ಬೆಂಗಳೂರು ಉಪನಗರ ರೈಲು ಸೇವೆ
ಬೆಂಗಳೂರು ಸುತ್ತಮುತ್ತಲಿನ ಪುರ ಮತ್ತು ಪಟ್ಟಣಗಳಿಗೆ ಈಗಾಗಲೇ ಇರುವ ರೈಲುಹಳಿಗಳನ್ನು ಉಪಯೋಗಿಸಿಕೊಂಡು ಸಂಪರ್ಕ ಕಲ್ಪಿಸುವ ವ್ಯವಸ್ಥೆಯೇ ಬೆಂಗಳೂರು ಉಪನಗರ ರೈಲು ಸೇವೆ. ಉಪನಗರ ರೈಲಿನ ಸೇವೆಯನ್ನು ಬೆಂಗಳೂರಿನಲ್ಲಿ ಆರಂಭಿಸಬೇಕೆಂದು ಬಹಳ ದಿನಗಳಿಂದ ಬೇಡಿಕೆಯಿದೆ.

ಬೆಂಗಳೂರು ಪ್ರಯಾಣಿಕ ರೈಲು | |
---|---|
Info | |
Locale | ಬೆಂಗಳೂರು,ಕರ್ನಾಟಕ, ಭಾರತ |
Transit type | Suburban Rail |
Number of lines | ೧ |
Number of stations | ೬ |
Operation | |
Began operation | ಏಪ್ರಿಲ್ ೩೦, ೨೦೧೩ |
Operator(s) | ಬೆಂಗಳೂರು ಉಪನಗರ ರೈಲು ಸಂಸ್ಥೆ ನಿಯಮಿತ |
Technical | |
System length | |
Track gauge | ೧,೬೭೬ mm (5 ft 6 in) (broad gauge) |
ಈ ರೈಲು ಸೇವೆಯನ್ನು ಒಂದು ಪ್ರತ್ಯೇಕ ಸಂಸ್ಥೆ ಯು ನಡೆಸಬೇಕೆಂದು ನಿರ್ಧರಿತವಾಗಿ, ಅದಕ್ಕಾಗಿ ಬೆಂಗಳೂರು ಉಪನಗರ ರೈಲು ನಿಗಮ ಸ್ಥಾಪಿಸಲಾಗಿದೆ.
೪೦೫ ಕಿಲೋಮೀಟರನಷ್ಟು ಹಳಿಗಳನ್ನೊಳಗೊಂಡ ಈ ಯೋಜನೆಯನ್ನು ಮೂರು ಹಂತಗಳಲ್ಲಿ ಅನುಷ್ಠಾನಗೊಳಿಸಲಾಗುವುದು: ಹಂತ ೧ ಹಂತ ೨ ಹಂತ ೩
ಇತಿಹಾಸ
೧೯೬೩ - ಹಿಂದುಸ್ತಾನ ಏರೋನಾಟಿಕ್ಸ್ ನಿಯಮಿತದ ಕಾರ್ಮಿಕರಿಗಾಗಿ ನಗರದಿಂದ ವಿಮಾನಪುರ ರೈಲು ನಿಲ್ದಾಣಕ್ಕೆ ರೈಲು ಸಂಚಾರ ವ್ಯವಸ್ಥೆಯಿದ್ದಿತು.
೧೯೮೩– ದಕ್ಷಿಣ ರೈಲ್ವೆಯ ತಂಡ ೫೮ ಕಿಲೋಮೀಟರ್ ಉದ್ದದ ಮೂರು ಪ್ರಯಾಣಿಕ ವರ್ತುಲ ರೈಲು ಹಳಿಗಳನ್ನು ೨೫ವರ್ಷಗಳ ಅವಧಿಯಲ್ಲಿ ನಿರ್ಮಾಣಕ್ಕೆ ಶಿಫಾರಸು ಮಾಡುತ್ತದೆ.
೧೯೮೮ – ಪ್ರಯಾಣಿಕ ರೈಲು ಹಳಿಗಳ ಅಭಿವೃದ್ಧಿ ಪಡಿಸಬೇಕೆಂಬ ವರದಿಯನ್ನು ರೈಟ್ಸ್ ಸಂಸ್ಥೆ ನೀಡಿತು.
೧೯೯೩ – ದಕ್ಷಿಣ ರೈಲ್ವೆಯ ೧೯೮೩ ಯ ಶಿಫಾರಸಿನಂತ ತ್ವರಿತ ಸಮೂಹ ಸಾರಿಗೆಯ ವರ್ತುಲ ರೈಲು ನಿರ್ಮಾಣಕ್ಕೆ ರಾಜ್ಯ ಸರಕಾರ ಸಮಿತಿಯನ್ನು ನೇಮಿಸುತ್ತದೆ.
೧೯೯೮ – ವಿಶ್ವ ಬ್ಯಾಂಕ್ ನೆರವಿನೊಂದಿಗೆ ಸ್ಥಳೀಯ ರೈಲು ಸೇವೆಗೆ ರೈಟ್ಸ್ ಸಂಸ್ಥೆ ಸರ್ವೇ ಕಾರಯ ಕೈಗೊಳ್ಳುತ್ತದೆ.
೨೦೦೩ – ಸ್ಥಳೀಯ ರೈಲು ಸೇವೆಯ ಸರ್ವೇ ಕಾರ್ಯವನ್ನು ರೈಟ್ಸ್ ಸಂಸ್ಥೆ ಸಲ್ಲಿಸುತ್ತದೆ.
೨೦೦೭ – ರೈಟ್ಸ್ ಸರ್ವೇ ಕಾರ್ಯವನ್ನು ಸಿಟಿಟಿಪಿ೨೦೦೭ರ ಭಾಗವಾಗಿ, ಪ್ರಯಾಣಿಕ ರೈಲು ಸೇವೆಯನ್ನು ಬೆಂಗಳೂರಿನ ಸುತ್ತಮುತ್ತಲಿನ ಪಟ್ಟಣಗಳನ್ನು ಸಂಪರ್ಕಿಸಲು ವ್ಯಾಪಕವಾಗಿ ಬಳಸಬೇಕೆಂದು ಶಿಫಾರಸ್ಸು ಮಾಡುತ್ತದೆ.
ಜನವರಿ ೨೦೦೮ – ಮೂಲ ಸೌಕರ್ಯ ನಿರ್ದೇಶನಾಲಯ ಎರಡು ಡೀಸಲ್ ಯಂತ್ರ ಬಹು ಘಟಕ (ಡೆಮು) ಸೇವೆಯನ್ನು ಆರಂಭಿಸಲು ಹಣಕಾಸಿನ ನೆರವು ನೀಡಲು ಒಪ್ಪುತ್ತದೆ.
ನವೆಂಬರ ೨೦೦೯ – ಬೆಂಗಳೂರು ಮಹಾನಗರ ಭೂಸಾರಿಗೆ ಪ್ರಾಧಿಕಾರ ಪ್ರಯಾಣಿಕರ ರೈಲಿನ ಅಧ್ಯಯನವನ್ನು ಮೂಲ ಸೌಕರ್ಯ ನಿರ್ದೇಶನಾಲಯಕ್ಕೆ ವಹಿಸುತ್ತದೆ.
೧೪ ಡಿಸೆಂಬರ ೨೦೦೯ – ನೈಋತ್ಯ ರೈಲ್ವೆಯು ಆನೇಕಲ್/ದೇವನಹಳ್ಳಿ, ಕೆಂಗೇರಿಗೆ ಉಪನಗರ ರೈಲು ಪ್ರಾರಂಭಿಸಲು ಬೆಂಗಳೂರು ಮಹಾನಗರ ಭೂಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಒಪ್ಪಿಗೆ ಸೂಚಿಸುತ್ತದೆ.
ಡಿಸೆಂಬರ ೨೦೦೯ – ರಾಜ್ಯದ ರೈಲ್ವೆ ಸಚಿವರಾದ ಕೆ ಹೆಚ್ ಮುನಿಯಪ್ಪನವರು ರಾಜ್ಯ ಸರ್ಕಾರ ಉಪನಗರ ರೈಲಿನಬಗ್ಗೆ ಯಾವುದೇ ನಿರ್ಧಾರ ಪ್ರಕಟಿಸಲ್ಲವೆಂದು ತಿಳಿಸುತ್ತಾರೆ.
೨ ಜನವರಿ ೨೦೧೦ – ರಾಜ್ಯದ ರೈಲ್ವೆ ಸಚಿವರಾದ ಕೆ ಹೆಚ್ ಮುನಿಯಪ್ಪನವರು ಯಶವಂತಪುರದಿಂದ ಆನೇಕಲ್ ಮತ್ತು ದೇವನಹಳ್ಳಿಗೆ ಉಪನಗರ ರೈಲುಗಳನ್ನು ಘೋಶಿಸುತ್ತಾರೆ.
ಫೆಬ್ರವರಿ – ಬೆಂಗಳೂರು ದಕ್ಷಿಣದ ಶಾಸಕರಾದ ಹೆಚ್ ಎನ್ ಅನಂತ ಕುಮಾರ್ ರವರು ರೈಲ್ವೆ ಸಚಿವರನ್ನು ಮುಂಬಯಿ ಮಾದರಿಯಲ್ಲಿ ಉಪನಗರ ರೈಲು ಪ್ರಾರಂಭಿಸಬೇಕೆಂದು ಮನವಿ ಮಾಡುತ್ತಾರೆ.
೩ ಮಾರ್ಚ ೨೦೧೦ – ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರು ರೈಲ್ವೆ ಮಂತ್ರಿಗಳಿಗೆ ಶೇಕಡ ೫೦ರ ರಾಜ್ಯದ ಪಾಲುದಾರಿಕೆಯಲ್ಲಿ ಉಪನಗರ ರೈಲು ಪ್ರಾರಂಭಿಸಬೇಕೆಂದು ಪತ್ರ ಬರೆಯುತ್ತಾರೆ.
ಮಾರ್ಚ ೨೦೧೩ - "ಬೆಂಗಳೂರು ಉಪನಗರ ರೈಲು ಸಂಸ್ಥೆ ನಿಯಮಿತ" ಸಂಸ್ಥೆ ನೊಂದಾಯಿಸಲಾಯಿತು.
೩೦ ಏಪ್ರಿಲ್, ೨೦೧೩ - ಯಶವಂತಪುರ ಮತ್ತು ನೆಲಮಂಗಲದ ನಡುವೆ ರೈಲು ಸಂಚಾರ ಪ್ರಾರಂಭವಾಯಿತು.[1]
ಪ್ರಯಾಣ ದರ
ಪ್ರಸ್ತುತ ರೈಲುಗಳು
ಮಿಂಚು (ವಿದ್ಯುತ್) ಬಂಡಿಗಳು:
- ಬೆಂಗಳೂರು ನಗರ - ರಾಮನಗರ
- ಬೆಂಗಳೂರು ನಗರ - ಮಾರಿ ಕುಪ್ಪೆ
ಡೀಸಲ್ ಬಂಡಿಗಳು:
- ಬೆಂಗಳೂರು ದಂಡು - ಬಂಗಾರಪೇಟೆ
- ಬೆಂಗಳೂರು ನಗರ - ಚಿಕ್ಕಬಳ್ಳಾಪುರ
- ಯಶವಂತಪುರ - ತುಮಕೂರು
- ಯಶವಂತಪುರ - ಚಿಕ್ಕಬಳ್ಳಾಪುರ[2]
- ಯಶವಂತಪುರ - ನೆಲಮಂಗಲ
- ಯಶವಂತಪುರ - ಹೊಸೂರು
ಹೊಸ ಮಾರ್ಗಗಳು
ಬೆಂಗಳೂರಿನ ಸುತ್ತಮುತ್ತ ಸರ್ವೇ ಕಾರ್ಯ ಮುಗಿದಿರುವ ಹೊಸ ಹಳಿಬಂಡಿ ಮಾರ್ಗಗಳು ಮುಂದಿನ ದಿನಗಳಲ್ಲಿ ಉಪನಗರ ರೈಲು ಸೇವೆಗೆ ಸಹಕಾರಿಯಾಗಲಿದ್ದು, ಆ ಮಾರ್ಗಗಳ ಪಟ್ಟಿ ಕೆಳಗಿನಂತಿದೆ.
ನಿಲ್ದಾಣಗಳು
ಹೆಸರು | ಚಿತ್ರ | ಕೋಡ್ | ಹಳಿ | ಸೌಲಭ್ಯಗಳು | ಟಿಪ್ಪಣಿ | |
---|---|---|---|---|---|---|
ಟೆಂಪ್ಲೇಟು:Pms | ![]() |
12 | 1 | 18 | 31 October 1912 | |
ಟೆಂಪ್ಲೇಟು:Pms | 12 | 1 | 18 | 31 October 1912 | ||
ಉಲ್ಲೇಖಗಳು
- http://www.prajavani.net/article/%E0%B2%A8%E0%B3%86%E0%B2%B2%E0%B2%AE%E0%B2%82%E0%B2%97%E0%B2%B2%E0 %B2%95%E0%B3%8D%E0%B2%95%E0%B3%86-%E0%B2%95%E0%B3%8A%E0%B2%A8%E0%B3%86%E0%B2%97%E0%B3%82-%E0%B2%B0%E0%B3%88%E0%B2%B2%E0%B3%81-%E0%B2%AC%E0%B2%82%E0%B2%A4%E0%B3%81
- http://vijaykarnataka.indiatimes.com/district/bengalurucity/-/articleshow/48115203.cms
- http://www.railnews.co.in/work-on-bangalore-chamarajanagar-new-railway-line-to-begin-this-month/
- http://www.swr.indianrailways.gov.in/view_section.jsp?lang=0&id=0,1,828,831,927
- http://www.thehindubusinessline.com/industry-and-economy/logistics/railways-opens-12000crore-worth-projects-for-private-foreign-investment/article6587625.ece
- http://www.thehindubusinessline.com/news/states/kanara-chamber-calls-for-doubling-of-railway-line-to-improve-freight-movement/article6145355.ece
- http://www.thehindu.com/todays-paper/tp-national/tp-karnataka/survey-soon-for-pandavapuratumkur-rail-link/article3698825.ece
- http://www.thehindu.com/todays-paper/tp-national/tp-karnataka/work-on-new-rail-lines-yet-to-start-for-want-of-land/article5584918.ece
- http://articles.economictimes.indiatimes.com/2012-03-14/news/31168893_1_chennai-bangalore-ac-double-decker-express-training-centre-bidar-secunderabad-intercity-express
- http://www.thehindu.com/todays-paper/tp-features/tp-propertyplus/vital-link-restored/article5431320.ece