ಸಿದ್ದಾಂತ ಶಿಖಾಮಣಿ

ಹಿನ್ನಲೆ

ಶ್ರೀ ಸಿದಾಂತ ಶಿಖಾಮಣಿ ಯಲ್ಲಿ ಪ್ರತಿಪಾದಿತವಾದ ಏಕೋತ್ತರಶತಸ್ಥಲಾತ್ಮಕವಾದ ಈ ಸಿದ್ದಾಂತವು ಮೊಟ್ಟಮೊದಲು ಶಿವನು ಪಾರ್ವತಿಗೆ ಮತ್ತು ತನ್ನ ಶಿವಗಣರಿಗೆ ಉಪದೇಶಿಸಿದ್ದನು. ಶಿವನಿಂದ ಉಪದೇಶ ಪಡೆದ ಶಿವ ಪ್ರಮುಖರಾದ ರೇಣುಕ, ದಾರುಕ, ಘಂಟಾಕರ್ಣ, ಧೇನುಕರ್ಣ, ಮತ್ತು ವಿಶ್ವಕರ್ಣ ರೆಂಬ ಗಣೇಶ್ವರರು ಭೂಲೋಕದಲ್ಲಿ ಕ್ರಮಾವಾಗಿ ಅಗಸ್ತ್ಯ, ದಧೀಚಿ, ವ್ಯಾಸ, ಸಾನಂದ, ಮತ್ತು ದೂರ್ವಾಸ ರೆಂಬ ಮಹರ್ಷಿಗಳಿಗೆ ಶಿವಾದ್ವೈತ ಸಿದ್ದಾಂತವನ್ನು ಉಪದೇಶಿಸಿರುತ್ತಾರೆ. ಈ ಶಿವಗಣರಲ್ಲೊಬ್ಬರಾದ ಶ್ರೀ ರೇಣುಕಗಣೇಶ್ವರನು ಅಗಸ್ತ್ಯ ಮಹರ್ಷಿಗೆ ಉಪದೇಶಿಸಿದ ಶಿವಾದ್ವೈತ ಸಿದ್ದಂತವನ್ನೇ ಶ್ರೀ ಶಿವಯೋಗಿ ಶಿವಾಚಾರ್ಯರು ಈ ಸಿದ್ದಾಂತ ಶಿಖಾಮಣಿಯಲ್ಲಿ ರೇಣುಕಾಗಸ್ತ್ಯರ ಸಂವಾದ ರೂಪದಲ್ಲಿ ವಿವರಿಸಿದ್ದಾರೆ.

ಈ ಕೃತಿಯನ್ನು ಮೊಟ್ಟಮೊದಲಿಗೆ ಶ್ರೀ ಶಿವಯೋಗಿ ಶಿವಾಚಾರ್ಯರು ಸಂಪಾದಿಸಿಕೊಟ್ಟಿದ್ದಾರೆ. ಶ್ರೀ ರೇಣುಕಾಚಾರ್ಯರು ಮಹಾಮುನಿ ಅಗಸ್ತ್ಯರಿಗೆ ಭೋದಿಸಿದ ಸಾರವನ್ನು ಈ ಸಿದ್ದಾಂತಶಿಖಾಮಣಿ ಒಳಗೊಂಡಿದೆ. ಇದು "ರೇಣುಕಾಗಸ್ತ್ಯ ಸಂವಾದ" ರೂಪವಾಗಿದೆ.

ಸಾರ:

ಈ ಗ್ರಂಥದ ಸಾರ ಶಿವಜೀವರ ಐಕ್ಯ. ವೀರಶೈವ ಸಿದ್ದಾಂತದ ಷಟ್ ಸ್ಥಲ ಗಳನ್ನು ನೂರೊಂದು ಸ್ಥಲಗಳಲ್ಲಿ ವಿಭಾಗಿಸಿ ವಿವರಿಸಲಾಗಿದೆ. ಈ ನೂರೊಂದು ಸ್ಥಲಗಳು ಸಾಧಕನ ಮನಸ್ಸಿನ ವಿಕಾಸದ ಉನ್ನತೋನ್ನತ ಸೋಪಾನಗಳಾಗಿವೆ. ಸಕಲ ಶಿವಾಗಮಗಳ ಸಾರವನ್ನೇ ಈ ಪುಸ್ತಕ ಓಳಗೊಂಡಿದೆ. ಈ ಗ್ರಂಥದಲ್ಲಿನ ಸಿದ್ದಾಂತದವು ದ್ವೈತಾದ್ವೈತಗಳ ಸಮನ್ವಯಾತ್ಮಕವಾದುದು. ಮೂಲತ ಸಂಸ್ಕೃತ ಭಾಷೆಯಲ್ಲಿರುವ ಈ ಪುಸ್ತಕವನ್ನು ಶ್ರೀ ೧೦೦೮ ಕಾಶೀ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಕನ್ನಡಿಗರಿಗೂ ಲಭ್ಯವಾಗಿಸಿದ್ದಾರೆ. ಈ ಪುಸ್ತಕ ರೇಣುಕ ಗೀತೆ ಅಂತಲೂ, ರೇಣುಕಾಗಸ್ತ್ಯ ಸಂವಾದ ಗ್ರಂಥವೆಂದೂ ಕರೆಯಲ್ಪಡುತ್ತದೆ.

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.