ಕನ್ನಡ ವ್ಯಾಕರಣ
ಪ್ರಮುಖವಾಗಿ ಕನ್ನಡ ವ್ಯಾಕರಣವು ಕೇಶೀರಾಜ ಕೇಶೀರಾಜನ ಶಬ್ದಮಣಿದರ್ಪಣ (ಕ್ರಿ.ಶ. ೧೨೬೦) ದ ಮೇಲೆ ಆಧರಿಸಿದೆ. ಈ ಗ್ರಂಥವು ಕನ್ನಡ ಭಾಷೆಯನ್ನು ಸವಿವರವಾಗಿ ಪರಿಚಯಿಸುತ್ತದೆ. ಈ ಗ್ರಂಥವನ್ನು ಹೊರತುಪಡಿಸಿ ಕನ್ನಡ ವ್ಯಾಕರಣದ ಬಗ್ಗೆ ೯ನೇ ಶತಮಾನದ ಕವಿರಾಜಮಾರ್ಗ (ಅಲಂಕಾರಗಳ ಬಗ್ಗೆ ಉಲ್ಲೇಖವಿದೆ) ಹಾಗೂ ೨ನೇ ನಾಗವರ್ಮನ (೧೨ನೇ ಶತಮಾನದ ಮೊದಲಾರ್ಧದಲ್ಲಿ) ಕಾವ್ಯಲೋಕನ ಹಾಗೂ ಕರ್ನಾಟಕಭಾಷಾಭೂಷಣಗಳಲ್ಲಿ ಉಲ್ಲೇಖವಿದೆ.
ನಮ್ಮ ಭಾವನೆಗಳನ್ನು ಮತ್ತು ಅಭಿಪ್ರಾಯಗಳನ್ನು ಇತರರಿಗೆ ವ್ಯಕ್ತಪಡಿಸುವುದಕ್ಕೆ ಮತ್ತು ಅವರ ಅಭಿಪ್ರಾಯಗಳನ್ನು ಮತ್ತು ಭಾವನೆಗಳನ್ನು ನಾವು ತಿಳಿಯುವ ಮಾಧ್ಯಮಕ್ಕೆ ಭಾಷೆ ಎಂದು ಹೆಸರು.
ಭಾಷೆಯನ್ನು ಸರಿಯಾದ ವಿಧಾನದಲ್ಲಿ ಬಳಸಲು ಹಾಗೂ ಸಾರ್ವತ್ರೀಕರಣಗೊಳಿಸಲು ಇರುವ ಮಾರ್ಗದರ್ಶಿಯನ್ನು ವ್ಯಾಕರಣ ಎನ್ನುತ್ತಾರೆ.
ಪ್ರಪಂಚದಲ್ಲಿ ಸಾವಿರಾರು ಭಾಷೆಗಳಿವೆ.ಹಲವು ಭಾಷೆಗಳಲ್ಲಿ ನಾವು ಮಾತಾನಾಡುವ ಕನ್ನಡವೂ ಒಂದು ಪ್ರಮುಖ ಭಾಷೆಯಾಗಿದ್ದು ತನ್ನದೇ ಲಿಪಿಯನ್ನು ಹೊಂದಿರುವ ವಿಶೇಷ ಭಾಷೆ ಇದಾಗಿದೆ.
ಕನ್ನಡ ಭಾಷೆಯಲ್ಲಿ ಎರಡು ರೂಪಗಳಿವೆ.ಅವುಗಳೆಂದರೆ ಶ್ರಾವಣ ಮತ್ತು ಚಾಕ್ಷುಷ. ಶ್ರಾವಣ ರೂಪ ಎಂದರೆ ಧ್ವನಿಯ ಮೂಲಕ ಕಿವಿಗೆ ಕೇಳಿಸುವುದು. ಚಾಕ್ಷುಷ ರೂಪ ಎಂದರೆ ಬರಹದ ಮೂಲಕ ಕಣ್ಣಿಗೆ ಕಾಣಿಸುವುದು. ಕನ್ನಡ ಲಿಪಿಯನ್ನು ತಿಳಿಯಬೇಕಾದರೆ ಲಿಪಿರೂಪದ ವರ್ಣಮಾಲೆಯನ್ನು ತಿಳಿಯಬೇಕು. ವರ್ಣ ಎಂದರೆ ಅಕ್ಷರ. ವರ್ಣಗಳ ವ್ಯವಸ್ಥಿತ ಜೋಡಣೆಯನ್ನು ವರ್ಣಮಾಲೆ ಎನ್ನುವರು.
ಕನ್ನಡ ವರ್ಣಮಾಲೆಯಲ್ಲಿ ೪೯(49) ಅಕ್ಷರಗಳು ಬಳಕೆಯಲ್ಲಿವೆ.
|
ಮೂಲಭೂತ ಅಂಶಗಳು
ಪ್ರಮುಖ ವಿಭಾಗಗಳು
- ತತ್ಸಮ ತದ್ಭವ: ಸಂಸ್ಕೃತದ ಮೂಲ ಪದ, ಅದೇ ಪದದ ಅಪಭ್ರಂಶವಾದ ಕನ್ನಡ ಪದ - ಇವುಗಳನ್ನು ತತ್ಸಮ-ತದ್ಭವಗಳೆಂದು ಕರೆಯುತ್ತಾರೆ.
- ವಿಭಕ್ತಿ ಪ್ರತ್ಯಯಗಳು: 'ಪ್ರತ್ಯಯ' ಎಂದರೆ ಕಾರ್ಯಕಾರಣ ಸಂಭಂಧಗಳುನ್ನು ಸೂಚಿಸುವ ಪದಗಳು. ಸಂಸ್ಕೃತದಲ್ಲಿ ಒಂದು ಪದದ ಕೊನೆಗೆ ಸೇರುವ ಕೆಲವು 'ಅಕ್ಷರಗಳ ಗುಂಪು'ಗಳು. ಇವು ಆ ಪದದ ಕೊನೆಗೆ ಸೇರಿ ಅದರ ಅರ್ಥವನ್ನು ಮಾರ್ಪಡಿಸುವುವು. ಇವು ಬರಿ ಒಂದು ಪದದ ಭಾಗಗಳು ಹೊರತು ಸ್ವತಂತ್ರ ಪದಗಳಲ್ಲ.
- ದ್ವಿರುಕ್ತಿ : ಒಂದು ಪದವು ಎರಡು ಬಾರಿ ಬರುವುದನ್ನು ದ್ವಿರುಕ್ತಿ ಎನ್ನುವರು.ಒಂದು ವಿಶೇಷಾರ್ಥವನ್ನು ವ್ಯಕ್ತಪಡಿಸುವುದಕ್ಕಾಗಿ ಒಂದು ಪದವನ್ನ್ನೋ, ಒಂದು ವಾಕ್ಯವನ್ನೋ ಎರಡೆರಡು ಸಲ ಪ್ರಯೋಗ ಮಾಡುವುದಕ್ಕೆ ದ್ವಿರುಕ್ತಿ (ದ್ವಿಃ ಉಕ್ತಿ - ದ್ವಿರುಕ್ತಿ) ಎನ್ನುವರು.
- ಕಾಲ-ವ್ಯಾಕರಣ
- ಜೋಡು ನುಡಿಗಟ್ಟು: ದ್ವಿರುಕ್ತಿಯ ಹಾಗೆಯೇ ಇನ್ನೊಂದು ರೀತಿಯ ಶಬ್ದಗಳನ್ನು ನಾವು ಪ್ರಯೋಗಿಸುವುದುಂಟು. ಅವು ದ್ವಿರುಕ್ತಿಗಳ ಹಾಗೆ ಕಂಡರೂ, ದ್ವಿರುಕ್ತಿಗಳಲ್ಲ. ಅವುಗಳನ್ನು ಜೋಡು ನುಡಿಗಟ್ಟುಗಳೆಂದು ಕರೆಯುತ್ತಾರೆ. ಅವುಗಳಲ್ಲಿ, ಸಾಮಾನ್ಯವಾಗಿ ಎರಡನೆಯ ಪದಕ್ಕೆ ಅರ್ಥವಿರುವುದಿಲ್ಲ.
- ಸಂಧಿ: ಸಂಧಿ/ಕೂಡಿಕೆ ಸಂಧಿಯೆಂದರೆ ಸಂಸ್ಕೃತದಲ್ಲಿ ಕೂಡಿಕೆ/ಕಲೆತ ಎಂದು ಅರ್ಥ. ವ್ಯಾಕರಣದಲ್ಲಿ ಎರಡು ಒರೆ(ಪದ)ಗಳನ್ನು ಕೂಡಿಸಿ/ಸೇರಿಸಿ/ಕಲೆಸಿ ಒಂದು ಒರೆ(ಪದ)ವನ್ನಾಗಿ ಮಾಡಿದರೆ ಅದು ಸಂಧಿ/ಕೂಡಿಕೆ ಯಾಗುವುದು. ಕನ್ನಡದಲ್ಲಿ ಅದನ್ನು "ಒರೆಗೂಡಿಕೆ" ಎಂದು ಕರೆಯಬಹುದು.
- ಸಮಾಸ: ಸಮಾಸವೆಂದರೆ ಸಮಸ್ತ ಪದವೆಂದರ್ಥ. ಅರ್ಥವನ್ನು ಅನುಸರಿಸಿ, ಎರಡು ಅಥವಾ ಅದಕ್ಕಿಂತ ಹೆಚ್ಚಿನ ಪದಗಳನ್ನು ಸಂಕ್ಷೇಪದಿಂದ ಹೇಳುವುದನ್ನು ಸಮಾಸ ಎನ್ನಲಾಗುತ್ತದೆ.
- ಛಂದಸ್ಸು: ಛಂದಸ್ಸು - ಪದ್ಯವನ್ನು ರಚಿಸುವ ಶಾಸ್ತ್ರ. ಛಂದಸ್ಸಿನ ಶಾಸ್ತ್ರದ ಪ್ರಕಾರ ರಚಿತವಾದ ಪದ್ಯವನ್ನು ಛಂದೋಬದ್ಧ ಪದ್ಯ ಎನ್ನುವರು.
- ಅಲಂಕಾರ: ವಿಶಾಲ ಅರ್ಥದಲ್ಲಿ ಕಾವ್ಯದ ರಮಣೀಯತೆ ಅಥವಾ ಅದರ ಸೌಂದರ್ಯಕ್ಕೆ ಕಾರಣವಾಗುವ 'ಶಬ್ದ' ಮತ್ತು 'ಅರ್ಥ'ಗಳ ವೈಚಿತ್ರವನ್ನು "ಅಲಂಕಾರ" ಎನ್ನಬಹುದು.
- ವೃತ್ತ: ಖ್ಯಾತ ಕರ್ನಾಟಕ ವೃತ್ತಗಳು.
- ತ್ರಿಪದಿ: ತ್ರಿಪದಿ ಅಂದರೆ ಮೂರು ಸಾಲಿನ ಪದ್ಯ ,
- ಕಾಂಡ:
- ಷಟ್ಪದಿ: ಷಟ್ಪದಿ ಎಂಬುದು ಛಂದಸ್ಸಿನ ಒಂದು ಪ್ರಕಾರ. ಪದ್ಯವೊಂದರಲ್ಲಿ ಆರು ಪಾದಗಳಿದ್ದರೆ ಅದು ಷಟ್ಪದಿ ಎನಿಸುತ್ತದೆ.
- ಸಾಂಗತ್ಯ: "ಸಾಂಗತ್ಯ " ಇದು ಕನ್ನಡದಲ್ಲಿ ಬಹು ಪ್ರಸಿದ್ಧವಾದ ಒಂದು ಅಂಶಚ್ಛಂದಸ್ಸಿನ ಪ್ರಕಾರ.
- ಪ್ರಾಸಗಳು: ಪದ್ಯದ ಪ್ರತಿಪಾದದ ೨ನೇ ಅಕ್ಷರವು ಪ್ರಾಸವೆಂದು ವರ್ತಿಸುತ್ತದೆ. ಆ ಎರಡನೆ ಅಕ್ಷರವು ಎಲ್ಲಾ ಪಾದಗಳಲ್ಲಿಯೂ ಒಂದೇ ಆಗಿರಬೇಕು.
- ಪರಿಮಾಣ ವಾಚಕಗಳು: ವಸ್ತುಗಳ ಸಾಮಾನ್ಯ ಅಳತೆ, ಪರಿಮಾಣ, ಗಾತ್ರ ಇತ್ಯಾದಿಗಳನ್ನು ಸೂಚಿಸುವ ಪದಗಳಿಗೆ ಪರಿಮಾಣ ವಾಚಕಗಳು ಎಂಬ ಹೆಸರು.
- ಸಮುಚ್ಚಯ ಪದಗಳು |ದ್ವಯಗಳು; ತ್ರಯ ; ಚತುಷ್ಟಯಗಳು ; ಪಂಚ ಗಳು; ಇತ್ಯಾದಿ, ಷಷ್ಠಿ (೬೦)ಸಂವತ್ಸರಗಳ ವರೆಗೆ
- ಪ್ರಬಂಧ ರಚನೆ: ಪ್ರಬಂಧ ರಚನೆ - ಅರ್ಥಪೂರ್ಣ ಖಚಿತ ವಾಕ್ಯಗಳ ಮೂಲಕ ವ್ಯಕ್ತಿಯ ಆಲೋಚನೆಗಳನ್ನು ಲಿಖಿತವಾಗಿ ಅಭಿವ್ಯಕ್ತಿಸುವ ಹಾಗೂ ನಿರ್ದಿಷ್ಟ ವಿಷಯಗಳನ್ನು ಕ್ರಮಬದ್ಧ ರೀತಿಯಲ್ಲಿ ಸಮರ್ಪಕವಾಗಿ ನಿರೂಪಿಸುವ ಪರಿ.
ಟಿಪ್ಪಣಿ
- ಸಮುಚ್ಚಯ ಪದಗಳು :- ಇದು ಚತುರ್ವೇದ, ಅಷ್ಟದಿಕ್ಪಾಲಕರು, ಏಕಾದಶ ರುದ್ರರು ಮೊದಲಾದ ಸಮೂಹ ಪದಗಳ ಪಟ್ಟಿ (ಕೋಶ) ; ವಾಸ್ತವವಾಗಿ ಕನ್ನಡ ವ್ಯಾಕರಣ ದಲ್ಲಿ ಬರುವುದಿಲ್ಲ . ಆದರೆ ಇಂಗ್ಲಿಷ್ ವ್ಯಾಕರಣ ದಲ್ಲಿ ಸಮೂಹ ಪದಗಳ ವಿಭಾಗವಿದೆ. (ಕಲೆಕ್ಟಿವ್ ನೌನ್ಸ್ ). ಈ ಬಗೆಯ ಪದಗಳನ್ನು ಹೊಸದಾಗಿ ನಾಮಪದಗಳ ಗುಂಪಿಗೆ ಸೇರಿ
ಭಾಷಾ ವಿಶೇಷಗಳು
- ಕನ್ನಡದ ಪ್ರತಿ ಅಕ್ಷರವು ತನ್ನದೇ ಆದ ರೂಪ ಮತ್ತು ಧ್ವನಿ ಹೊಂದಿದೆ.
- ಕನ್ನಡವನ್ನು ಎಡದಿಂದ ಬಲಕ್ಕೆ ಬರೆಯಲಾಗುತ್ತದೆ.
ಹೆಚ್ಚಿನ ಓದಿಗೆ
- ರೈಸ್ ಸಂಪಾದಿಸಿದ ‘ಭಾಷಾಭೂಷಣ’;ಕೆ.ಎಸ್. ಮಧುಸೂದನ
- ಕನ್ನಡದಲ್ಲಿ ಮೊಟ್ಟಮೊದಲ ಬಾರಿಗೆ ಮುದ್ರಿತ ಪುಸ್ತಕ: ಕುರ್ನಾಟಾ (ಕರ್ನಾಟಾ) ಭಾಷೆಯ ವ್ಯಾಕರಣ:(A Grammar of the Kurnata Language)] -The first printed book in Kannada;K.S. Madhusudana SEPTEMBER 12, 2019