ಗುಲ್ಜಾರಿ ಲಾಲ್ ನಂದಾ

ಗುಲ್ಜಾರಿ ಲಾಲ್ ನಂದಾ (ಜುಲೈ ೪, ೧೮೯೮ - ಜನವರಿ ೧೫, ೧೯೯೮) ಎರಡು ಬಾರಿ ಭಾರತದ ಹಂಗಾಮಿ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದವರು.

thumb|ಗುಲ್ಜಾರಿ ಲಾಲ್ ನಂದಾ

ಲಾಹೋರ್, ಆಗ್ರಾ ಮತ್ತು ಅಲಹಾಬಾದ್ ಗಳಲ್ಲಿ ಅಧ್ಯಯನ ನಡೆಸಿದ ನಂದಾ ಅವರು ೧೯೨೧ರಲ್ಲಿ ಮುಂಬಯಿಯಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಪಕರಾದರು. ೧೯೩೭ರಲ್ಲಿ ಮುಂಬಯಿ ಸರ್ಕಾರದ ವಿಧಾನಸಭೆಗೆ ಚುನಾಯಿತರಾಗಿದ್ದರು.

ಸ್ವಾತಂತ್ರ್ಯಾನಂತರ ೧೯೫೦ ರಲ್ಲಿ ಯೋಜನಾ ಆಯೋಗದ ಉಪಾಧ್ಯಕ್ಷರಾದರು. ಹಾಗೆಯೇ ನೀರಾವರಿ ಮತ್ತು ವಿದ್ಯುಚ್ಛಕ್ತಿ ಖಾತೆಗಳಲ್ಲಿ ಸಚಿವರಾದರು. ೧೯೫೨ ರಲ್ಲಿ ಲೋಕಸಭೆಗೆ ಚುನಾಯಿತರಾದರು. ೧೯೫೭ ಮತ್ತು ೧೯೬೨ ರಲ್ಲಿ ಮತ್ತೆ ಲೋಕಸಭೆಗೆ ಚುನಾಯಿತರಾದರು. ಉದ್ಯೋಗ ಖಾತೆಯ ಸಚಿವರಾಗಿ ನಂತರ ೧೯೬೩ ರಿಂದ ೬೬ ರ ವರೆಗೆ ಗೃಹ ಖಾತೆಯನ್ನು ಪಡೆದರು.

ಜವಾಹರಲಾಲ್ ನೆಹರುರವರು ೧೯೬೪ ರಲ್ಲಿ ನಿಧನರಾದಾಗ ಹಂಗಾಮಿಯಾಗಿ ಗುಲ್ಜಾರಿ ಲಾಲ್ ನಂದಾ ಪ್ರಧಾನಿಯಾಗಿದ್ದರು. ಮತ್ತೊಮ್ಮೆ ಲಾಲ್ ಬಹಾದುರ್ ಶಾಸ್ತ್ರಿ ೧೯೬೬ರಲ್ಲಿ ನಿಧನರಾದಾಗ ಹಂಗಾಮಿಯಾಗಿ ಪ್ರಧಾನಿಗಳಾಗಿದ್ದರು.

ಗುಲ್ಜಾರಿ ಲಾಲ್ ನಂದಾ ಭಾರತ ರತ್ನ ಪ್ರಶಸ್ತಿ ವಿಜೇತರು.

ಗುಲ್ಜಾರಿಲಾಲ್ ನಂದಾ ಇವರು ಮಹಾತ್ಮ ಗಾಂಧೀಜಿಯವರ ತತ್ವಗಳ ಅನುಯಾಯಿಗಳಾಗಿದ್ದರು.

೧೯೯೮ರ ಜನವರಿಯಲ್ಲಿ ಶ್ರೀ ಗುಲ್ಜಾರಿಲಾಲ್ ನಂದಾ ನಿಧನರಾದರು.

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.