ಕರ್ನಾಟಕ ರತ್ನ
ಕರ್ನಾಟಕ ರತ್ನ ಕರ್ನಾಟಕ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿ. ಈ ಪ್ರಶಸ್ತಿಯನ್ನು ಯಾವುದೇ ಕ್ಷೇತ್ರದಲ್ಲಿ ಅಸಾಧಾರಣ ಕೊಡುಗೆಯನ್ನು ನೀಡಿದ ವ್ಯಕ್ತಿಗಳಿಗೆ ನೀಡಲಾಗುತ್ತದೆ. ಈ ಪ್ರಶಸ್ತಿಯನ್ನು ೧೯೯೨ರಲ್ಲಿ ಪ್ರಾರಂಭಿಸಲಾಯಿತು.[1] . ಒಟ್ಟಾರೆ ಇದುವರೆಗೆ ಎಂಟು ವ್ಯಕ್ತಿಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ.
ಕರ್ನಾಟಕ ರತ್ನ | ||
ಪ್ರಶಸ್ತಿಯ ವಿವರ | ||
---|---|---|
ಮಾದರಿ | ನಾಗರಿಕ | |
ವರ್ಗ | ಸಾರ್ವಜನಿಕ | |
ಪ್ರಾರಂಭವಾದದ್ದು | ೧೯೯೧ | |
ಮೊದಲ ಪ್ರಶಸ್ತಿ | ೧೯೯೨ | |
ಕಡೆಯ ಪ್ರಶಸ್ತಿ | ೨೦೦೯ | |
ಒಟ್ಟು ಪ್ರಶಸ್ತಿಗಳು | ೯ | |
ಪ್ರಶಸ್ತಿ ನೀಡುವವರು | ಕರ್ನಾಟಕ ಸರ್ಕಾರ | |
ವಿವರ | ಕರ್ನಾಟಕ ದ ಅತ್ಯುನ್ನತ ನಾಗರಿಕ ಪ್ರಶಸ್ತಿ | |
ಮೊದಲ ಪ್ರಶಸ್ತಿ ಪುರಸ್ಕೃತರು | ಕುವೆಂಪು | |
ಕೊನೆಯ ಪ್ರಶಸ್ತಿ ಪುರಸ್ಕೃತರು | ಡಾ. ವೀರೇಂದ್ರ ಹೆಗ್ಗಡೆ | |
ಪ್ರಶಸ್ತಿಯ ಶ್ರೇಣಿ | ||
none ← ಕರ್ನಾಟಕ ರತ್ನ → ರಾಜ್ಯೋತ್ಸವ ಪ್ರಶಸ್ತಿ |
ಪ್ರಶಸ್ತಿ
ಈ ಪ್ರಶಸ್ತಿಯು ೫೦ ಗ್ರಾಂ ತೂಕದ ಚಿನ್ನದ ಪದಕ, ಸನ್ಮಾನ ಪತ್ರ, ನೆನಪಿನ ಕಾಣಿಕೆ ಮತ್ತು ಒಂದು ಶಾಲನ್ನು ಒಳಗೊಂಡಿರುತ್ತದೆ.
ಪ್ರಶಸ್ತಿ ಪುರಸ್ಕೃತರು
ಕ್ರ.ಸಂ | ಹೆಸರು | ಜನನ / ಮರಣ | ಗೌರವಿಸಿದ್ದು | ಕ್ಷೇತ್ರ | ಉಲ್ಲೇಖ |
---|---|---|---|---|---|
೧. | ಕುವೆಂಪು | ೧೯೦೪–೧೯೯೪ | ೧೯೯೨ | ಸಾಹಿತ್ಯ | |
೨. | ಡಾ. ರಾಜ್ಕುಮಾರ್ | ೧೯೨೯–೨೦೦೬ | ೧೯೯೨ | ಸಿನೆಮಾ | |
೩. | ಎಸ್. ನಿಜಲಿಂಗಪ್ಪ | ೧೯೦೨–೨೦೦೦ | ೧೯೯೯ | ರಾಜಕೀಯ | [2] |
೪. | ಸಿ ಎನ್ ಆರ್ ರಾವ್ | b. ೧೯೩೪ | ೨೦೦೦ | ವಿಜ್ಞಾನ | [3] |
೫. | ದೇವಿ ಪ್ರಸಾದ್ ಶೆಟ್ಟಿ | ೨೦೦೧ | ವೈದ್ಯಕೀಯ | ||
೬. | ಭೀಮಸೇನ ಜೋಷಿ | ೧೯೨೨–೨೦೧೧ | ೨೦೦೫ | ಸಂಗೀತ | [4] |
೭. | ಶ್ರೀ ಶಿವಕುಮಾರ ಸ್ವಾಮಿಗಳು | ೧೯೦೭–೨೦೧೯ | ೨೦೦೭ | ಸಾಮಾಜಿಕ ಸೇವೆ | [5] |
೮. | ಡಾ. ಡಿ. ಜವರೇಗೌಡ | ೧೯೧೮–೨೦೧೬ | ೨೦೦೮ | ಶಿಕ್ಷಣ ಮತ್ತು ಸಾಹಿತ್ಯ | [1] |
೯. | ಡಾ. ವೀರೇಂದ್ರ ಹೆಗ್ಗಡೆ | b. ೧೯೪೮ | ೨೦೦೯ | ಸಾಮಾಜಿಕ ಸೇವೆ | [1] |
ಉಲ್ಲೇಖಗಳು
- ಕರ್ನಾಟಕ ಸರ್ಕಾರ ದಿಂದ ಜವರೆ ಗೌಡ ಅವರಿಗೆ ಕರ್ನಾಟಕ ರತ್ನ, ವೀರೇಂದ್ರ ಹೆಗ್ಗಡೆ
- A home of mementoes
- ಸಿ.ಎನ್.ಆರ್ ರಾವ್ ರವರಿಗೆ ಕರ್ನಾಟಕ ರತ್ನ
- Karnataka declares day’s mourning to condole Joshi's death
- Siddaganga seer receives Karnataka ratna
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.