸಿಂದಗಿ
| |
ರಾಜ್ಯ - ಜಿಲ್ಲೆ |
ಕರ್ನಾಟಕ - ವಿಜಯಪುರ |
ನಿರ್ದೇಶಾಂಕಗಳು | |
ವಿಸ್ತಾರ - ಎತ್ತರ |
1200 km² - 770 ಮೀ. |
ಸಮಯ ವಲಯ | IST (UTC+5:30) |
ಜನಸಂಖ್ಯೆ (2011) - ಸಾಂದ್ರತೆ |
40000 - 150/ಚದರ ಕಿ.ಮಿ. |
ಅಂತರ್ಜಾಲ ತಾಣ: http://www.sindagitown.mrc.gov.in/ |
ಚರಿತ್ರೆ
ದೇವರನಾವದಗಿ
ಸಿಂದಗಿ ತಾಲೂಕಿನಲ್ಲಿ ಕೆಲವು ಇತಿಹಾಸ ಪ್ರಸಿದ್ಧ ಸ್ಥಳಗಳಲ್ಲಿ ದೇವರನಾವದಗಿ ಗ್ರಾಮ ಕೂಡ ಒಂದು. ಇದು ಭೀಮಾನದಿಯಿಂದ 3 ಕಿ.ಮೀ.ದೂರದಲ್ಲಿದೆ. ಈ ಗ್ರಾಮದ ಮುಖ್ಯ ಆಕರ್ಷಣೆ ಮಲ್ಲಿಕಾರ್ಜುನ ದೇವಾಲಯ. ಸ್ವಾತಂತ್ರ್ಯ ಹೋರಾಟಗಾರ ವಾಸುದೇವ ಬಲವಂತರಾಯ ಪಡಖೇ ಈ ದೇವಾಲಯದಲ್ಲೇ ಸೆರೆ ಸಿಕ್ಕರು.
ಸಿಂದಗಿ ನಗರದ ಐತಿಹಾಸಿಕ ದೇವಸ್ಥಾನವಾದ ಶ್ರೀ ಸಂಗಮೇಶ್ವರ ದೇವಸ್ಥಾನವಿದೆ ಇದು ಶಾಸನಗಳ ಪ್ರಕಾರ ೧೨ನೇ ಶತಮಾನದಲ್ಲಿ ಕಲ್ಯಾಣಿ ಚಾಲುಕ್ಯರಿಂದ ನಿರ್ಮಿಸಲ್ಲಟ್ಟಿವೆ ಮುಖ್ಯ ದೇವಾಲಯದ ಪ್ರವೇಶ ದ್ವಾರಗಳು ಒಂದು ಪೂರ್ವಾಭಿಮುಖ ಇನ್ನೊಂದು ಉತ್ತರಾಭಿಮುಖವಾಗಿವೆ ಪೂರ್ವಭಿಮುಖ ಪ್ರವೇಶ ದ್ವಾರದ ಮುಂದೆ ಭೃಹತ್ ದೀಪ ಗಂಭ ಅಥವಾ ಮಾಲಗಂಬ ಇದೆ. ದ್ವಾರ ಪ್ರವೇಶದ ನಂತರ ವಿಶಾಲವಾದ ಪ್ರಾಂಗಣ ಒಳಗೊಂಡಿದೆ ಅಲ್ಲಿ ಪೂರ್ವ ದ್ವಾರದ ಎಡಕ್ಕೆ ಶಾಖಾಂಭರಿ ಮಂಟಪ ಪಶ್ಚಮಕ್ಕೆ ಕಾಳಿಕಾ ಮಾತಾ ದಕ್ಷಿಣದಲ್ಲಿ ಉತ್ತಾರಾಭಿಕವಾಗಿ ಗಣಪತಿ ಮಂಟಪ ಇದೆ ಮದ್ಯದಲ್ಲಿ ವಿಶಾಲವಾದ ಗೊಪುರ ಒಳಗೊಂಡ ಶೈವ ಧರ್ಮೀಯ ವಿಶಾಲ ಹಾಗೂ ಪ್ರಾಂಗಣ ಒಳಗೊಂಡ ಸುಂದರ ಶಿವಲಿಂಗ ಮೂರ್ತಿ ಹೊಂದಿದೆ. ಇದರ ಹಿಂದುಗಡೆ ತಾಯಿ ಬೌರಮ್ಮ ದೇವಿಯ ಅಮೃತ ಶಿಲೆಯ ನಿಂತ ಸುಂದರವಾದಂತಹ ವಿಗ್ರಹ ವಿದೆ
ಸ್ಮಾರಕ ಭವನ
ಹೈದರಾಬಾದ ಕರ್ನಾಟಕ ವಿಮೋಚನಾ ಹೋರಾಟ ಮತ್ತು ಭಾರತದ ಸ್ವತಂತ್ಯ ಹೋರಾಟದ ಸೇನಾನಿಗಾಗಿ ಶ್ರಮಿಸಿದಂತಹ ಪ್ರಮುಖರಲ್ಲಿ ಶ್ರೀಯುತರಾದಂತಹ ರಮಾನಂದ ತೀರ್ಥರ ಜನ್ಮಸ್ಥಳವಾಗಿದೆ. ಇವರ ಸ್ಮರಣಾರ್ಥ ಇವರ ಮನೆಯನ್ನು ಸ್ಮಾರಕ ಭವನವಾಗಿ ಬದಲಾಯಿಸಲಾಗಿದೆ.
ಶ್ರೀ ಬಸವೇಶ್ವರ ಪುತ್ಠಳಿ
ಸಿಂದಗಿ ನಗರವನ್ನು ಪ್ರವೇಶಿಸುತ್ತಿದ್ದಂತೆ ಅಲ್ಲಿ ನಿಮಗೆ ಭಾರತದಲ್ಲಿಯೆ ಅತಿ ಎತ್ತರವಾದ, ಅತಿ ಸುಂದರವಾದ .ಕಾಯಕವೇ ಕೈಲಾಸ ಎಂದು ಹೆಳಿದ 12ನೇ ಶತಮಾನದ ಸಮಾಜ ಸೇವಕರು ಹಾಗೂ ವೀರಶೈವ ಮತದಸ್ಠಾಪಕರು ಆದಂತಹ ಶ್ರೀ ಬಸವೇಶ್ವರ ಅವರ (ಬಸವಣ್ಣನವರ)ಸುಂದರವಾದಂತಹ ಪುತ್ಠಳಿ ಯನ್ನು ಸ್ಠಾಪಿಸಲಾಗಿದೆ.ಇದು ಸಿಂದಗಿ ನಗರಕ್ಕೆ ಬರುವ ಸಮಸ್ತ ಮನುಕುಲದವರನ್ನು ಸದಾ ಸ್ವಾಗತಿಸುತ್ತದೆ .
ಸಿಂದಗಿಯು ತಾಲೂಕಾ ಸ್ಥಳವಾಗಿದೆ. ಇದು ವಿಜಾಪುರದಿಂದ ಪೂರ್ವಕ್ಕೆ 60 ಕಿ.ಮೀ. ದೂರದಲ್ಲಿದೆ. ಸಿಂದಗಿಯನ್ನು ಕ್ರಿ.ಶ. 1200ರಲ್ಲಿ ಸಿಂದು ಬಲ್ಲಾಳ ಎಂಬ ಸಾಮಂತ ಅರಸನು ಕಟ್ಟಿದನೆಂಬ ಪ್ರತೀತಿ ಇದೆ. ಆದ್ದರಿಂದ ಈ ಊರಿಗೆ ಸಿಂದಗಿ ಎಂಬ ಹೆಸರು ಬಂದಿದೆ. ಇಲ್ಲಿರುವ ಸಂಗಮೇಶ್ವರ ದೇವಾಲಯವು ಕಲ್ಯಾಣ ಚಾಲುಕ್ಯರ ಶೈಲಿಯಲ್ಲಿ ನಿರ್ಮಿತವಾಗಿದೆ. ದೇವಾಲಯದ ಗರ್ಭಗೃಹದ ಮೇಲೆ ಕದಂಬ ನಾಗರ ಶೈಲಿಯ ಶಿಖರ ಭಾಗವಿದೆ. ನವರಂಗದಲ್ಲಿ ಕಲ್ಯಾಣ ಚಾಲುಕ್ಯರ ನಾಲ್ಕು ಸ್ತಂಭಗಳಿವೆ. ಗೋಡೆಗಳಲ್ಲಿ ದೇವ ಕೋಷ್ಠಗಳಿರುತ್ತವೆ. ಬಿಡಿ ಲಿಂಗ, ವೇಣುಗೋಪಾಲ, ವಿಷ್ಣು ಅಥವಾ ನಾರಾಯಣ, ಭಕ್ತ ದಂಪತಿಗಳು ಮೊದಲಾದ ಬಿಡಿ ಶಿಲ್ಪಗಳು ಕಂಡುಬರುತ್ತವೆ.
ದೇವಾಲಯದ ಎದುರಿಗೆ ತೆರೆದ ಮಂಟಪದಲ್ಲಿ ಶಿವಲಿಂಗಗಳೂ, ಎರಡು ನಂದಿಗಳು, ಮಹಿಷ ಮರ್ಧಿನಿಯರ ಶಿಲಾಕೃತಿಗಳಿವೆ. ಸುತ್ತಲೂ ವಿಶಾಲವಾದ ಪ್ರಾಂಗಣವಿದೆ. ಪ್ರಾಂಗಣದಲ್ಲಿ ಮೂರು ಜನ ಯತಿಗಳು, ಪಾರ್ವತಿ, ಭೈರವ ಮೊದಲಾದ ವಿಜಯನಗರೋತ್ತರ ಶೈಲಿಯ ಬೃಹತ್ ಶಿಲ್ಪಗಳಿವೆ. ಪ್ರತಿ ವರ್ಷ ಸಂಕ್ರಮಣಕ್ಕೆ ಈ ದೇವಾಲಯದಲ್ಲಿ ಜಾತ್ರೆ ನಡೆಯುತ್ತದೆ. ದೇವಾಲಯದ ಒಳ ಪ್ರಾಕಾರವು ವಿಶಾಲವಾಗಿದೆ. ಪ್ರದಕ್ಷಿಣಾ ಪಥದ ಬಲಭಾಗದಲ್ಲಿ ಪ್ರತ್ಯೇಕವಾದ ಭ್ರಮರಾಂಬಿಕಾ ದೇವಾಲಯವಿದೆ. ನರಸಿಂಹ ಮತ್ತು ಬನಶಂಕರಿಯ ಚಿಕ್ಕ ಗುಡಿಗಳು ಇರುತ್ತವೆ. ಅನೇಕ ಬಿಡಿ ವಿಗ್ರಹಗಳು ಈ ದೇವಾಲಯದಲ್ಲಿ ಇರುತ್ತವೆ.
ಈ ತಾಲ್ಲೂಕು ದಖನ್ ಪ್ರಸ್ಥಭೂಮಿಯ ಮಧ್ಯದಲ್ಲಿರುವ ಅರೆ ಒಣ ಪ್ರದೇಶ. ಉತ್ತರದಲ್ಲಿ ಭೀಮಾ ಮತ್ತು ದಕ್ಷಿಣದಲ್ಲಿ ಡೋಣಿ ನದಿಗಳ ನಡುವಿರುವ ಈ ತಾಲ್ಲೂಕಿನಲ್ಲಿ ವಿಸ್ತಾರ ಬಯಲುಗಳು ಮತ್ತು ಅಲ್ಲಲ್ಲಿ ಸಣ್ಣ ಗುಡ್ಡಗಳು ಇವೆ. ಕಡಿಮೆ ಪ್ರಮಾಣದ ಮಳೆ ಮತ್ತು ಹಿಂದಿನಿಂದಲೂ ವ್ಯಾಪಕ ಸಾಗುವಳಿಗೆ ಒಳಗಾಗದ ಈ ತಾಲ್ಲೂಕಿನಲ್ಲಿ ಸಸ್ಯ ಸಂಪತ್ತು ವಿರಳ. ಗುಡ್ಡ ಪ್ರದೇಶಗಳಲ್ಲಿ ಕುರುಚಲು ಕಾಡು ಕಂಡುಬರುತ್ತದೆ. ಭೀಮಾ ಮತ್ತು ಡೋಣಿ ನದಿಗಳನ್ನು ಸೇರುವ ಅನೇಕ ತೊರೆಗಳಿಂದ ಭೂಪ್ರದೇಶದಲ್ಲಿ ಅಲ್ಲಲ್ಲಿ ಉಂಟಾಗಿರುವ ಸಣ್ಣ ಕಣಿವೆಗಳು ವ್ಯವಸಾಯ ಯೋಗ್ಯ ಪ್ರದೇಶಗಳಾಗಿವೆ. ಭೀಮಾ ನದಿಯ ಸುತ್ತಲ ಪ್ರದೇಶ ಕಪ್ಪುಮಣ್ಣಿನಿಂದ ಕೂಡಿದ್ದು ಫಲವತ್ತಾಗಿದೆ. ಕಣಿವೆ ಪ್ರದೇಶಗಳ ಹೊರತು ಮಿಕ್ಕ ಪ್ರದೇಶಗಳಲ್ಲಿ ಅಲ್ಪ ಸಸ್ಯವರ್ಗದ ಬೋಳು ಬಯಲುಗಳಿವೆ. ಇಲ್ಲಿನ ಬಂಡೆಗಳು ಬೆಣಚುಕಲ್ಲು ವರ್ಗಕ್ಕೆ ಸೇರಿದವು.
ಭೀಮಾ ನದಿ ಈ ತಾಲ್ಲೂಕಿನ ಉತ್ತರದಲ್ಲಿ ಪೂರ್ವಾಭಿಮುಖವಾಗಿ, ಅನಂತರ ಸ್ವಲ್ಪ ದೂರ ಆಗ್ನೇಯಾಭಿಮುಖವಾಗಿ ಹರಿದು ಗುಲ್ಬರ್ಗ ಜಿಲ್ಲೆಯ ಅಫಜಲಪುರ ತಾಲ್ಲೂಕನ್ನು ಬೇರ್ಪಡಿಸಿದೆ. ದಕ್ಷಿಣದಲ್ಲಿ ಡೋಣಿ ನದಿ ಪೂರ್ವಾಭಿಮುಖವಾಗಿ ಹರಿಯುವುದಲ್ಲದೆ ಸ್ವಲ್ಪದೂರ ಬಸವನ ಬಾಗೇವಾಡಿ ತಾಲ್ಲೂಕನ್ನು ಬೇರ್ಪಡಿಸಿದೆ. ಮುಂದೆ ಮತ್ತೆ ತಾಲ್ಲೂಕಿನ ಒಳಗೆ ಸ್ವಲ್ಪದೂರ ಹರಿದು ಅನಂತರ ಬಸವನ ಬಾಗೇವಾಡಿ ತಾಲ್ಲೂಕನ್ನು ಪ್ರವೇಶಿಸುವುದು. ಈ ನದಿಯ ಎಡದಂಡೆ ಪ್ರದೇಶ ಮತ್ತು ಭೀಮಾ ನದಿಯ ಬಲದಂಡೆ ಪ್ರದೇಶ ಸಿಂದಗಿ ತಾಲ್ಲೂಕಿಗೆ ಸೇರಿದ್ದು ದಂಡೆಯ ಜಮೀನುಗಳಿಗೆ ಪ್ರವಾಹ ಕಾಲದಲ್ಲಿ ಮೆಕ್ಕಲು ಮಣ್ಣು ತೂರುವುದರಿಂದ ವ್ಯವಸಾಯಕ್ಕೆ ಉತ್ತಮ ಪ್ರದೇಶವಾಗಿದ್ದು ಫಲವತ್ತಾಗಿವೆ. ಇವಲ್ಲದೆ ನಾವಲಿ ಮತ್ತು ಹೆಬ್ಬಾಲ ನದಿಗಳು ಈ ತಾಲ್ಲೂಕಿನಲ್ಲೆ ಹುಟ್ಟಿ ಭೀಮಾ ನದಿಯನ್ನು ಸೇರುವುವು.
ಈ ತಾಲ್ಲೂಕಿನಲ್ಲಿ ಮಳೆ ಕಡಿಮೆ. ವಾರ್ಷಿಕ ಸರಾಸರಿ ಮಳೆ 675.66 ಮಿಮೀ. ಜೂನ್ನಿಂದ ಸೆಪ್ಟೆಂಬರ್ವರೆಗೆ ಮಳೆಗಾಲ. ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಈಶಾನ್ಯ ಮಾರುತದಿಂದ ಸ್ವಲ್ಪ ಪ್ರಮಾಣದ ಮಳೆಯಾಗುತ್ತದೆ. ವರ್ಷದಿಂದ ವರ್ಷಕ್ಕೆ ಇಲ್ಲಿನ ಮಳೆಯ ಪ್ರಮಾಣದಲ್ಲಿ ಅಧಿಕ ಏರಿಳಿತ ಕಂಡುಬರುತ್ತದೆ. ಈ ತಾಲ್ಲೂಕಿನ ಬೆಳೆಗಳಲ್ಲಿ ಜೋಳ, ಸಜ್ಜೆ, ಬತ್ತ, ಮೆಕ್ಕೆಜೋಳ, ನೆಲಗಡಲೆ, ಮೆಣಸಿನಕಾಯಿ ಮುಖ್ಯವಾದುವು. ಕಬ್ಬು, ಗೋದಿ, ಹುರುಳಿ ಮತ್ತು ಕುಸುಬೆಯನ್ನೂ ಬೆಳೆಯುತ್ತಾರೆ. ಹತ್ತಿ ಇಲ್ಲಿನ ಮುಖ್ಯ ವಾಣಿಜ್ಯ ಬೆಳೆ.
ಈ ತಾಲ್ಲೂಕು ಕೈಗಾರಿಕೆಯಲ್ಲಿ ಅಷ್ಟಾಗಿ ಮುಂದುವರಿದಿಲ್ಲ. ಹತ್ತಿ ಬೆಳೆಯುವ ಈ ಪ್ರದೇಶದಲ್ಲಿ ಹತ್ತಿ ಆಧರಿಸಿದ ಕೈಗಾರಿಕೆಗಳೇ ಹೆಚ್ಚು. ತಾಲ್ಲೂಕಿನಲ್ಲಿ ಹತ್ತಿ ಹದಮಾಡುವ ಎರಡು ಕಾರ್ಖಾನೆಗಳಿವೆ. ಕೈಮಗ್ಗಗಳು, ಯಂತ್ರ ಮಗ್ಗಗಳೂ ಇವೆ. ಇವುಗಳಲ್ಲದೆ ಮರ, ಚರ್ಮದ ಕೆಲಸಗಳ ಉದ್ಯಮಗಳಿವೆ. ಮಡಕೆ ಮಾಡುವುದು, ಪಾತ್ರೆ ತಯಾರಿಕೆ, ಗಾಡಿ ಕಟ್ಟುವುದು, ಕಬ್ಬಿಣದ ಕೆಲಸ ಮೊದಲಾದವು ಇತರ ಗೃಹ ಕೈಗಾರಿಕೆಗಳು.
ಈ ತಾಲ್ಲೂಕಿನಲ್ಲಿ ಕೆಲವು ಪ್ರಾಚೀನ ದೇವಾಲಯಗಳೂ ಐತಿಹಾಸಿಕ ಸ್ಥಳಗಳು ಇವೆ. ಅವುಗಳಲ್ಲಿ ಆಲಮೇಲ ಗ್ರಾಮ ಕಳಚುರಿ ರಾಜ ಬಿಜ್ಜಳನ ಕಾಲದಲ್ಲಿ ಸ್ಥಾಪನೆಯಾದದ್ದೆಂದು ತಿಳಿದುಬರುತ್ತದೆ. ಇಲ್ಲಿನ ರಾಮದೇವ ದೇವಾಲಯದಲ್ಲಿ ಅಮೃತಶಿಲೆಯ ರಾಮ, ಸೀತೆ ಮತ್ತು ಲಕ್ಷ್ಮಣರ ವಿಗ್ರಹಗಳಿವೆ. ಹಿಪ್ಪರಗಿ ಪ್ರಸಿದ್ಧ ವಚನಕಾರ ಮಡಿವಾಳ ಮಾಚಯ್ಯನ ಊರು. ಇಲ್ಲಿ ಜಮದಗ್ನಿ ಋಷಿಯಿಂದ ಸ್ಥಾಪಿತವಾದದ್ದೆನ್ನಲಾದ ಕಾಳಮೇಶ್ವರ ದೇವಾಲಯದಲ್ಲಿ ಲಿಂಗವಿದೆ. ಇಲ್ಲಿ ಕಾರ್ತೀಕದಲ್ಲಿ ಕಾಳಮೇಶ್ವರ ಜಾತ್ರೆ ನಡೆಯುತ್ತದೆ. ಚಟ್ಟರ್ಕಿ, ದೇವಗಾಂವ, ಕೊರವಾರ, ಗೊಲ್ಲಗೇರಿಗಳಲ್ಲಿ ಹಳೆಯ ದೇವಾಲಯಗಳಿವೆ. ಕೊರವಾರದಲ್ಲಿ ಚೈತ್ರಮಾಸದಲ್ಲಿ ರಥೋತ್ಸವ ನಡೆಯುತ್ತದೆ.
ಸಿಂದಗಿ ಈ ತಾಲ್ಲೂಕಿನ ಆಡಳಿತ ಕೇಂದ್ರ ಹಾಗೂ ಪಟ್ಟಣ. ಬಿಜಾಪುರದ ಈಶಾನ್ಯಕ್ಕೆ 60 ಕಿಮೀ ದೂರದಲ್ಲೂ ಇಂಡಿಗೆ ಆಗ್ನೇಯದಲ್ಲಿ 50 ಕಿಮೀ ದೂರದಲ್ಲೂ ಇದೆ. ಜನಸಂಖ್ಯೆ 27,749.
- ಈ ಊರನ್ನು ಸು. 1200ರಲ್ಲಿ ಸಿಂದ ಬಲ್ಲಾಳನೆಂಬುವ ಸ್ಥಾಪಿಸಿದನೆಂದು ತಿಳಿದುಬರುತ್ತದೆ. ಇದಕ್ಕೆ ಹಿಂದೆ ಸಿಂದಪುರವೆಂದು ಹೆಸರಿತ್ತು. ಊರ ದಕ್ಷಿಣಕ್ಕಿರುವ ಸಂಗಮೇಶ್ವರ ದೇವಾಲಯ ಪ್ರಸಿದ್ಥವಾದುದು. ಈ ದೇವಾಲಯದ ಆವರಣದಲ್ಲಿ ಭ್ರಮರಾಂಬಿಕ ದೇವತೆಯ ಗುಡಿ ಇದೆ. ಈ ಊರಿನ ಇನ್ನೊಂದು ಆಕರ್ಷಕ ಸ್ಥಳ ಜಕ್ಕಪ್ಪಯ್ಯನ ಮಠ. ಇಲ್ಲಿ ಪ್ರತಿವರ್ಷ ಜಾತ್ರೆ ನಡೆಯುತ್ತದೆ. ಈ ಊರಲ್ಲಿ ನೀಲಗಂಗಮ್ಮ (ಭಾಗೀರಥಿ) ದೇವಾಲಯವಿದೆ.
ಭೌಗೋಳಿಕ
ಕರ್ನಾಟಕದ ಉತ್ತರದ ಗಡಿಯಲ್ಲಿರುವ ಸಿಂದಗಿ ತಾಲ್ಲೂಕವು ಉತ್ತರಕ್ಕೆ ಗುಲ್ಬರ್ಗಾ ಜಿಲ್ಲೆ , ಪಶ್ಚಿಮಕ್ಕೆ ಇಂಡಿ ತಾಲ್ಲೂಕು ಮತ್ತು ವಿಜಯಪುರ ತಾಲ್ಲೂಕು, ದಕ್ಷಿಣಕ್ಕೆ ಮುದ್ದೇಬಿಹಾಳ ತಾಲ್ಲೂಕು ಮತ್ತು ಪೂರ್ವಕ್ಕೆ ಗುಲ್ಬರ್ಗಾ ತಾಲ್ಲೂಕುಗಳಿವೆ. ಈ ತಾಲ್ಲೂಕದ ವಿಸ್ತೀರ್ಣ 2225 ಚ.ಕಿಮೀ ಮತ್ತು ವಾರ್ಷಿಕ ಮಳೆ 59 ಸೆ.ಮೀ. ಇದೆ. ಸಿಂದಗಿ ತಾಲ್ಲೂಕವು 143 ಹಳ್ಳಿಗಳು, 40 ಗ್ರಾಮ ಪಂಚಾಯತಗಳು, ಮತ್ತು 3 ಹೊಬಳ್ಳಿಗಳನ್ನೊಳಗೊಂಡಿದೆ.
ಕರ್ನಾಟಕ ಸರ್ಕಾರವು ಫೆಬ್ರುವರಿ 8, 2013 ರಂದು ವಾರ್ಷಿಕ ಮುಂಗಡ ಪತ್ರದ ಪ್ರಕಾರ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನಲ್ಲಿ ದೇವರ ಹಿಪ್ಪರಗಿ ನಗರವನ್ನು ಹೊಸ ತಾಲ್ಲೂಕನ್ನಾಗಿ ರಚಿಸಿದೆ.
ಹವಾಮಾನ
- ಬೇಸಿಗೆ-ಚಳಿಗಾಲ- ಜಿಲ್ಲೆಯ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ವಿಜಯಪುರದಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಉಷ್ಣತೆ ಅಂದರೆ 42.7 ಡಿಗ್ರಿವರೆಗೆ(ಎಪ್ರೀಲನಲ್ಲಿ) , ಅತೀ ಕಡಿಮೆ ಅಂದರೆ 9.5 ಡಿಗ್ರಿ ಸೆಲ್ಸಿಯಸವರೆಗೆ (ಡಿಸೆಂಬರನಲ್ಲಿ) ಉಷ್ಣತೆ ದಾಖಲಾಗಿದೆ.
- ಬೇಸಿಗೆ ಕಾಲ - 35 °C - 42 °C ಡಿಗ್ರಿ ಸೆಲ್ಸಿಯಸ್
- ಚಳಿಗಾಲ ಮತ್ತು ಮಳೆಗಾಲ - 18 °C - 28°Cಡಿಗ್ರಿ ಸೆಲ್ಸಿಯಸ್
- ಮಳೆ - ಪ್ರತಿ ವರ್ಷ ಮಳೆ 300 - 600ಮಿಮಿ ಗಳಸ್ಟು ಆಗಿರುತ್ತದೆ.
- ಗಾಳಿ - ಗಾಳಿ ವೇಗ 18.2 ಕಿಮಿ/ಗಂ (ಜೂನ), 19.6 ಕಿಮಿ/ಗಂ (ಜುಲೈ)ಹಾಗೂ 17.5 ಕಿಮಿ/ಗಂ (ಅಗಸ್ಟ್) ಇರುತ್ತದೆ.
ಮಳೆ ಮಾಪನ ಕೇಂದ್ರಗಳು
- ಸಿಂದಗಿ - ಆಲಮೇಲ, ದೇವರಹಿಪ್ಪರಗಿ, ರಾಮನಳ್ಳಿ, ಸಸಬಾಳ, ಕಡ್ಲೇವಾಡ, ಕೊಂಡಗೂಳಿ.
ಸಾಂಸ್ಕೃತಿಕ
ಮುಖ್ಯ ಭಾಷೆ ಕನ್ನಡ. ಆದರೆ ವಿವಿಧ ಸಂಸ್ಕೃತಿಗಳ ಪ್ರಭಾವದಿಂದಾಗಿ ಉರ್ದು, ಮರಾಠಿ ಮಿಶ್ರಿತ ವಿಶಿಷ್ಠವಾದ ಕನ್ನಡ ವಿಜಯಪುರ ಕನ್ನಡವೆಂದೇ ಗುರುತಿಸಲ್ಪಡುತ್ತದೆ. ಒಕ್ಕಲುತನ ಮುಖ್ಯ ಉದ್ಯೋಗ. ಜೊತೆಗೆ ಕೆಲವೊಂದು ಗ್ರಾಮಗಳಲ್ಲಿ ನೇಕಾರಿಕೆ ಇದೆ. ಪ್ರಮುಖ ಬೆಳೆಗಳು: ಜೋಳ, ಸಜ್ಜೆ, ಶೇಂಗಾ,ಚಿಕ್ಕು, ಸೂರ್ಯಕಾಂತಿ, ಉಳ್ಳಾಗಡ್ಡಿ (ಈರುಳ್ಳಿ). ದ್ರಾಕ್ಷಿ, ದಾಳಿಂಬೆ, ನಿಂಬೆ ಹಣ್ಣುಗಳು ಪರರಾಜ್ಯ ಹಾಗೂ ಪರದೇಶಗಳಿಗೆ ರಫ್ತು ಆಗುತ್ತವೆ.
ಭಾಷೆಗಳು
ಪ್ರಮುಖ ಭಾಷೆ ಕನ್ನಡ. ಇದರೊಂದಿಗೆ ಹಿಂದಿ, ಮರಾಠಿ, ಉರ್ದು ಹಾಗೂ ಇಂಗ್ಲೀಷ್ ಭಾಷೆಗಳನ್ನು ಮಾತನಾಡುತ್ತಾರೆ. ಅದರಂತೆ ಲಂಬಾಣಿ ಜನಾಂಗದವರು ಲಂಬಾಣಿ ಭಾಷೆಯನ್ನು ಮಾತನಾಡುತ್ತಾರೆ.
ಆಹಾರ (ಖಾದ್ಯ)
ಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ ಗೋಧಿ, ಅಕ್ಕಿ, ಮೆಕ್ಕೆ ಜೋಳ ಬೇಳೆಕಾಳುಗಳು. ಜವಾರಿ ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. ವಿಜಯಪುರ ದ ಜೋಳದ ರೊಟ್ಟಿ , ಸೇಂಗಾ ಚಟ್ನಿ, ಎಣ್ಣೆ ಬದನೆಕಾಯಿ ಪಲ್ಯ, ಕೆನೆಮೊಸರುಗಳು ಕರ್ನಾಟಕದ ಮೂಲೆ ಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ.
ದೇವಾಲಯಗಳು
ಶ್ರೀ ಮಹಾಲಕ್ಷ್ಮಿ ದೇವಸ್ಥಾನ, ಪಾಂಡುರಂಗ - ವಿಠ್ಠಲ ದೇವಸ್ಥಾನ ಹಾಗೂ ಶ್ರೀ ಹಣಮಂತ ದೇವಾಲಯಗಳನ್ನು ನಿರ್ಮಿಸಿದ್ದಾರೆ.
ಧಾರ್ಮಿಕ ಕೇಂದ್ರಗಳು
ಮಸೀದಿಗಳು
ಮುಸ್ಲಿಂ ಸಮುದಾಯದ ದರ್ಗಾ ಹಾಗೂ ಮಸೀದಿಗಳು ಇವೆ.
ಹಬ್ಬಗಳು
ಪ್ರತಿವರ್ಷ ಶ್ರೀ ಪಾಂಡುರಂಗ ಸಪ್ತಾಹ(ದಿಂಡಿ), ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, ಉರಸು ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ.
ಸಂಸ್ಕೃತಿ

ಅಪ್ಪಟ ಉತ್ತರ ಕರ್ನಾಟಕ ಶೈಲಿಯ ಕಲೆಯನ್ನು ಒಳಗೊಂಡಿದೆ.ಪುರುಷರು ದೋತ್ರ, ನೆಹರು ಅಂಗಿ ಮತ್ತು ರೇಷ್ಮೆ ರುಮಾಲು(ಪಟಕ) ಧರಿಸುತ್ತಾರೆ. ಮಹಿಳೆ ಯರು ಇಲಕಲ್ಲ ಸೀರೆ ಮತ್ತು ಖಾದಿ ಬಟ್ಟೆಗಳನ್ನು ಧರಿಸುತ್ತಾರೆ.ಲಂಬಾಣಿ ಜನಾಂಗವು ವಿಶೇಷವಾಗಿದೆ.
ಕಲೆ
ಲಾವಣಿ ಪದಗಳು, ಡೊಳ್ಳು ಕುಣಿತ, ಗೀಗೀ ಪದಗಳು, ಹಂತಿ ಪದಗಳು ಮತ್ತು ಮೊಹರಮ್ ಹೆಜ್ಜೆ ಕುಣಿತ ಮುಂತಾದವುಗಳು ಈ ನಾಡಿನ ಕಲೆಯಾಗಿದೆ.
ಆರ್ಥಿಕತೆ
ಆರ್ಥಿಕ ವ್ಯವಸ್ಥೆ ಮಧ್ಯಮ ತರಗತಿಯಲ್ಲಿದೆ. ಇದರಿಂದಾಗಿ ಆರ್ಥಿಕವಾಗಿ ಹಿಂದುಳಿದಿದೆ.
ವ್ಯಾಪಾರ
ಸಿಂದಗಿ ನಗರವು ಪ್ರಮುಖ ವ್ಯಾಪಾರ ಮತ್ತು ವಾಣಿಜ್ಯ ಕೇಂದ್ರವಾಗಿದೆ. ಜಿಲ್ಲೆಯ ಆಲಮೇಲ ಪಟ್ಟಣವು ಜವಳಿ ಉದ್ಯಮಕ್ಕೆ ಪ್ರಸಿದ್ದಿಯಾಗಿದೆ.
ಕೃಷಿ
ಕೃಷಿ ಸಿಂದಗಿ ತಾಲ್ಲೂಕಿನ ಮುಖ್ಯ ವೃತ್ತಿ. ಕೃಷಿಗೆ ನೀರಿನ ಸರಬರಾಜು ಭೀಮಾ ನದಿ ಮತ್ತು ಆಲಮಟ್ಟಿಯಲ್ಲಿನ ಕೃಷ್ಣಾ ಅಣೆಕಟ್ಟಿನಿಂದ ಆಗುತ್ತದೆ. ಇಲ್ಲಿ ಬೆಳೆಯಲ್ಪಡುವ ಮುಖ್ಯ ಬೆಳೆಗಳು ಜೋಳ, ನೆಲಗಡಲೆ (ಶೆಂಗಾ), ಸೂರ್ಯಕಾಂತಿ ಮತ್ತು ಕಬ್ಬು.
ನೀರಾವರಿ
ಸಿಂದಗಿ ತಾಲ್ಲೂಕಿನ ಪ್ರತಿಶತ 30 ಭಾಗ ಭೂಮಿ ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ ಕಬ್ಬು , ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ (ಈರುಳ್ಳಿ), ನಿಂಬೆಹಣ್ಣು , ಪಪ್ಪಾಯ, ಅರಿಶಿನ, ನೆಲಕಡಲೆ, ಶೇಂಗಾ(ಕಡಲೆಕಾಯಿ), ಸೂರ್ಯಕಾಂತಿ , ದ್ರಾಕ್ಷಿ , ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ.
ಉದ್ಯೋಗ
ಫಲವತ್ತಾದ ಭೂಮಿ ಇದುವುದರಿಂದ ಸುಮಾರು 70% ಜನಸಂಖ್ಯೆ ಕೃಷಿಯಲ್ಲಿ ನಿರತರಾಗಿದ್ದಾರೆ. ಕೃಷಿಯು ಜಿಲ್ಲೆಯ ಪ್ರಮುಖ ಉದ್ಯೋಗವಾಗಿದೆ. ಇದರೊಂದಿಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ, ಮೀನುಗಾರಿಕೆ, ರೇಷ್ಮೆ ತಯಾರಿಕೆ, ಕುರಿ ಮತ್ತು ಆಡು ಸಾಕಾಣಿಕೆ ಉಪ ಕಸುಬುಗಳಾಗಿವೆ.
ಬೆಳೆಗಳು
ಆಹಾರ ಬೆಳೆಗಳು
ಜೋಳ, ಗೋಧಿ, ಮೆಕ್ಕೆಜೋಳ, ಸಜ್ಜೆ , ಅಕ್ಕಿ , ಕಡಲೆ, ತೊಗರಿ, ಹೆಸರು ಮತ್ತು ಕಡಲೆ ಇತ್ಯಾದಿ
ವಾಣಿಜ್ಯ ಬೆಳೆಗಳು
ದ್ರಾಕ್ಷಿ, ದಾಳಿಂಬೆ, ಚಿಕ್ಕು , ನಿಂಬೆ,ಮಾವು, ಬಾಳೆ,ಬಾರಿಹಣ್ಣು , ಕಬ್ಬು , ಸೂರ್ಯಕಾಂತಿ, ಅರಿಸಿಣ, ಪಪ್ಪಾಯಿ, ಕಲ್ಲಂಗಡಿ, ಉಳ್ಳಾಗಡ್ಡಿ (ಈರುಳ್ಳಿ) ಮತ್ತು ಶೇಂಗಾ(ಕಡಲೆಕಾಯಿ) ಇತ್ಯಾದಿ.
ತರಕಾರಿ ಬೆಳೆಗಳು
ಬದನೆಕಾಯಿ, ಟೊಮ್ಯಾಟೊ, ಹೀರೇಕಾಯಿ, ನುಗ್ಗೆಕಾಯಿ, ಗೆಣಸು, ಗಜ್ಜರಿ, ಮೆಣಸಿನಕಾಯಿ, ಸೌತೆಕಾಯಿ, ಮೊಲಂಗಿ, ಅವರಿಕಾಯಿ, ಪಡವಲಕಾಯಿ, ಕುಂಬಳಕಾಯಿ, ಮೆಂತೆ ಪಲ್ಲೆ ಮತ್ತು ಕೊತಂಬರಿ ಇತ್ಯಾದಿ.
ಸಸ್ಯಗಳು
ಆಲದ ಮರ, ಬೇವಿನ ಮರ, ಜಾಲಿ ಮರ, ಹೈಬ್ರೀಡ್ ಜಾಲಿ ಮರ, ಮಾವಿನ ಮರ ಮತ್ತು ಅರಳಿ ಮರ ಇತ್ಯಾದಿ.
ಪ್ರಾಣಿಗಳು
ತೋಳ, ನರಿ, ಹಾವು, ಮೊಲ, ನವಿಲು, ಬೆಳ್ಳಕ್ಕಿ, ಗುಬ್ಬಿ, ಕಾಗೆ, ಕೋಗಿಲೆ ಇತ್ಯಾದಿ.
ಸಾಕ್ಷರತೆ
ಸಾಕ್ಷರತೆಯು 2011 ವರ್ಷದ ಪ್ರಕಾರ 67%. ಅದರಲ್ಲಿ 77% ಪುರುಷರು ಹಾಗೂ 56% ಮಹಿಳೆಯರು ಸಾಕ್ಷರತೆ ಹೊಂದಿದೆ.
ಶಿಕ್ಷಣ
ಪ್ರಮುಖ ಶಿಕ್ಷಣ ಸಂಸ್ಥೆಗಳು
- ಸರಕಾರಿ ಹಿರಿಯ ಗಂಡು ಮಕ್ಕಳ ಪ್ರಾಥಮಿಕ ಶಾಲೆ, ಸಿಂದಗಿ
- ಸರಕಾರಿ ಹಿರಿಯ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆ, ಸಿಂದಗಿ
- ಸರಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆ, ಸಿಂದಗಿ
- ಸರಕಾರಿ ಉರ್ದು ಪ್ರೌಡ ಶಾಲೆ, ಸಿಂದಗಿ
- ಲಯನ್ಸ್ ಶಾಲೆ, ಸಿಂದಗಿ
- ಆರ್.ಡಿ.ಪಾಟೀಲ ಪದವಿಪೂರ್ವ ಕಲಾ, ವಿಜ್ಣಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಸಿಂದಗಿ
- ಎಚ್.ಜಿ ಪದವಿಪೂರ್ವ ಕಲಾ, ವಿಜ್ಣಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಸಿಂದಗಿ
- ಅಂಜುಮನ್ ಕಲಾ, ವಿಜ್ಣಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಸಿಂದಗಿ
- ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ, ಸಿಂದಗಿ
- ಶ್ರೀ ಜಗದಂಬಾ ಕಲಾ ಮತ್ತು ವಿಜ್ಣಾನ ಮಹಾವಿದ್ಯಾಲಯ, ಹಿಟ್ಟಿನಹಳ್ಳಿ , ಸಿಂದಗಿ
- ಜೆ.ಪಿ.ಪೋರವಾಲ್ ಕಲಾ, ವಿಜ್ಣಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಸಿಂದಗಿ
- ಜೆ.ಪಿ.ಪೋರವಾಲ್ ಬಿ.ಸಿ.ಎ. ಮಹಾವಿದ್ಯಾಲಯ, ಸಿಂದಗಿ
- ಸಿ.ಎಮ್.ಮನಗೂಳಿ ಕಲಾ ಮಹಾವಿದ್ಯಾಲಯ, ಸಿಂದಗಿ
- ಜೆ.ಜೆ ಕಲಾ ಮಹಾವಿದ್ಯಾಲಯ, ಕಲಕೇರಿ, ಸಿಂದಗಿ
- ಶ್ರೀ ಸಿದ್ರಾಮೇಶ್ವರ ಕಲಾ ಮಹಾವಿದ್ಯಾಲಯ, ಮೊರಟಗಿ, ಸಿಂದಗಿ
- ಶ್ರೀ ನೂರೊಂದೇಶ್ವರ ಕೈಗಾರಿಕಾ ತರಬೇತಿ ಕೇಂದ್ರ,ಲೋಣಿ, ಸಿಂದಗಿ
- ಶ್ರೀ ಸಂಗಮೇಶ್ವರ ಕೈಗಾರಿಕಾ ತರಬೇತಿ ಕೇಂದ್ರ,ಲಚ್ಯಾಣ, ಸಿಂದಗಿ
- ಇಂದಿರಾ ಕೈಗಾರಿಕಾ ತರಬೇತಿ ಕೇಂದ್ರ,ಲೋಣಿ, ಸಿಂದಗಿ
- ಗ್ರಾಮೀಣ ವಿದ್ಯಾಭಿವೃದ್ದಿ ಶಿಕ್ಷಣ ಸಂಸ್ಥೆಯ ಪ್ರಾಥಮಿಕ ಶಾಲಾ ಶಿಕ್ಷಕರ ಮಹಾವಿದ್ಯಾಲಯ, ಆಲಮೇಲ, ಸಿಂದಗಿ
- ಸಿಂದಗಿ ತಾಲ್ಲೂಕಾ ಗಂಗಮತಸ್ಥರ ಸಂಸ್ಥೆಯ ಪ್ರಾಥಮಿಕ ಶಾಲಾ ಶಿಕ್ಷಕರ ಮಹಾವಿದ್ಯಾಲಯ, ಸಿಂದಗಿ
- ಶ್ರೀ ಫೂಲಸಿಂಗ್ ನಾರಾಯಣ ಚವ್ಹಾಣ ಸ್ಮಾರಕ ಶಿಕ್ಷಣ ಮಹಾವಿದ್ಯಾಲಯ, ಹಿಟ್ಟಿನಹಳ್ಳಿ, ಸಿಂದಗಿ
- ಶ್ರೀ ಜೆ.ಎಚ್.ಪಟೇಲ ಶಿಕ್ಷಣ ಮಹಾವಿದ್ಯಾಲಯ, ಸಿಂದಗಿ
- ಶ್ರೀ ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯ, ಸಿಂದಗಿ
ಕವಿಗಳು
- ಎಂ.ಎಂ.ಕಲಬುರ್ಗಿ
- ರಮಾನಂದ ತೀರ್ಥರು
- ವಾಸುದೇವ ಬಲವಂತರಾಯ
ಸಂಗೀತಗಾರರು
- ರವೀಂದ್ರ ಹಂದಿಗನೂರ
ರಾಜಕೀಯ
ಸಿಂದಗಿ ವಿಧಾನಸಭಾ ಕ್ಷೇತ್ರವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ 8 ವಿಧಾನ ಸಭಾ ಕ್ಷೆತ್ರಗಳಲ್ಲಿ ಒಂದಾಗಿದೆ. ಸಿಂದಗಿ ಮತಕ್ಷೇತ್ರ(2018)ದಲ್ಲಿ 1,07,407 ಪುರುಷರು, 99,773 ಮಹಿಳೆಯರು ಸೇರಿ ಒಟ್ಟು 2,07,180 ಮತದಾರರಿದ್ದಾರೆ.
ಕ್ಷೇತ್ರದ ಇತಿಹಾಸ
ಕರ್ನಾಟಕದ ಉತ್ತರದ ಗಡಿಯಲ್ಲಿರುವ ಸಿಂದಗಿಯು ಉತ್ತರಕ್ಕೆ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆ, ಪಶ್ಚಿಮಕ್ಕೆ ಇಂಡಿ ತಾಲ್ಲೂಕು, ದಕ್ಷಿಣಕ್ಕೆ ವಿಜಯಪುರ ತಾಲ್ಲೂಕು ಮತ್ತು ಪೂರ್ವಕ್ಕೆ ಅಫಜಲಪೂರ ತಾಲ್ಲೂಕುಗಳಿವೆ.
ಸ್ವಾತಂತ್ರ್ಯ ಹೋರಾಟಗಾರ ವಾಸುದೇವ ಬಲವಂತರಾಯ ಪದಕಿ ಸೆರೆಸಿಕ್ಕ ದೇವರನಾವದಗಿ ದೇವಾಲಯವಿರುವುದು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನಲ್ಲಿ. 12 ನೇ ಶತಮಾನದಲ್ಲಿ ಕಲ್ಯಾಣಿ ಚಾಲುಕ್ಯರಿಂದ ನಿರ್ಮಿಸಲ್ಪಟ್ಟ ದೇವರನಾವದಗಿ ಶ್ರೀ ಸಂಗಮೇಶ್ವರ ದೇವಾಲಯ ಐತಿಹಾಸಿಕ ಪ್ರಸಿದ್ಧಿ ಪಡೆದಿದೆ. ಇದು ಹೈದರಾಬಾದ್ ಕರ್ನಾಟಕ ವಿಮೋಚನಾ ಹೋರಾಟದ ರೂವಾರಿ ರಮಾನಂದ ನೀರ್ಥರ ನೆಲೆಯೂ ಹೌದು.
ಬಸವಾದಿ ಶರಣರ ವಚನಗಳನ್ನು ಸಂರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಜಗದೇವ ಮಲ್ಲಿಬೊಮ್ಮ ಶರಣರ ಆಲಮೇಲ ನೆಲೆಯನ್ನು ಮಡಿಲಲ್ಲಿ ಕಟ್ಟಿಕೊಂಡಿರುವ ಕ್ಷೇತ್ರ ಸಿಂದಗಿ. ಕಬ್ಬು ಬೆಳೆದು, ಸಕ್ಕರೆ ಉತ್ಪಾದಿಸುವ ಭೀಮಾ ತೀರದ ಈ ಕ್ಷೇತ್ರದ ಮತದಾರ ಸತತವಾಗಿ ಮೂರು ಅವಧಿಗೆ ಬಿಜೆಪಿ ಗೆಲ್ಲಿಸಿದ್ದಾನೆ.
ದೇಶಪ್ರೇಮಿ ಸ್ವಾತಂತ್ರ್ಯ ಹೋರಾಟಗಾರ ರಮಾನಂದ ತೀರ್ಥರು, ಬಸವಪ್ರಿಯ ಎಂ.ಎಂ. ಕಲಬುರ್ಗಿ, ರಂಗರತ್ನ ಹಂದಿಗನೂರು ಸಿದ್ರಾಮಪ್ಪ ಹೀಗೆ ಹತ್ತು ಹಲವು ಪ್ರತಿಭೆಗಳಿಗೆ ಜನ್ಮನೀಡಿದ ಸಿಂದಗಿ ಭೀಮಾ ತೀರದ ಸಮೃದ್ಧ ನೀರಾವರಿ ನೆಲ. ಭೀಮಾ ತೀರದಲ್ಲಿ ಕುಡಿಯುವ ನೀರಿಗೆ ಬರ ಬಂದರೂ ರಕ್ತದ ಕೋಡಿ ಮಾತ್ರ ಹರಿಯುತ್ತಲೇ ಇರುತ್ತದೆ. ಗುಂಡಿನ ಸದ್ದು, ರಕ್ತದ ಕೋಡಿ ಹರಿಸುವ ಮೂಲಕ ಭೀಮಾ ತೀರ ಬೇರೆಯೇ ದೃಷ್ಟಿಕೋನಕ್ಕೆ ಕಾರಣವಾಗಿದೆ.
ಸಿಂದಗಿ ಕ್ಷೇತ್ರದಿಂದ 2 ಬಾರಿ ಶಾಸಕರಾಗಿರುವ ರಮೇಶ ಭೂಸನೂರ ಗ್ರಾಮ ಮಟ್ಟದಿಂದ ರಾಜಕೀಯ ಜೀವನಕ್ಕೆ ಕಾಲಿಟ್ಟವರು. ಇವರು ಪಂಚಾಯತ್ ರಾಜ್ ವ್ಯವಸ್ಥೆಯ 3 ಹಂತಗಳಲ್ಲಿ (ಮಂಡಲ ಪಂಚಾಯಿತಿ, ತಾಪಂ, ಜಿಪಂ) ಸದಸ್ಯರಾಗಿ ಆಯ್ಕೆಯಾದವರು. 1987ರಲ್ಲಿ ಮಂಡಲ ಪಂಚಾಯಿತಿ ಸದಸ್ಯರಾಗಿ, ಪ್ರಧಾನ ಆಗಿದ್ದರು. 1995ರಲ್ಲಿ ತಾಪಂ ಸದಸ್ಯ, 2000ದಲ್ಲಿ ಆಲಮೇಲ ಜಿಪಂ ಕ್ಷೇತ್ರದಿಂದ ಪಕ್ಷೇತರ ಸದಸ್ಯರಾಗಿ ಆಯ್ಕೆಯಾಗಿದ್ದರು. 2004ರಲ್ಲಿ ವಿಧಾನಸಭೆ ಪ್ರವೇಶಿಸಲು ಇಂಡಿ ಕ್ಷೇತ್ರದ ಕಾಂಗ್ರೆಸ್ ಆಕಾಂಕ್ಷಿಯಾಗಿದ್ದರು. ಆದರೆ ಟಿಕೆಟ್ ಸಿಗಲಿಲ್ಲ. 2008ರಲ್ಲಿ ಸಿಂದಗಿ ಕ್ಷೇತ್ರದ ಬಿಜೆಪಿಯಿಂದ ಕಣಕ್ಕಿಳಿದು ಮೊದಲ ಶಾಸಕರಾಗಿ ವಿಧಾನಸಭೆ ಮೆಟ್ಟಿಲೇರಿದರು. 2013ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ 2ನೇ ಬಾರಿ ಶಾಸಕರಾದರು.
ವಿಜಯಪುರ ಜಿಲ್ಲೆಯ ವಿಶಿಷ್ಟ ವಿಧಾನಸಭಾ ಕ್ಷೇತ್ರ ಸಿಂದಗಿ. 13 ಚುನಾವಣೆ ಕಂಡಿರುವ ಈ ಕ್ಷೇತ್ರದಲ್ಲಿ ಕಾಂಗ್ರೆಸ್ 7 ವಿಜಯ ಕಂಡಿದ್ದರೂ, ತಲಾ ಒಂದು ಬಾರಿ ಜನತಾ ಪಕ್ಷ, ಜನತಾದಳದ ಅಭ್ಯರ್ಥಿಗಳನ್ನು ಗೆಲ್ಲಿಸಿ ಹಾಗೂ ಹ್ಯಾಟ್ರಿಕ್ ಬಾರಿಸಿರುವ ಬಿಜೆಪಿ ಮೂಲಕ ಕಾಂಗ್ರೆಸ್ಸೇತರ ಭದ್ರಕೋಟೆಯೂ ಎನಿಸಿದೆ. ಒಂದು ಬಾರಿ ಗೆದ್ದವರನ್ನು ಮತ್ತೆ ಗೆಲ್ಲಿಸದ ಕ್ಷೇತ್ರ ಎನಿಸಿದ್ದರೂ, ಸೋತವರನ್ನು ಅನುಕಂಪದಿಂದ ಎರಡನೇ ಸ್ಪರ್ಧೆಯಲ್ಲಿ ಗೆಲ್ಲಿಸಿದ ಇತಿಹಾಸ ಹೊಂದಿದೆ.
ವಿಧಾನಸಭಾ ಚುನಾವಣೆಯಲ್ಲಿ ಸಿಂದಗಿ ವಿಧಾನಸಭೆ ಕ್ಷೇತ್ರದಲ್ಲಿ ಒಂದು ಅವಧಿಗೆ ಗೆದ್ದವರನ್ನು ಮತ್ತೆ ಗೆಲ್ಲಿಸಿದ ಉದಾಹರಣೆ ಇರಲಿಲ್ಲ. ಈ ಕಾರಣಕ್ಕೆ ಜೆಡಿಎಸ್ ಜಿಲ್ಲಾಧ್ಯಕ್ಷ ಹಾಗೂ ಈ ಬಾರಿ ಸ್ಪರ್ಧಾಕಾಂಕ್ಷಿ ಮಾಜಿ ಸಚಿವ ಎಂ.ಸಿ. ಮನಗೂಳಿ ಸತತ ನಾಲ್ಕು ಬಾರಿ ಸೋಲು ಕಂಡಿದ್ದಾರೆ. ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಶರಣಪ್ಪ ಸುಣಗಾರ ಸತತ ಮೂರು ಸೋಲು ಕಂಡಿದ್ದಾರೆ. ಆದರೆ ಕಳೆದ ಬಾರಿ ಬಿಜೆಪಿಯಿಂದ ಎರಡು ಬಾರಿ ಗೆದ್ದಿರುವ ರಮೇಶ ಭೂಸನೂರ ಹೊಸ ದಾಖಲೆ ಬರೆದಿದ್ದಾರೆ. ಮತ್ತೂಂದೆಡೆ ಬಿಜೆಪಿ ಸತತ ಮೂರು ಗೆಲುವು ದಾಖಲಿಸಿ, ಹ್ಯಾಟ್ರಿಕ್ ಸಾಧಿಸಿ ಭದ್ರಕೋಟೆ ನಿರ್ಮಿಸಲು ಕಾರಣವಾದರು. ಭೂಸನೂರ ಅವರಿಗಿಂತ ಮೊದಲು 2004ರಲ್ಲಿ ಅಶೋಕ ಶಾಬಾದಿ ಸಿಂದಗಿ ಕ್ಷೇತ್ರದಲ್ಲಿ ಬಿಜೆಪಿ ಖಾತೆ ತೆರೆದಿದ್ದರು. ಕ್ಷೇತ್ರದ ಮತದಾರರ ಅಂತಿಮ ಕ್ಷಣದವರೆಗೂ ಕ್ಷೇತ್ರದ ಮತದಾರರ ಯಾರ ಪರ ಎಂಬ ಗುಟ್ಟು ರಟ್ಟು ಮಾಡುವುದೇ ಇಲ್ಲ. ಚುನಾವಣಾ ತಜ್ಞರ ಎಲ್ಲ ಸಮೀಕ್ಷೆಗಳನ್ನು ತಲೆ ಕೆಳಗಾಗುವಂತೆ ಫಲಿತಾಂಶ ನೀಡುತ್ತ ಬರುತ್ತಿದ್ದಾನೆ. ಹೀಗಾಗಿ ಈ ಕ್ಷೇತ್ರದಲ್ಲಿ ಮತದಾರ ತನ್ನ ಜಾಣ ನಡೆಯಿಂದ ನಿರಂತರ ತಾನೇ ಗೆಲ್ಲುತ್ತಿದ್ದಾನೆ.
1989ರ ಚುನಾವಣೆಯಲ್ಲಿ ಸೋತಿದ್ದ ಎಂ.ಸಿ.ಮನಗೂಳಿ ಅವರನ್ನು 1994ರಲ್ಲಿ ಜನತಾ ದಳದಿಂದ ಗೆಲ್ಲಿಸಿದ ಮತದಾರ ಮೊದಲ ಬಾರಿ ಶಾಸಕರಾದರೂ ಸಚಿವರಾಗಿ ಸೇವೆ ಸಲ್ಲಿಸಲು ಅವಕಾಶ ಮಾಡಿ ಕೊಟ್ಟಿದ್ದಾರೆ. ಆ ನಂತರ ನಡೆದ ನಾಲ್ಕು ಚುನಾವಣೆಗಳಲ್ಲಿ ಸ್ಪರ್ಧಿಸಿದರೂ ಮನಗೂಳಿ ಅವರಿಗೆ ಕ್ಷೇತ್ರದ ಮತದಾರ ಮಾತ್ರ ಅನುಕಂಪ ತೋರಿಲ್ಲ.
ಕ್ಷೇತ್ರದ ವಿಶೇಷತೆ
- ಕಾಂಗ್ರೇಸಿನ ಸಿ.ಎಮ್.ದೇಸಾಯಿ, ಬಿಜೆಪಿಯ ರಮೇಶ ಭೂಸನೂರ ಮತ್ತು ಜೆಡಿ(ಎಸ್)ನ ಎಂ.ಸಿ.ಮನಗೂಳಿ 2 ಬಾರಿ ಆಯ್ಕೆಯಾಗಿದ್ದು ಬಿಟ್ಟರೆ ಉಳಿದ ಅಭ್ಯರ್ಥಿಗಳು ಕೇವಲ ಒಂದು ಸಲ ಮಾತ್ರ ಆಯ್ಕೆಯಾಗಿದ್ದಾರೆ.
- 2004ರಿಂದ 2013ರವರೆಗೆ ಕ್ಷೇತ್ರವು ಬಿಜೆಪಿ ಪಕ್ಷದ ಹಿಡಿತದಲ್ಲಿತ್ತು.
- ಎಂ.ಸಿ.ಮನಗೂಳಿಯವರು 7 ಸಲ ಸ್ಪರ್ಧಿಸಿ 1994 ಮತ್ತು 2018ರಲ್ಲಿ 2 ಬಾರಿ ಆಯ್ಕೆಯಾಗಿದ್ದು ವಿಶೇಷವಾಗಿ ಉಳಿದ 5 ಬಾರಿ ಎರಡನೇಯ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.
- 1994ರಲ್ಲಿ ಎಂ.ಸಿ.ಮನಗೂಳಿಯವರು ಹೆಚ್.ಡಿ.ದೇವೇಗೌಡ ಸಂಪುಟದಲ್ಲಿ ಸಚಿವರಾಗಿದ್ದರು.
- 2018ರಲ್ಲಿ ಎಂ.ಸಿ.ಮನಗೂಳಿಯವರು ಹೆಚ್.ಡಿ.ಕುಮಾರಸ್ವಾಮಿಯವರ ಸಮ್ಮಿಶ್ರ ಸರಕಾರದ ಸಂಪುಟದಲ್ಲಿ ತೋಟಗಾರಿಕೆ ಸಚಿವರಾಗಿದ್ದರು.
ಜನಪ್ರತಿನಿಧಿಗಳ ವಿವರ
ವರ್ಷ | ವಿಧಾನ ಸಭಾ ಕ್ಷೆತ್ರ | ವಿಜೇತರು | ಪಕ್ಷ | ಮತಗಳು | ಉಪಾಂತ ವಿಜೇತರು | ಪಕ್ಷ | ಮತಗಳು |
ಸಿಂದಗಿ ವಿಧಾನಸಭಾ ಕ್ಷೇತ್ರ | ಕರ್ನಾಟಕ ರಾಜ್ಯ | ||||||
2018 | ಸಿಂದಗಿ ವಿಧಾನಸಭಾ ಕ್ಷೇತ್ರ | ಎಂ.ಸಿ.ಮನಗೂಳಿ | ಜೆ.ಡಿ.ಎಸ್. | 70865 | ರಮೇಶ ಭೂಸನೂರ | ಬಿ.ಜೆ.ಪಿ | 61560 |
2013 | ಸಿಂದಗಿ ವಿಧಾನಸಭಾ ಕ್ಷೇತ್ರ | ರಮೇಶ ಭೂಸನೂರ | ಬಿ.ಜೆ.ಪಿ | 37834 | ಎಂ.ಸಿ.ಮನಗೂಳಿ | ಜೆ.ಡಿ.ಎಸ್. | 37082 |
2008 | ಸಿಂದಗಿ ವಿಧಾನಸಭಾ ಕ್ಷೇತ್ರ | ರಮೇಶ ಭೂಸನೂರ | ಬಿ.ಜೆ.ಪಿ | 35227 | ಎಂ.ಸಿ.ಮನಗೂಳಿ | ಜೆ.ಡಿ.ಎಸ್. | 20466 |
2004 | ಸಿಂದಗಿ ವಿಧಾನಸಭಾ ಕ್ಷೇತ್ರ | ಅಶೋಕ ಶಾಬಾದಿ | ಬಿ.ಜೆ.ಪಿ | 38853 | ಎಂ.ಸಿ.ಮನಗೂಳಿ | ಜೆ.ಡಿ.ಎಸ್. | 29803 |
1999 | ಸಿಂದಗಿ ವಿಧಾನಸಭಾ ಕ್ಷೇತ್ರ | ಶರಣಪ್ಪ ಸುಣಗಾರ | ಕಾಂಗ್ರೇಸ್ | 30432 | ಎಂ.ಸಿ.ಮನಗೂಳಿ | ಸ್ವತಂತ್ರ | 19675 |
1994 | ಸಿಂದಗಿ ವಿಧಾನಸಭಾ ಕ್ಷೇತ್ರ | ಎಂ.ಸಿ.ಮನಗೂಳಿ | ಜೆ.ಡಿ | 45356 | ಡಾ.ರಾಯಗೊಂಡಪ್ಪ ಚೌಧರಿ | ಕಾಂಗ್ರೇಸ್ | 17137 |
1989 | ಸಿಂದಗಿ ವಿಧಾನಸಭಾ ಕ್ಷೇತ್ರ | ಡಾ.ರಾಯಗೊಂಡಪ್ಪ ಚೌಧರಿ | ಕಾಂಗ್ರೇಸ್ | 29798 | ಎಂ.ಸಿ.ಮನಗೂಳಿ | ಜೆ.ಎನ್.ಪಿ | 21169 |
1985 | ಸಿಂದಗಿ ವಿಧಾನಸಭಾ ಕ್ಷೇತ್ರ | ಮಲ್ಲನಗೌಡ ಬಿರಾದಾರ | ಜೆ.ಎನ್.ಪಿ | 31483 | ತಿಪ್ಪಣ್ಣ ಅಗಸರ | ಕಾಂಗ್ರೇಸ್ | 17564 |
1983 | ಸಿಂದಗಿ ವಿಧಾನಸಭಾ ಕ್ಷೇತ್ರ | ನಿಂಗನಗೌಡ ಪಾಟೀಲ | ಕಾಂಗ್ರೇಸ್ | 25778 | ಮಲ್ಲನಗೌಡ ಬಿರಾದಾರ | ಜೆ.ಎನ್.ಪಿ | 18788 |
1978 | ಸಿಂದಗಿ ವಿಧಾನಸಭಾ ಕ್ಷೇತ್ರ | ಮಹಿಬೂಬಸಾಬ್ ಬೆಕಿನಾಳಕರ | ಕಾಂಗ್ರೇಸ್(ಐ) | 19592 | ಶಂಕರಗೌಡ ಪಾಟೀಲ | ಜೆ.ಎನ್.ಪಿ | 18268 |
ಸಿಂದಗಿ ವಿಧಾನಸಭಾ ಕ್ಷೇತ್ರ | ಮೈಸೂರು ರಾಜ್ಯ | ||||||
1972 | ಸಿಂದಗಿ ವಿಧಾನಸಭಾ ಕ್ಷೇತ್ರ | ಎಸ್.ವಾಯ್.ಪಾಟೀಲ | ಎನ್.ಸಿ.ಓ | 17516 | ಮಹಿಬೂಬಸಾಬ್ ಬೆಕಿನಾಳಕರ | ಕಾಂಗ್ರೇಸ್ | 16538 |
1967 | ಸಿಂದಗಿ ವಿಧಾನಸಭಾ ಕ್ಷೇತ್ರ | ಸಿ.ಎಮ್.ದೇಸಾಯಿ | ಕಾಂಗ್ರೇಸ್ | 16668 | ಎಸ್.ವಾಯ್.ಪಾಟೀಲ | ಸ್ವತಂತ್ರ | 13298 |
1962 | ಸಿಂದಗಿ ವಿಧಾನಸಭಾ ಕ್ಷೇತ್ರ | ಸಿ.ಎಮ್.ದೇಸಾಯಿ | ಕಾಂಗ್ರೇಸ್ | 14012 | ಸಿದ್ದಪ್ಪ ರಡ್ಡೆವಾಡಗಿ | ಎಸ್.ಡಬ್ಲೂ.ಎ | 7432 |
1957 | ಸಿಂದಗಿ ವಿಧಾನಸಭಾ ಕ್ಷೇತ್ರ | ಎಸ್.ವಾಯ್.ಪಾಟೀಲ | ಕಾಂಗ್ರೇಸ್ | 10149 | ಗೋವಿಂದಪ್ಪ ಕೊಣ್ಣೂರ | ಸ್ವತಂತ್ರ | 7739 |
ಸಿಂದಗಿ ವಿಧಾನಸಭಾ ಕ್ಷೇತ್ರ | ಬಾಂಬೆ ರಾಜ್ಯ | ||||||
1951 | ಸಿಂದಗಿ ವಿಧಾನಸಭಾ ಕ್ಷೇತ್ರ | ಜಟ್ಟೆಪ್ಪ ಕಬಾಡಿ | ಕಾಂಗ್ರೇಸ್ | 30231 | ಬಬುರಾಮ್ ಹುಜರೆ | ಎಸ್.ಸಿ.ಎಫ್ | 5457 |
ಆರೋಗ್ಯ
ಸಿಂದಗಿ ನಗರದಲ್ಲಿ ಸರಕಾರಿ ತಾಲ್ಲೂಕು ಆಸ್ಪತ್ರೆಯಿದೆ.
ವಿದ್ಯುತ್ ಪರಿವರ್ತನಾ ಕೇಂದ್ರಗಳು
ಸಿಂದಗಿ ತಾಲ್ಲೂಕಿನ ವಿದ್ಯುತ್ ಪರಿವರ್ತನಾ ಕೇಂದ್ರಗಳು
- 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ಸಿಂದಗಿ
- 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ಆಲಮೇಲ
- 110 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ದೇವರ ಹಿಪ್ಪರಗಿ
- 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ಕಲಕೇರಿ
- 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ಕೊರವಾರ
- 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ಮೊರಟಗಿ
- 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ಕಡ್ಲೇವಾಡ
- 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ಗೊಲಗೇರಿ
- 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ಆಲಮೇಲ
- 33 ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ದೇವರ ಹಿಪ್ಪರಗಿ
ಬ್ಯಾಂಕಗಳು
- ಯೂನಿಯನ್ ಬ್ಯಾಂಕ, ಸಿಂದಗಿ
- ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ, ಸಿಂದಗಿ
- ಡಿ.ಸಿ.ಸಿ. ಬ್ಯಾಂಕ, ಸಿಂದಗಿ
- ಪ್ರಾಥಮಿಕ ಕೃಷಿ ಪತ್ತಿನ ಬ್ಯಾಂಕ, ಸಿಂದಗಿ
- ಸ್ಟೇಟ್ ಬ್ಯಾಂಕ ಆಫ್ ಇಂಡಿಯಾ, ಸಿಂದಗಿ
- ಸಿಂಡಿಕೇಟ್ ಬ್ಯಾಂಕ, ಸಿಂದಗಿ
- ಕಾರ್ಪೋರೇಶನ್ ಬ್ಯಾಂಕ, ಸಿಂದಗಿ
- ಕೆನರಾ ಬ್ಯಾಂಕ, ಸಿಂದಗಿ
- ಸ್ಟೇಟ್ ಬ್ಯಾಂಕ್ ಆಫ್ ಮೈಸೂರ, ಸಿಂದಗಿ
- ಪ್ರಗತಿ ಸಹಕಾರಿ ಬ್ಯಾಂಕ್, ದೇವರ ಹಿಪ್ಪರಗಿ, ಸಿಂದಗಿ, ಬಿಜಾಪೂರ
- ಸಿಂದಗಿ ಅರ್ಬನ್ ಸಹಕಾರಿ ಬ್ಯಾಂಕ್, ಸಿಂದಗಿ, ಬಿಜಾಪೂರ
- ಶ್ರೀ ಬಸವೇಶ್ವರ ಪಟ್ಟಣ ಸಹಕಾರಿ ಬ್ಯಾಂಕ್, ಸಿಂದಗಿ, ಬಿಜಾಪೂರ
- ಆಲಮೇಲ ಅರ್ಬನ್ ಸಹಕಾರಿ ಬ್ಯಾಂಕ್, ಆಲಮೇಲ, ಸಿಂದಗಿ, ಬಿಜಾಪೂರ
ಖಜಾನೆ ಕಚೇರಿಗಳು
- ಸಿಂದಗಿ
ಪಟ್ಟಣ ಪಂಚಾಯತಿಗಳು
- ಆಲಮೇಲ
- ಸಿಂದಗಿ
- ದೇವರ ಹಿಪ್ಪರಗಿ
ಸಿಂದಗಿ ತಾಲ್ಲೂಕಿನ ಗ್ರಾಮ ಮತ್ತು ಹಳ್ಳಿಗಳು
ಸಿಂದಗಿ ತಾಲ್ಲೂಕಿನ ಗ್ರಾಮ ಪಂಚಾಯತಿಗಳು
ಆಲಮೇಲ, ಅಸ್ಕಿ, ಬಾಗಲೂರ, ಬಳಗಾನೂರ, ಬೊಮ್ಮನಹಳ್ಳಿ, ಬಂದಾಳ, ಬೆಕಿನಾಳ, ಬ್ಯಾಕೋಡ, ಚಾಂದಕವಠೆ, ಚಟ್ಟರಕಿ, ಚಿಕ್ಕರೂಗಿ, ದೇವರಹಿಪ್ಪರಗಿ, ದೇವಣಗಾಂವ, ದೇವರನಾವದಗಿ, ಗಬಸಾವಳಗಿ, ಗೋಲಗೇರಿ, ಗುಬ್ಬೇವಾಡ, ಹಂದಿಗನೂರ, ಹರನಾಳ, ಹಿಟ್ನಳ್ಳಿ , ಹೊನ್ನಳ್ಳಿ, ಹುಣಶ್ಯಾಳ, ಜಲವಾಡ, ಕಡಣಿ, ಕಲಕೇರಿ, ಕನ್ನೊಳ್ಳಿ, ಕೆರುಟಗಿ, ಕೊಕಟನೂರ, ಕೊಂಡಗೂಳಿ, ಕೋರಹಳ್ಳಿ, ಕೊರವಾರ, ಮಲಘಾಣ, ಮಣ್ಣೂರ, ಮೊರಟಗಿ, ಮುಳಸಾವಳಗಿ, ರಾಂಪೂರ, ಸುಂಗಠಾಣ, ಯರಗಲ್ಲ ಬಿ.ಕೆ., ಯಲಗೋಡ, ಯಂಕಂಚಿ, ನಾಗಾವಿ ಬಿ.ಕೆ., ಕಕ್ಕಳಮೇಲಿ, ಗುತ್ತರಗಿ, ರಾಮನಳ್ಳಿ.
ಸಿಂದಗಿ ತಾಲ್ಲೂಕಿನ ನೆಮ್ಮದಿ ಕೇಂದ್ರಗಳು
ಸಿಂದಗಿ, ದೇವರ ಹಿಪ್ಪರಗಿ, ಆಲಮೇಲ.
ಕಂದಾಯ ಕಚೇರಿಗಳು
ಸಿಂದಗಿ, ದೇವರ ಹಿಪ್ಪರಗಿ, ಆಲಮೇಲ.
ತಾಲ್ಲೂಕು ಪಂಚಾಯತಿಗಳು
- ತಾಲ್ಲೂಕು ಪಂಚಾಯತ, ಸಿಂದಗಿ
ಸಿಂದಗಿ ತಾಲ್ಲೂಕಿನಲ್ಲಿ ಒಟ್ಟು 30 ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರಗಳಿವೆ.
ಸಿಂದಗಿ ತಾಲ್ಲೂಕು ಪಂಚಾಯತ ಚುನಾವಣಾ ಕ್ಷೇತ್ರಗಳು
ಉಚಿತ ಪ್ರಸಾದನಿಲಯಗಳು
ಸಿಂದಗಿ,ಆಲಮೇಲ, ಬಳಗಾನೂರ, ಮಲಘಾಣ, ಬಿ.ಬಿ.ಇಂಗಳಗಿ, ಅಸ್ಕಿ, ಕಲಕೇರಿ, ದೇವರಹಿಪ್ಪರಗಿ, ಮುಳಸಾವಳಗಿ, ಹಿಟ್ನಳ್ಳಿ, ಜಾಲವಾದ
ದೂರವಾಣಿ ಸಂಕೇತಗಳು
- ಸಿಂದಗಿ - 08488
- ದೇವರ ಹಿಪ್ಪರಗಿ - 08424
ದೂರವಾಣಿ ವಿನಿಮಯ ಕೇಂದ್ರಗಳು
ಸಿಂದಗಿ ತಾಲ್ಲೂಕಿನಲ್ಲಿರುವ ದೂರವಾಣಿ ವಿನಿಮಯ ಕೇಂದ್ರಗಳು
ಆಲಮೇಲ, ಬಾಗಲೂರ, ದೇವರಹಿಪ್ಪರಗಿ, ದೇವಣಗಾಂವ, ಗೊಲಗೇರಿ, ಹೊನ್ನಳ್ಳಿ, ಜಲವಾಡ, ಕಲಕೇರಿ, ಕನ್ನೊಳ್ಳಿ, ಕೊರವಾರ, ಮೊರಟಗಿ, ರಾಂಪುರ, ಸಿಂದಗಿ, ಯರಗಲ್ಲ ಬಿ.ಕೆ., ಯಂಕಂಚಿ.
ಅಂಚೆ ಕಚೇರಿ ಮತ್ತು ಅಂಚೆ ಸೂಚ್ಯಂಕ ಸಂಖ್ಯೆಗಳು
- ಸಿಂದಗಿ - 586128 (ಅಸಂತಾಪುರ, ಬಳಗಾನೂರ, ಬಂದಾಳ, ಬನಹಟ್ಟಿ ಪಿ.ಎ., ಬೊರಗಿ, ಬ್ಯಾಕೋಡ, ಚಾಂದಕವಟೆ, ಚಿಕ್ಕ ಸಿಂದಗಿ, ಗಣಿಹಾರ, ಗೋಲಗೇರಿ, ಗುಬ್ಬೆವಾಡ, ಹೊನ್ನಳ್ಳಿ, ಖೈನೂರ, ಖಾನಾಪುರ, ಮಾಡಬಾಳ, ಮಲಘಾಣ, ಸಸಬಾಳ, ಸೋಮಜಾಳ, ಸುಂಗಠಾಣ, ಯಂಕಂಚಿ).
- ಮೊರಟಗಿ - 586123 (ನಾಗಾವಿ ಬಿ.ಕೆ., ಯರಗಲ್ಲ ಬಿ.ಕೆ., ಆಹೇರಿ, ಬಾಗಲೂರ, ಬಂಕಲಗಿ, ಬಂಟನೂರ, ಗಬಸಾವಳಗಿ, ಗೊರಗುಂಡಗಿ, ಕಕ್ಕಳಮೇಲಿ).
- ಕೊರವಾರ - 586120 (ಕೊಂಡಗೂಳಿ, ಮಣ್ಣೂರ, ಯಲಗೋಡ, ಹಂಚಳಿ, ಬಿ.ಬಿ.ಇಂಗಳಗಿ, ಹಂದಿಗನೂರ, ಜಲವಾಡ).
- ಕಲಕೇರಿ - 586118 (ಹುಣಶ್ಯಾಳ(ಎಸ್.ಡಿ.ಜಿ), ಕೆರೂಟಗಿ, ಕೆಸರಟ್ಟಿ, ನೀರಲಗಿ, ತಿಳಿಗೂಳ, ಆಲಗೂರ, ಅಸ್ಕಿ, ಬೆಕಿನಾಳ, ಬಿಂಜಳಭಾವಿ).
- ದೇವರಹಿಪ್ಪರಗಿ - 586115 (ಬೋಮ್ಮನಜೋಗಿ, ಬೂದಿಹಾಳ, ಹರನಾಳ, ಇಂಗಳಗಿ, ಕನ್ನೋಳ್ಳಿ, ಕೊಕಟನೂರ, ಮಾರ್ಕಬ್ಬಿನಹಳ್ಳಿ, ಓತಿಹಾಳ, ಸಾತಿಹಾಳ).
- ಆಲಮೇಲ - 586202 (ಗುಂಡಗಿ, ಹಿಕ್ಕನಗುತ್ತಿ, ಹೂವಿನಹಳ್ಳಿ, ಕಡಣಿ, ಕಲಹಳ್ಳಿ, ಕೊರಹಳ್ಳಿ, ಕುರಬತಹಳ್ಳಿ, ಮಾದನಹಳ್ಳಿ(ಮಾದ್ನಳ್ಳಿ), ರಾಂಪುರ ಪಿ.ಎ.)
- ದೇವಣಗಾಂವ - 586206 (ಬೊಮ್ಮನಹಳ್ಳಿ, ದೇವರನಾವದಗಿ, ಕಡ್ಲೇವಾಡ ಪಿ.ಎ., ಕುಮಸಗಿ).
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು(ಬ್ಯಾಂಕಗಳು)
ಸಿಂದಗಿ ತಾಲ್ಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು(ಬ್ಯಾಂಕಗಳು)
ಆಲಗೂರ, ಆಲಮೇಲ, ಅಸಂತಾಪುರ, ಅಸ್ಕಿ, ಬಬಲೇಶ್ವರ, ಬಾಗಲೂರ, ಬಂಟನೂರ, ಬಿ.ಬಿ.ಇಂಗಳಗಿ, ಬಿಂಜಳಭಾವಿ, ಬೊಮ್ಮನಹಳ್ಳಿ, ಬೊಮ್ಮನಜೋಗಿ, ಬೊರಗಿ, ಬ್ಯಾಕೋಡ, ಬೆಕಿನಾಳ, ಚಾಂದಕವಟೆ, ಚಟ್ಟರಕಿ, ಚಿಕ್ಕ ರೂಗಿ, ಚಿಕ್ಕ ಸಿಂದಗಿ, ದೇವಣಗಾಂವ, ದೇವರಹಿಪ್ಪರಗಿ, ದೇವರನಾವದಗಿ, ಗಬಸಾವಳಗಿ, ಗಣಿಹಾರ, ಗೋಲಗೇರಿ, ಗುಂಡಗಿ, ಗುತ್ತರಗಿ, ಗುಬ್ಬೇವಾಡ, ಹಂದಿಗನೂರ, ಹಲಗುಣಕಿ, ಹಿಕ್ಕನಗುತ್ತಿ, ಹಿಟ್ಟಿನಹಳ್ಳಿ, ಜಲವಾಡ, ಕಡಣಿ, ಕಲಕೇರಿ, ಕನ್ನೊಳ್ಳಿ, ಖೈನೂರ, ಕೊಂಡಗೂಳಿ, ಕೊರಹಳ್ಳಿ, ಕೊರವಾರ,ಮಾಡಬಾಳ, ಮಣ್ಣೂರ, ಮೊರಟಗಿ, ಮುಳಸಾವಳಗಿ, ಮಲಘಾಣ, ಓತಿಹಾಳ, ಪಡಗಾನೂರ, ಸಿಂದಗಿ, ಸೋಮಜಾಳ, ಸುಂಗಠಾಣ, ಸುರಗಿಹಳ್ಳಿ, ತಿಳಗೂಳ, ಯಲಗೋಡ, ಯಂಕಂಚಿ, ಯರಗಲ್ಲ ಬಿ.ಕೆ., ಯರಗಲ ಕೆ.ಡಿ..
ಕೆರೆಗಳು
ಸಿಂದಗಿ ತಾಲ್ಲೂಕಿನ ಕೆರೆಗಳು
ಕಡ್ಲೇವಾಡ, ದೇವೂರ-ಹಾಳಯರನಾಳ, ಕುದರಗೊಂಡ, ಹುಣಶ್ಯಾಳ, ಬೂದಿಹಾಳ, ಅಸ್ಕಿ, ಯಕ್ಕಂಚಿ, ಇಂಗಳಗಿ, ಪುರದಾಳ, ಬೊಮ್ಮನಜೋಗಿ.
ಸಿಂದಗಿ ತಾಲ್ಲೂಕಿನ ಜಿನುಗು ಕೆರೆಗಳು
ದೇವರಹಿಪ್ಪರಗಿ-1, ದೇವರಹಿಪ್ಪರಗಿ-2, ದೇವರಹಿಪ್ಪರಗಿ-3, ಮುಳಸಾವಳಗಿ, ಚಿಕ್ಕ ರೂಗಿ, ಪಡಗಾನೂರ -1, ಪಡಗಾನೂರ ರಾಮತೀರ್ಥ, ಗುಬ್ಬೆವಾಡ - ಸಾಸಬಾಳ, ಮಣ್ಣೂರ.
ಕಾಲುವೆಗಳು
- ತಾರಾಪುರ ಏತ ನೀರಾವರಿ ಯೋಜನೆ, ಸಿಂದಗಿ, ವಿಜಯಪುರ.
- ಕಡ್ಲೇವಾಡ ಏತ ನೀರಾವರಿ ಯೋಜನೆ, ಸಿಂದಗಿ, ವಿಜಯಪುರ.
- ದೇವಣಗಾಂವ ಏತ ನೀರಾವರಿ ಯೋಜನೆ, ಸಿಂದಗಿ, ವಿಜಯಪುರ.
- ಬಗಲೂರ ಏತ ನೀರಾವರಿ ಯೋಜನೆ, ಸಿಂದಗಿ, ವಿಜಯಪುರ.
ಕೃಷಿ ಮಾರುಕಟ್ಟೆಗಳು
ಸಿಂದಗಿ ತಾಲ್ಲೂಕಿನ ಕೃಷಿ ಮಾರುಕಟ್ಟೆಗಳು
- ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಸಿಂದಗಿ
- ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ದೇವರ ಹಿಪ್ಪರಗಿ
- ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಮೊರಟಗಿ
- ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಆಲಮೇಲ
ರೈತ ಸಂಪರ್ಕ ಕೇಂದ್ರಗಳು
- ಸಿಂದಗಿ - ಆಲಮೇಲ, ದೇವರಹಿಪ್ಪರಗಿ.
ಹಾಲು ಉತ್ಪಾದಕ ಘಟಕಗಳು
ಕೆ.ಎಮ್.ಎಫ್.(ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ)ನ ಸಹಾಯದೊಂದಿಗೆ ವಿಜಯಪುರ ನಗರದ ಹೊರವಲಯದ ಭೂತನಾಳ ಗ್ರಾಮದಲ್ಲಿ ವಿಜಯಪುರ ಮತ್ತು ಬಾಗಲಕೋಟ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟವನ್ನು ಸ್ಥಾಪಿಸಲಾಗಿದೆ. ವಿಜಯಪುರ ಮತ್ತು ಬಾಗಲಕೋಟ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ, ಭೂತನಾಳ, ವಿಜಯಪುರ. ಇದನ್ನು ವಿಜಯಪುರ ಡೈರಿಯಂತಲು ಕರೆಯುತ್ತಾರೆ. ಡೈರಿಯು ಜಿಲ್ಲೆಯಲ್ಲಿ ಸುಮಾರು 100ಕ್ಕೂ ಹೆಚ್ಚು ಡೈರಿ ಸಹಕಾರಿ ಸಂಘಗಳನ್ನು ಹೊಂದಿದೆ.
ಸಿಂದಗಿ ತಾಲ್ಲೂಕಿನ ಹಾಲು ಉತ್ಪಾದಕ ಸಹಕಾರಿ ಸಂಘಗಳು
ಆಲಮೇಲ, ಪಡಗಾನೂರ, ಯಂಕ್ಕಂಚಿ, ತಾರಾಪುರ, ಮೊರಟಗಿ, ಮಂಗಳೂರ, ಮಲಘಾಣ, ಖಾನಾಪುರ, ದೇವನಗಾಂವ, ಚಿಕ್ಕಸಿಂದಗಿ, ಬೂದಿಹಾಳ, ಬ್ಯಾಕೋಡ, ಆಹೇರಿ, ಕೊರಳ್ಳಿ.
ಆರಕ್ಷಕ (ಪೋಲಿಸ್) ಠಾಣೆ
ಸಿಂದಗಿ ನಗರದ ಪೋಲಿಸ್ ಠಾಣೆಯು ಸುತ್ತಲಿನ ಸುಮಾರು 50ಕ್ಕೂ ಹೆಚ್ಚು ಹಳ್ಳಿಗಳ ವಾಪ್ತಿ ಹೊಂದಿದೆ.
ಸಿಂದಗಿ ತಾಲ್ಲೂಕಿನ ಪೋಲಿಸ್ ಠಾಣೆಗಳು
- ಪೋಲಿಸ್ ಠಾಣೆ, ಆಲಮೇಲ
- ಪೋಲಿಸ್ ಠಾಣೆ, ದೇವರ ಹಿಪ್ಪರಗಿ
- ಪೋಲಿಸ್ ಠಾಣೆ, ಕಲಕೇರಿ
- ಪೋಲಿಸ್ ಠಾಣೆ, ಸಿಂದಗಿ
ಸಕ್ಕರೆ ಕಾರ್ಖಾನೆಗಳು
ಪ್ರಾಥಮಿಕ ಆರೋಗ್ಯ ಕೇಂದ್ರಗಳು
ಸಿಂದಗಿ ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳು
ಆಲಮೇಲ, ಕಲಕೇರಿ, ದೇವರಹಿಪ್ಪರಗಿ, ಮೊರಟಗಿ, ಯಂಕಂಚಿ, ಅಸ್ಕಿ, ಬಳಗಾನೂರ, ಚಾಂದಕವಠೆ, ಕೊರವಾರ, ಮಲಘಾಣ, ಗೊಲಗೇರಿ.((ನಾಗಾವಿ.ಬಿ.ಕೆ)).
ಪಶು ಆಸ್ಪತ್ರೆಗಳು
- ಪಶು ಆಸ್ಪತ್ರೆ, ಸಿಂದಗಿ
- ಪಶು ಆಸ್ಪತ್ರೆ, ದೇವರಹಿಪ್ಪರಗಿ
- ಪಶು ಆಸ್ಪತ್ರೆ, ಆಲಮೇಲ
ಪಶು ಚಿಕಿತ್ಸಾಲಯಗಳು
ಕೊರವಾರ, ಮೊರಟಗಿ, ಯಂಕಂಚಿ, ಕಲಕೇರಿ, ಕನ್ನೊಳ್ಳಿ , ಹೊನ್ನಳ್ಳಿ , ದೇವಣಗಾಂವ.
ಪ್ರಾಥಮಿಕ ಪಶು ಚಿಕಿತ್ಸಾಲಯಗಳು
ಸುಂಗಠಾಣ, ಗುಬ್ಬೇವಾಡ, ಗುಟ್ಟರಗಿ, ಕಕ್ಕಳಮೇಲಿ, ದೇವರನಾವದಗಿ, ಮಲಘಾಣ, ಮುಳಸಾವಳಗಿ, ಯಲಗೋಡ, ಅಸ್ಕಿ, ಕೊಂಡಗೂಳಿ, ಗೊಲಗೇರಿ, ತಿಳಗೋಳ.
ನ್ಯಾಯಾಲಯಗಳು
- ತಾಲೂಕು ಸಿವಿಲ್ ನ್ಯಾಯಾಲಯ, ಸಿಂದಗಿ
ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳು
ರಾಷ್ಟ್ರೀಯ ಹೆದ್ದಾರಿಗಳು
ರಾಷ್ಟ್ರೀಯ ಹೆದ್ದಾರಿ - 218 => ಹುಬ್ಬಳ್ಳಿ - ನವಲಗುಂದ - ನರಗುಂದ - ಬಾಗಲಕೋಟ (ಗದ್ದನಕೇರಿ ಕ್ರಾಸ್) - ಬೀಳಗಿ(ಕ್ರಾಸ್) - ವಿಜಯಪುರ - ಸಿಂದಗಿ - ಜೇವರ್ಗಿ - ಗುಲಬುರ್ಗಾ - ಹುಮ್ನಾಬಾದ್.
ರಾಜ್ಯ ಹೆದ್ದಾರಿಗಳು
ರಾಜ್ಯ ಹೆದ್ದಾರಿ - 16 => ಸಿಂದಗಿ - ಶಹಾಪುರ - ಯಾದಗಿರಿ - ಗುರಮಟ್ಕಲ್.
ರಾಜ್ಯ ಹೆದ್ದಾರಿ - 41 => ಶಿರಾಡೋಣ - ಚಡಚಣ - ಝಳಕಿ - ಇಂಡಿ - ದೇವರ ಹಿಪ್ಪರಗಿ - ಹೂವಿನ ಹಿಪ್ಪರಗಿ - ಮುದ್ದೇಬಿಹಾಳ - ನಾರಾಯಣಪುರ - ಲಿಂಗಸಗೂರ.
ರಾಜ್ಯ ಹೆದ್ದಾರಿ - 124 => ಅಫಜಲಪುರ - ಆಲಮೇಲ - ಸಿಂದಗಿ - ತಾಳಿಕೋಟ - ಮಿಣಜಗಿ - ಢವಳಗಿ - ರೂಡಗಿ - ಬಸವನ ಬಾಗೇವಾಡಿ - ಕೊಲ್ಹಾರ - ಬೀಳಗಿ.
ಸರಕಾರಿ ವಾಹನ ನಿಲ್ದಾಣಗಳು
- ಸಿಂದಗಿ - ದೇವರ ಹಿಪ್ಪರಗಿ, ಆಲಮೇಲ, ಕಲಕೇರಿ.
ಚಿತ್ರ ಮಂದಿರಗಳು
- ಪ್ರಶಾಂತ ಚಿತ್ರ ಮಂದಿರ
- ವಿನಾಯಕ ಚಿತ್ರ ಮಂದಿರ
- ಆನಂದ ಚಿತ್ರ ಮಂದಿರ
ದಿಕ್ಕುಗಳು
