ಕೊಡಗು ಜಿಲ್ಲೆ

ಭೂಲಕ್ಷ್ಮಿ ಯು ದೇವರ ಸನ್ನಿಧಾನದಲ್ಲಿರಬೇಕೆಂಬ ಬಯಕೆಯಿಂದ ಗಂಭೀರ-ವೈಯಾರದಿಂದ ಬಂದು ನೆಲೆಸಿದ ಕ್ಷೇತ್ರ; ಭೂಮಿಯನ್ನು ತಣಿಸಿ ಜನರಿಗೆ ಅನ್ನವನ್ನೀಯುವ ಕಾವೇರಿ ಹುಟ್ಟಿ ಹರಿಯಲಾರಂಭಿಸುವ ಪ್ರದೇಶ ಕೊಡಗು ಎಂದು ಕವಿವರ್ಯ ಪಂಜೆ ಮಂಗೇಶರಾಯರು ತಮ್ಮ ಹುತ್ತರಿ ಹಾಡು ಎಂಬ ಪದ್ಯದಲ್ಲಿ ಬಣ್ಣಿಸಿದ್ದಾರೆ. ಕರ್ನಾಟಕ ರಾಜ್ಯದ ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಹಸಿರು ವನರಾಜಿಯಿಂದ, ತೊರೆ, ಝರಿ, ನದಿಗಳಿಂದ ಕೂಡಿದ ಜಿಲ್ಲೆ ಕೊಡಗನ್ನು ಗುರುತಿಸಲು ಇದಕ್ಕಿಂತ ಬೇರೆ ವರ್ಣನೆ ಬೇಕಾಗಿಲ್ಲ.

ಕೊಡಗಿನಲ್ಲಿ ಕಾಫೀ ಪ್ಲ್ಯಾಂಟೇಶನ್

ಎಲ್ಲಿ ಭೂರಮೆ ದೇವ ಸನ್ನಿಧಿ ಬಯಸಿ ಬಿಮ್ಮನೆ ಬಂದಳೋ

ಎಲ್ಲಿ ಮೋಹನ ಗಿರಿಯ ಬೆರಗಿನ ರೂಪಿನಿಂದಲಿ ನಿಂದಳೋ

ಎಲ್ಲಿ ಮುಗಿಲಲಿ ಮಿಂಚಿನೋಲ್ ಕಾವೇರಿ ಹೊಳೆ ಹೊಳೆ ಹೊಳೆವಳೋ

ಎಲ್ಲಿ ನೆಲವನು ತಣಿಸಿ ಜನಮನ ಹೊಲದ ಕಳೆ ಕಳೆ ಕಳೆವಳೋ

ಅಲ್ಲೆ ಆ ಕಡೆ ನೋಡಲಾ

ಅಲ್ಲೆ ಕೊಡಗರ ನಾಡಲಾ

ಅಲ್ಲೆ ಕೊಡಗರ ಬೀಡಲಾ

ಕೊಡಗಿಗೆ ಕೂರ್ಗ್ (Coorg) ಎಂಬ ಆಂಗ್ಲೀಯ ಬಳಕೆಯೂ ಇದೆ. ಭಾರತದ 'ಸ್ಕಾಟ್ ಲ್ಯಾಂಡ್' ಎಂಬ ಹೆಸರೂ ಇದಕ್ಕಿದೆ. 'ಕೊಡಗು' - ಕನ್ನಡದ ಕುಡು, ಎಂದರೆ ಗುಡ್ಡ ಅಥವಾ ಬೆಟ್ಟದ ಪ್ರದೇಶ ಎಂಬುದರಿಂದ ಬಂದಿರಬಹುದೆಂದು ಭಾವಿಸಲಾಗಿದೆ.

ಇಲ್ಲಿಯ ಜನ

ಕೊಡವರು ಇಲ್ಲಿಯ ಮುಖ್ಯ ಜನರು. ಕೊಡವ ತಕ್ಕ್ ಕೊಡಗಿನಲ್ಲಿ ಪ್ರಮುಖವಾಗಿ ಬಳಸಲಾಗುವ ಭಾಷೆ. ಕನ್ನಡ ಆಡಳಿತ ಭಾಷೆ. ಇದಲ್ಲದೆ ಮಲಯಾಳಂ,ತಮಿಳು, ಅರೆಗನ್ನಡ, ತುಳು,ರಾವುಲ, ಮುಂತಾದವನ್ನು ಆಡುವವರು ಇಲ್ಲಿರುವರು. ಕೊಡವ ಭಾಷೆ ಅಥವಾ ಕೊಡವ ತಕ್ಕ್‌ಗೆ ಲಿಪಿಯಿಲ್ಲ, ಇದನ್ನು ಸುಮಾರು ೫೦೦,೦೦೦ ಜನರು ಮಾತನಾಡಲು ಬಳಸುತ್ತಾರೆ. ಯೆರವೆರು (ಅಥವಾ) ರಾವುಲರು, ಕೊಡಗಿನಲ್ಲಿ ಹಾಗೂ ಕೇರಳದಲ್ಲಿ (ಇಲ್ಲಿ ಆದಿಯರೆಂದು ಕರೆಯಲ್ಪಡುತ್ತಾರೆ) ಇದ್ದಾರೆ. ಇವರು ಪ್ರಮುಖವಾಗಿ ಹಿಂದೂಗಳು ಹಾಗೂ ವ್ಯವಸಾಯಗಾರರು.

ಭೂಗೋಳ

ಕೊಡಗು ತನ್ನ ಪಶ್ಚಿಮ ಸರಹದ್ದಿನಲ್ಲಿ ದಕ್ಷಿಣ ಕನ್ನಡದ ಜಿಲ್ಲೆಯನ್ನೂ, ಉತ್ತರಕ್ಕೆ ಹಾಸನ, ಪೂರ್ವಕ್ಕೆ ಮೈಸೂರು, ದಕ್ಷಿಣಕ್ಕೆ ಕೇರಳದ ಕಣ್ಣೂರು ಜಿಲ್ಲೆಗಳನ್ನೂ ಹೊಂದಿದೆ. ಇಲ್ಲಿಯ ಜನಸಂಖ್ಯೆ ೨೦೧೧ ಜನಗಣತಿಯಂತೆ ೫,೫೪,೫೧೯ .ಇದರಲ್ಲಿ ೨,೭೪,೬೦೮ ಪುರುಷರು,೨,೭೯,೯೧೧ ಮಹಿಳೆಯರು ಇದ್ದಾರೆ. ಈ ಜಿಲ್ಲೆಯ ರಾಜಧಾನಿ ಮಡಿಕೇರಿ (ಮರ್ಕೆರಾ ಎಂದೂ ಆಂಗ್ಲದಲ್ಲಿ ಕರೆಯಲಾಗುತ್ತದೆ). ಕೊಡಗು ಮೊದಲು ಬ್ರಿಟಿಷರ ಕಾಲದಲ್ಲಿ ಸ್ವತಂತ್ರ ರಾಜ್ಯವಾಗಿತ್ತು. ಸ್ವಾತಂತ್ರ್ಯಾನಂತರ ಭಾಷಾವಾರು ರಾಜ್ಯವಿಂಗಡನೆಯಾದಾಗ ಕರ್ನಾಟಕ ರಾಜ್ಯಕ್ಕೆ ಜಿಲ್ಲೆಯಾಗಿ ಸೇರಲ್ಪಟ್ಟಿತು.

ತಾಲೂಕುಗಳು

ಕೊಡಗಿನಲ್ಲಿ ಮೂರು ತಾಲೂಕುಗಳಿವೆ.

ಕೊಡಗಿನ ೩ ತಾಲುಕಿನಲ್ಲು ಪ್ರವಾಸಿ ಕೆಂದ್ರವಿದೆ. ಪ್ರೇಕ್ಷಣೀಯ ಸ್ಥಳಗಳಲ್ಲಿ ಮುಖ್ಯವಾಗಿ ಮಡಿಕೇರಿ ತಾಲುಕಿನಲ್ಲಿ ಅಬ್ಬಿ ಜಲಪಾತ, ಓಂಕಾರೇಶ್ವರ ದೇವಸ್ಥಾನ, ಗದ್ದಿಗೆ, ಅರಮನೆ, ರಾಜಸೀಟ್,ತಲಕಾವೇರಿ, ಇತ್ಯಾದಿಗಳಾದರೆ, ವಿರಾಜಪೇಟೆತಾಲುಕಿನಲ್ಲಿ ನಾಗರಹೊಳೆ,ಇರ್ಪು,ಕುಂದ,ಟೀ ಏಸ್ಟೇಟ್, ಸೈಂಟ್ ಏನ್ಸ್ ಚರ್ಚ್, ಇಗ್ಗುತ್ತಪ್ಪ ದೇವಸ್ಥಾನ, ನಾಲ್ಕುನಾಡು ಅರಮನೆ, ಮುಂತಾದವು ಇವೆ. ಸೋಮವಾರಪೇಟೆ ತಾಲುಕಿನಲ್ಲಿ ಕಾವೇರಿ ನಿಸರ್ಗಧಾಮ, ಕೊಪ್ಪದ ಗೊಲ್ಡನ್ ದೇವಸ್ಥಾನ, ವೀರಭೂಮಿ,ದುಬಾರೆ ಅರಣ್ಯ, ಹಾರಂಗಿ ಜಲಾಶಯ, ಚಿಕ್ಲಿ ಹೊಳೆ,ಹೊನ್ನಮ್ಮನ ಕೆರೆ,ಮಲ್ಲಳ್ಳಿ ಜಲಪಾತ, ಮೊದಲಾದವಿವೆ.ಪ್ರಿತಿ ಯಿಂದ ಪ್ರಿತಿಗಾಗಿ

ಬೆಳೆಗಳು

ಈ ಜಿಲ್ಲೆಯಲ್ಲಿ ಕಾಫಿ ಬಹಳವಾಗಿ ಬೆಳೆಯಲಾಗುತ್ತದೆಯಲ್ಲದೆ ಕರಿ ಮೆಣಸು,ಏಲಕ್ಕಿ,ಕಿತ್ತಳೆ,ಮತ್ತು ಭತ್ತ ಪ್ರಮುಖ ಬೇಸಾಯ.ಒಂದು ಕಾಲದಲ್ಲಿ ಕೊಡಗಿನ ಕಿತ್ತಳೆ ಭಾರತದಲ್ಲೆ ಹೆಸರಾಗಿತ್ತು.ಅದರೆ ಇಂದು ಅದು ಕೊಡಗಿನಲ್ಲಿಯೆ ಅಪರೂಪವಾಗಿದೆ.ಮೊದಲು ಕೊಡಗಿನಿಂದ ಕರ್ನಾಟಕ ರಾಜ್ಯಕ್ಕೆ ೩/೧ ಪಾಲು ಆದಾಯ ತೆರಿಗೆಯಾಗಿ ಹೋಗುತ್ತಿತ್ತು.

ಇತಿಹಾಸ

ಕೊಡವರು ಇಲ್ಲಿಯ ಮುಖ್ಯ ಜನರು. ಕೊಡವ ತಕ್ಕ್ ಕೊಡಗಿನಲ್ಲಿ ಪ್ರಮುಖವಾಗಿ ಬಳಸಲಾಗುವ ಭಾಷೆ. ಕನ್ನಡ ಆಡಳಿತ ಭಾಷೆ. ಇದಲ್ಲದೆ ಮಲಯಾಳಂ,ತಮಿಳು, ಅರೆಗನ್ನಡ, ತುಳು,ರಾವುಲ, ಮುಂತಾದವನ್ನು ಆಡುವವರು ಇಲ್ಲಿರುವರು. ಕೊಡವ ಭಾಷೆ ಅಥವಾ ಕೊಡವ ತಕ್ಕ್‌ಗೆ ಲಿಪಿಯಿಲ್ಲ, ಇದನ್ನು ಸುಮಾರು ೫೦೦,೦೦೦ ಜನರು ಮಾತನಾಡಲು ಬಳಸುತ್ತಾರೆ. ಯೆರವೆರು (ಅಥವಾ) ರಾವುಲರು, ಕೊಡಗಿನಲ್ಲಿ ಹಾಗೂ ಕೇರಳದಲ್ಲಿ (ಇಲ್ಲಿ ಆದಿಯರೆಂದು ಕರೆಯಲ್ಪಡುತ್ತಾರೆ) ಇದ್ದಾರೆ. ಇವರು ಪ್ರಮುಖವಾಗಿ ಹಿಂದೂಗಳು ಹಾಗೂ ವ್ಯವಸಾಯಗಾರರು.

ಕೊಡಗಿನಲ್ಲಿ ಐತಿಹಾಸಿಕ ಅತಿವೃಷ್ಟಿ

  • ಕೊಡಗಿನಲ್ಲಿ ೨೦೧೮ರ ಆಗಸ್ಟಿನ ಮಳಗೆ ಕೊಡಗಿನ ಜೀವನ ಪೂರಾ ಅಸ್ತವ್ಯಸ್ತವಾಗಿ ನಲುಗಿಹೋಯಿತು. ಕೊಡಗಿನ ಎಲ್ಲಾ ಸಂಪರ್ಕಗಳು ಕಡಿತವಾಯಿತು. ಸಾವಿರಾರು ಜನ ಮನೆ ಕಳೆದು ಕೊಂಡು ಸಂಪರ್ಕವಿಲ್ಲದೆ ಪ್ರಾಣಭಯಕ್ಕೆ ತುತ್ತಾದರು. ಆಗಸ್ಟ್ ೧೮ ರ ಮಳೆಗೆ ಜನ ಮನೆಮಠ ಕಳೆದುಕೊಂಡು ಅನಾಥರಾದರು. 600 ಮಂದಿ ಜೀವನ್ಮರಣ ಸ್ಥಿತಿಯಲ್ಲಿ ; ಇನ್ನೂ ಐದು ದಿನ ಭಾರಿ ಮಳೆ ನಿರೀಕ್ಷೆ. ಪರಿಹಾರ ಕಾರ್ಯಗಳು ಯುದ್ಧೋಪಅದಿಯಲ್ಲಿ ನಡೆದವು ಹೆಲಿಕ್ಯಾಪಟರುಗಳು ರಕ್ಷಣಾದಳಗಳು ಜೀವ ಒತ್ತೆ ಇಟ್ಟು ಕೆಲಸ ಮಾಡಿದವು ಆದರೂ ಗುಡ್ಡಗಳು ಮನೆಗಳು ಕುಸಿದು, ರಸ್ತೆಗಳೂ ಕಸಿದು ಅದರಮೇಲೆ ಮಣ್ಣು ಕುಸಿದು ಎಲ್ಲಾಸಂಪರ್ಕ ಕಡಿತವಾದವು.[1]
  • ಭಾರಿ ಮಳೆ, ಗುಡ್ಡ ಕುಸಿತ, ಪ್ರವಾಹ ಪರಿಸ್ಥಿತಿಯಿಂದ ಕೊಡಗು ಜಿಲ್ಲೆ ನಲುಗಿ ಹೋಯಿತು. ಕ್ಷಣಕ್ಷಣಕ್ಕೂ ಗುಡ್ಡಗಳು ಕುಸಿದವು. ಅದರಲ್ಲಿ ಸಿಲುಕಿಕೊಂಡವರಿಗೆ ಹೊರಗೆ ಬರಲು ಸಾಧ್ಯವಾಗದಾಯಿತು. ಎಷ್ಟು ಜನ ಸತ್ತಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗುವುದೂ ಅಸಾಧ್ಯವಾಯಿತು. ಪ್ರತಿಕೂಲ ಹವಾಮಾನದಿಂದ ಹೆಲಿಕಾಪ್ಟರ್‌ ಕಾರ್ಯಾಚರಣೆ ವಿಳಂಬವಾಯಿತು. ದಿ.೧೮- ೨೦ ಆಗಸ್ಟ್ ೨೦೧೮ ರಲ್ಲಿ ಜಿಲ್ಲೆಯ ವಿವಿಧೆಡೆ ಅಂದಾಜು 600ಕ್ಕೂ ಹೆಚ್ಚು ಮಂದಿ ರಕ್ಷಣೆಗಾಗಿ ಅಂಗಲಾಚುತ್ತಿದ್ದರು. ಹಲವರು ಮಣ್ಣಿನ ಅಡಿ ಸಿಲುಕಿದ್ದರೆ, ಕೆಲವರು ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿರುವ ಶಂಕೆ. ದಿ.೧೭-೮-೨೦೧೮ ಶುಕ್ರವಾರ ಮಾದಾಪುರ ಮುವತೊಕ್ಲು ಗ್ರಾಮದಲ್ಲಿ ಗುಡ್ಡ ಕುಸಿದುಒಬ್ಬರು ಮೃತಪಟ್ಟಿದ್ದಾರೆ. ಮತ್ತೆರಡು ಶವಗಳು ಪತ್ತೆಯಾಗಿವೆ. ಪರಿಸ್ಥತಿ ಹಿಗೆಯೆಯೇಗಂಬೀರವಾಗಿದೆ.
  • ಕ್ಷಣಾರ್ಧದಲ್ಲಿ ಸಾವಿರಾರು ಮರಗಳನ್ನು ಕೊಚ್ಚಿಕೊಂಡು ಜನವಸತಿಗೆ ಅಪ್ಪಳಿಸಿದ ತೊರೆ ಭೋರ್ಗರೆವ ಪ್ರವಾಹದ ನಡುವೆ ಸ್ತಬ್ಧವಾದ ಜೋಡುಪಾಲ See video[2]
  • ಕೊಡಗಿನ ಪ್ರಳಯಕ್ಕೆ ಅತೀ ಆಸೆಯ ಅಭಿವೃದ್ಧಿಯೇ ಕಾರಣ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.[3]
  • [ನಲುಗಿದ ಕೊಡಗು]
  • ಕೊಡಗಿನ ಪ್ರಳಯದ ಕಥೆ:; ಹೀಗಾಗಿದೆ ನೋಡಿ ಕಾವೇರಿ ಮಕ್ಕಳ ಬದುಕು:ಉಷಾ ಪ್ರೀತಮ್= 21 ಆಗಸ್ಟ್ 2018:: ಕೊಡಗಿನಲ್ಲಿ ಮೈಮುರಿದ ಭೂಮಿ, ಕಣ್ಮುಂದೆಯೇ ಜಾರಿತು ಕಾಫಿನಾಡು
  • ಅಪಾಯದ ಎಚ್ಚರಿಕೆ ಕೊಟ್ಟಿದ್ದ ‘ಪ್ರಕೃತಿ’

ಹೊರಗಿನ ಸಂಪರ್ಕಗಳು

ಉಲ್ಲೇಖ

  1. ಮಳೆಗೆ ನಲುಗಿದ ಕೊಡಗು: ನರಕವಾದ ಬದುಕು;;ಆದಿತ್ಯ ಕೆ.ಎ;;18 ಆಗಸ್ಟ್ 2018
  2. ಕ್ಷಣಾರ್ಧದಲ್ಲಿ ಸಾವಿರಾರು ಮರಗಳನ್ನು ಕೊಚ್ಚಿಕೊಂಡು ಜನವಸತಿಗೆ ಅಪ್ಪಳಿಸಿದ ತೊರೆ ಭೋರ್ಗರೆವ ಪ್ರವಾಹದ ನಡುವೆ ಸ್ತಬ್ಧವಾದ ಜೋಡುಪಾಲ See video
  3. https://www.prajavani.net/stories/stateregional/rapacious-%E2%80%98development%E2%80%99-begot-567340.html ಕೊಡಗಿನ ಪ್ರಳಯಕ್ಕೆ ಅತೀ ಆಸೆಯ ಅಭಿವೃದ್ಧಿಯೇ ಕಾರಣ ಅಂತಾರೆ ತಜ್ಞರು]
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.