ವೀರಶೈವ

ವೀರಶೈವವು ಹಿಂದೂ ಧರ್ಮದ ಶೈವ ಶಾಖೆಯ ಒಂದು ಪಂಥ. ಈ ಪಂಥದ ಅನುಯಾಯಿಗಳು ಪ್ರಮುಖವಾಗಿ ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶಗಳಲ್ಲಿ ಕಂಡುಬರುತ್ತಾರೆ. ವೀರಶೈವರು ಸಂಸ್ಕೃತದಲ್ಲಿ ರಚಿತವಾದ ಸಿದ್ಧಾಂತ ಶಿಖಾಮಣಿ ಗ್ರಂಥವನ್ನು ತಮ್ಮ ತಾತ್ವಿಕ ಗ್ರಂಥವೆಂದು ಒಪ್ಪಿಕೊಳ್ಳುತ್ತಾರೆ.

ಮೂಲ

ಶಿವನು ವೀರಶೈವ ಪಂಥವನ್ನು ಐವರು ಆಚಾರ್ಯರು (ಪಂಚಾಚಾರ್ಯರು) ಮೂಲಕ ಸ್ಥಾಪಿಸಿದನೆಂದು ಪ್ರತೀತಿ.

  • ರೇಣುಕಾಚಾರ್ಯ
  • ದಾರುಕಾಚಾರ್ಯ
  • ಏಕೋರಾಮಾರಾಧ್ಯ
  • ಪಂಡಿತಾರಾಧ್ಯ
  • ವಿಶ್ವಾರಾಧ್ಯ

ಶ್ರೀ ಜಗದ್ಗುರು ರೇಣುಕಾಚಾರ್ಯರು ಅಗಸ್ತ್ಯ ಮುನಿಗೆ ವೀರಶೈವ ತತ್ವದ ಉಪದೇಶ ನೀಡಿದರು ಎಂದು ವೀರಶೈವರು ನಂಬುತ್ತಾರೆ.

ಜಗದ್ಗುರು(ಪೀಠ)ಮೂಲ
ಜಗದ್ಗುರು ರೇಣುಕಾಚಾರ್ಯ (ರಂಭಾಪುರಿ)ಶ್ರೀ ಸೋಮೇಶ್ವರ ಲಿಂಗ
ಜಗದ್ಗುರು ದಾರುಕಾಚಾರ್ಯ (ಉಜ್ಜನಿ)ಶ್ರೀ ಸಿದ್ದೇಶ್ವರ ಲಿಂಗ
ಜಗದ್ಗುರು ಏಕೋರಾಮರಾಧ್ಯ (ಕೇದಾರ)ಶ್ರೀ ರಾಮನಾಥ ಲಿಂಗ
ಜಗದ್ಗುರು ಪಂಡಿತಾರಾಧ್ಯ (ಶ್ರೀಶೈಲ)ಶ್ರೀ ಮಲ್ಲಿಕಾರ್ಜುನ ಲಿಂಗ
ಜಗದ್ಗುರು ವಿಶ್ವಾರಾಧ್ಯ (ಕಾಶೀ)ಶ್ರೀ ವಿಶ್ವನಾಥ ಲಿಂಗ

ಶಿವನ ಮುಖಗಳು

ಪಂಚಾಚಾರ್ಯರು ಶಿವನ ಐದು ಮುಖಗಳನ್ನು ಪ್ರತಿನಿಧಿಸುತ್ತಾರೆ. ಶಿವನ ಐದು ಮುಖಗಳು

  • ಸದ್ಯೋಜಾತ
  • ವಾಮದೇವ
  • ಅಘೋರ
  • ತತ್ಪುರುಷ
  • ಈಶಾನ

ನೋಡಿ

ಭಾರತೀಯ ದರ್ಶನಶಾಸ್ತ್ರ ಅಥವಾ ಭಾರತೀಯ ತತ್ತ್ವಶಾಸ್ತ್ರ
ಚಾರ್ವಾಕ ದರ್ಶನ ಜೈನ ದರ್ಶನ ಬೌದ್ಧ ದರ್ಶನಸಾಂಖ್ಯ ದರ್ಶನ
ರಾಜಯೋಗ ನ್ಯಾಯವೈಶೇಷಿಕ ದರ್ಶನಮೀಮಾಂಸ ದರ್ಶನ
ಆದಿ ಶಂಕರರು ಮತ್ತು ಅದ್ವೈತಅದ್ವೈತ- ಜ್ಞಾನ-ಕರ್ಮ ವಿವಾದ ವಿಶಿಷ್ಟಾದ್ವೈತ ದರ್ಶನದ್ವೈತ ದರ್ಶನ
ಮಾಧ್ವ ಸಿದ್ಧಾಂತ ಶ್ರೀಮನ್ಮಹಾಭಾರತಮ್ ಮತ್ತು ದ್ವೈತ ದರ್ಶನಭಾರತೀಯ ತತ್ವಶಾಸ್ತ್ರ ಸಮೀಕ್ಷೆಭಗವದ್ಗೀತಾ ತಾತ್ಪರ್ಯ
ಕರ್ಮ ಸಿದ್ಧಾಂತ ವೀರಶೈವ ತತ್ತ್ವಭಾರತೀಯ ತತ್ತ್ವಶಾಸ್ತ್ರದಲ್ಲಿ ದೇವರು- ಭಾರತೀಯ ತತ್ತ್ವಶಾಸ್ತ್ರದಲ್ಲಿ ಜಗತ್ತು
ಭಾರತೀಯ ತತ್ತ್ವಶಾಸ್ತ್ರದಲ್ಲಿ ಜೀವಾತ್ಮಮೋಕ್ಷಗೀತೆಬ್ರಹ್ಮಸೂತ್ರ

ಹೆಚ್ಚಿನ ಓದು

ಮಹಾರಾಷ್ಟ್ರ ಸರ್ಕಾರದ ತಾಣ: https://cultural.maharashtra.gov.in/english/gazetteer/KOLHAPUR/people_lingayats.html

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.