ಎಚ್. ಆರ್. ರಾಮಕೃಷ್ಣ ರಾವ್
ಹೊಳಲ್ಕೆರೆ ರಂಗರಾವ್ ರಾಮಕೃಷ್ಣ ರಾವ್ | |
---|---|
ಜನನ | ಯುವನಾಮ ಸಂವತ್ಸರದ ವೈಶಾಖ ಬಹುಳ ತ್ರಯೋದಶಿ, ಗುರುವಾರ,೩೧, ಮೇ,೧೯೩೫ ಹೊಳಲ್ಕೆರೆ, ಚಿತ್ರದುರ್ಗ ಜಿಲ್ಲೆ, ಕರ್ನಾಟಕ |
ವಾಸಸ್ಥಳ | ಬೆಂಗಳೂರು |
ರಾಷ್ಟ್ರೀಯತೆ | ಭಾರತೀಯ |
ಸಂಸ್ಥೆಗಳು | ಬೆಂಗಳೂರಿನ ಕ್ರೈಸ್ಟ್ ಕಾಲೇಜ್ ಭೌತಶಾಸ್ತ್ರ ಪ್ರಭಾಗದ ಮುಖ್ಯಸ್ಥ (ನಿವೃತ್ತ) |
ಅಭ್ಯಸಿಸಿದ ವಿದ್ಯಾಪೀಠ | ನ್ಯಾಷನಲ್ ಕಾಲೇಜ್, ಸೆಂಟ್ರೆಲ್ ಕಾಲೇಜ್, |
ಪ್ರಸಿದ್ಧಿಗೆ ಕಾರಣ | ಗ್ರಹ,ನಕ್ಷತ್ರಗಳು, ಅವುಗಳ ಚಲನೆ, ಧೂಮಕೇತು ಮೊದಲಾದವುಗಳ ಬಗ್ಗೆ ದೂರದರ್ಶನ, ಹಾಗೂ ಆಕಾಶವಾಣಿಯ ಭಾಷಣಗಳು. |
ಪ್ರಭಾವಿತರು | ಪ್ರೊ.ವಿ.ಸೀ, ಪ್ರೊ.ಜಿ.ಪಿ.ರಾಜರತ್ನಂ,ಪ್ರೊ.ತೀನಂಶ್ರೀ,ಮೊದಲಾದ ಮಹನೀಯರಿಂದ ಪ್ರಭಾವಿತರು. |
ಗಮನಾರ್ಹ ಪ್ರಶಸ್ತಿಗಳು | 'ಉದಯಭಾನು ಕಲಾ ಸಂಘದಿಂದ ಸಮಾಜಸೇವಾ ಪುರಸ್ಕಾರ' |
ಟಿಪ್ಪಣಿಗಳು ಆಕಾಶವಾಣಿ, ದೂರದರ್ಶನ ವಾಹಿನಿಯಲ್ಲಿ ಗ್ರಹಗಳ ಬಗ್ಗೆ, ಆಕಾಶದ ಬಗ್ಗೆ ಮಾಹಿತಿನೀಡಿದರು. ಡಾ.ರಾಜಾ ರಾಮಣ್ಣ, ಡಾ.ಸಿ.ಎನ್.ಆರ್.ರಾವ್, ಮೊದಲಾದ ಹೆಸರಾಂತ ವಿಜ್ಞಾನಿಗಳ ಸಂದರ್ಶನ ಮಾಡಿದರು. |
ಜನನ ಮತ್ತು ಬಾಲ್ಯ
ಪ್ರೊ.ರಾಮಕೃಷ್ಣರಾವ್, ಹೊಳಲ್ಕೆರೆ [1] ಚಿತ್ರದುರ್ಗ ಜಿಲ್ಲೆಯ ಚೀರನಹಳ್ಳಿ, ಮತ್ತು ಕುಡಿನೀರ ಕಟ್ಟೆ ಗ್ರಾಮಗಳ ಶ್ಯಾನುಭೋಗರಾಗಿದ್ದ, ಸುಂಕದ ವಂಶ ದ, ಶ್ರೀ.ಎಚ್.ವಿ.ರಂಗರಾವ್ ಅವರ, ನಾಲ್ಕು ಪುತ್ರರಲ್ಲಿ ಎರಡನೆಯವರು. ತಾಯಿ ಮಹಾಸಾಧ್ವಿ ,ಸಂಪ್ರದಾಯಗಳ ಹಾಡಿನ ರಾಧಮ್ಮನವರು. ರಾಮಕೃಷ್ಣರಾವ್ ಜನಿಸಿದ್ದು, ೩೦ ಮೇ ೧೯೩೫ ರಲ್ಲಿ. ಪ್ರಾಥಮಿಕ ಹಾಗೂ ಸೆಕೆಂಡರಿ ಶಿಕ್ಷಣಗಳು ಊರಿನಲ್ಲಿ ನಡೆದವು. ಬೆಂಗಳೂರಿನ 'ನ್ಯಾಷನಲ್ ಕಾಲೇಜ್' ನಲ್ಲಿ ಇಂಟರ್ಮೀಡಿಯೇಟ್ ಪಾಸ್ ಮಾಡಿ, ಸೆಂಟ್ರಲ್ ಕಾಲೇಜಿನಲ್ಲಿ, B.Sc; M.Sc; ಪದವಿಗಳನ್ನು ಪಡೆದರು. 'ನ್ಯಾಷನಲ್ ಕಾಲೇಜಿ'ನಲ್ಲಿದ್ದಾಗ 'ಡಾ.ಹೆಚ್ ನರಸಿಂಹಯ್ಯ' ನವರ ವ್ಯಕ್ತಿತ್ವ, ಆದರ್ಶ, ಕಾರ್ಯಕ್ಷಮತೆ ಮತ್ತು ಸಮರ್ಪಣಾಭಾವಗಳಿಂದ ಪ್ರಭಾವಿತರಾದರು. ಮುಂದೆ ಸೆಂಟ್ರೆಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ಸಂದರ್ಭದಲ್ಲಿ 'ಪ್ರೊ. ಜಿ.ಪಿ.ರಾಜರತ್ನಂ', 'ಪ್ರೊ. ವಿ.ಸೀತಾರಾಮಯ್ಯ' ,'ವೀ.ಸೀ,' ಅವರ ಮೇಲೆ ಗಾಢವಾದ ಪರಿಣಾಮ ಬೀರಿದರು. ಪ್ರೊ.ರಾಜರತ್ನಂ ಅವರ 'ಮಾತಿನವಾಗ್ಝರಿ, 'ಸ್ಪಷ್ಟ ಉಚ್ಚಾರಣೆ', ಅವರ ಮೇಲೆ ಮೋಡಿಯೇ ಮಾಡಿತ್ತು.
ಬೆಂಗಳೂರಿನ'ಸೆಂಟ್ರೆಲ್ ಕಾಲೇಜ್ ನಲ್ಲಿ ವಿದ್ಯಾಭ್ಯಾಸ
'ಬೆಂಗಳೂರಿನ ಸೆಂಟ್ರೆಲ್ ಕಾಲೇಜ್' ನಲ್ಲಿ 'ಪ್ರೊ. ಜಿ.ಪಿ.ರಾಜರತ್ನಂ' ಮತ್ತು 'ಪ್ರೊ.ವಿ.ಸೀ' ಯವರ ಜೊತೆಗಿನ ಒಡನಾಟ, ಅವರ ಮೇಲೆ ಬಹುದೊಡ್ಡ ಪರಿಣಾಮ ಬೀರಿತು. 'ಸೆಂಟ್ರೆಲ್ ಕಾಲೇಜ್ ಕರ್ನಾಟಕ ಸಂಘ'ದಲ್ಲಿ ಕಾರ್ಯದರ್ಶಿಯಾಗಿ, ಬಹಳ ಮಹತ್ವದ ಕೆಲಸಗಳನ್ನು ನಿರ್ವಹಿಸಿದರು.
ಸೆಂಟ್ರಲ್ ಕಾಲೇಜ್ ಕರ್ಣಾಟಕಸಂಘದ ಸೆಕ್ರೆಟರಿಯಾಗಿ, [2] ಸರ್ವಸಮ್ಮತದಿಂದ ಆಯ್ಕೆಯಾದರು. ಆಗಿನ ಕಾಲದಲ್ಲಿ ಇದು ಬಹಳ ಗೌರವಯುತವಾದ ಸ್ಥಾನ. ಸೆಂಟ್ರಲ್ ಕಾಲೇಜಿನ ಸಾಂಸ್ಕೃತಿಕ ಪರಿಸರ, ರಾಮಕೃಷ್ಣರಾಯರಿಗೆ ಕನ್ನಡದ ಮೇಲಿನ ಆಸಕ್ತಿ-ಪ್ರೀತಿಗಳ "ಮೊಳಕೆ ಒಡೆದ ತಾಣ" ವೆಂದು ರಾಯರು ತನ್ಮಯತೆಯಿಂದ ನೆನೆಸಿಕೊಳ್ಳುತ್ತಾರೆ.
'ದಿ ಕ್ರೈಸ್ಟ್ ಕಾಲೇಜ್' ನಲ್ಲಿ ಉಪಾಧ್ಯಾಯರಾಗಿ ಪಾದಾರ್ಪಣೆ
ಪದವಿಯ ನಂತರ, ಆಗ ತಾನೇ ಬೆಂಗಳೂರಿನ ಹೊಸೂರ್ ರಸ್ತೆಯಲ್ಲಿ ತಳವೂರುತ್ತಿದ್ದ,'ದಿ ಕ್ರೈಸ್ಟ್ ಕಾಲೇಜ್', ನಲ್ಲಿ ಪಾದಾರ್ಪಣೆ ಮಾಡಿದರು. ಉಪಾಧ್ಯಾಯರಾಗಿ ಸೇರಿದ ಅವರು ಭೌತಶಾಸ್ತ್ರ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗಗಳ ಮುಖ್ಯಸ್ಥರಾಗಿ, ಕೆಲಸ ಮಾಡಿ ಅತ್ಯಂತ ಪ್ರಭಾವೀ ವಿಜ್ಞಾನ ಶಿಕ್ಷಕರೆಂದು ಹೆಸರು ಪಡೆದರು. 'ಪ್ರೊ. ರಾಜು', 'ಪ್ರೊ. ರಾಘವೇಂದ್ರರಾಯರು,' ಮತ್ತು ಇತರರೊಡಗೂಡಿ, "ಕ್ರೈಸ್ಟ್ ಕಾಲೇಜ್ ಕನ್ನಡ ಸಂಘ" ವನ್ನು ಹುಟ್ಟು ಹಾಕುವಲ್ಲಿ ಮುಖ್ಯರಾದರು. ಇಂದಿಗೆ ಕ್ರೈಸ್ಟ್ ಕಾಲೇಜ್ ಕನ್ನಡ ಸಂಘ, ೧೦೦ ಕ್ಕು ಹೆಚ್ಚು ಕನ್ನಡ ಪುಸ್ತಕಗಳನ್ನು ಪ್ರಕಟಿಸಿ ಮಂಚೂಣಿಯಲ್ಲಿದೆ. ವಿಜ್ಞಾನವನ್ನು ಜನಪ್ರಿಯ ಮಾಡಲು ಅವರು ಶ್ರಮಿಸುತ್ತಲೇ ಬಂದಿದ್ದಾರೆ.
ವೃತ್ತಿ ಮತ್ತು ಪ್ರವೃತ್ತಿಗಳ ಮಧ್ಯದಲ್ಲಿ
ಕಾಲೇಜ್ ನೌಕರಿಯಿಂದ ನಿವೃತ್ತರಾದ ಮೇಲೂ, ವೈಜ್ಞಾನಿಕ ಪ್ರವೃತ್ತಿಯನ್ನು ಹಸಿರಾಗಿಟ್ಟುಕೊಂಡು ಅದನ್ನು ಬೆಳೆಸಿಕೊಂಡೇ ಬಂದರು. ಬೆಂಗಳೂರಿನಿಂದ ಪ್ರಸಾರವಾದ AIR ನ ವಿಜ್ಞಾನ ಕಾರ್ಯಕ್ರಮದಲ್ಲಿ, ೧೫೦ ಕ್ಕೂ ಹೆಚ್ಚು ವೈಜ್ಞಾನಿಕ-ಉಪನ್ಯಾಸಗಳನ್ನು ಕೊಟ್ಟಿದ್ದಾರೆ ! ಅವುಗಳೆಲ್ಲಾ ಮುಖ್ಯವಾಗಿ ಖಗೋಳಶಾಸ್ತ್ರ, ಮತ್ತು ನಕ್ಷತ್ರಗಳು, ಗ್ರಹಗಳಿಗೆ ಸಂಬಂಧಿಸಿದ್ದು. 'ಟಿ.ವಿ ಮತ್ತು ದೂರದರ್ಶನ'ದಲ್ಲಿ ಹಿರಿಯ ವಿಜ್ಞಾನಿಗಳಾದ, ಡಾ. ರಾಜಾರಾಮಣ್ಣ, ಡಾ. ಸಿ.ಎನ್.ಆರ್ ರಾವ್,ಡಾ.ಯು.ಆರ್.ರಾವ್, ಡಾ.ಎಮ್.ಆರ್.ಶ್ರೀ ನಿವಾಸನ್, ಮುಂತಾದವರ ಜೊತೆ ಸಂವಾದವನ್ನು ಮಾಡಿ, ಕಾರ್ಯಕ್ರಮಗಳನ್ನು ಕೊಟ್ಟರು. 'ರಾಮನ್ ಶತಮಾನೋತ್ಸವ'ದ ವಿಶೇಷ ಸಮಾರಂಭದಲ್ಲಿ 'ದೆಹಲಿ ದೂರದರ್ಶನ'ಕ್ಕೆ ಮಾಡಿದ "Raman,The natural Philosopher "ಎಂಬ 'ಸಾಕ್ಷಿ ಚಿತ್ರ' ಎಲ್ಲರ ವಿಶೇಷ ಮನ್ನಣೆಗೆ ಪಾತ್ರವಾಯಿತು. ವಿಜ್ಞಾನವನ್ನು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ಉಪನ್ಯಾಸ, ನಕ್ಷತ್ರ ವೀಕ್ಷಣೆ ಮುಂತಾದ ಕಾರ್ಯಕ್ರಮಗಳನ್ನು ಅಕಾಶವಾಣಿ ಹಾಗೂ ದೂರದರ್ಶನದಲ್ಲಿ ಕೊಡುತ್ತಲೇ ಬಂದಿದ್ದಾರೆ. ನಿವೃತ್ತಿಯ ಬಳಿಕವೂ ಅನೇಕ ಕಾಲೇಜುಗಳಲ್ಲಿ ವಿಶ್ವವಿದ್ಯಾಲಯಗಳಲ್ಲಿ 'ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ ಕನ್ನಡ ವಿಶ್ವಕೋಶಕ್ಕೆ ಅನೇಕ ಉಪಯುಕ್ತ ಲೇಖನಗಳನ್ನು ಬರೆಯುವ ಜೊತೆಗೆ, 'ವಿಜ್ಞಾನ ಲೇಖನಗಳ ಪರಿಶೋಧಕ'ರಾಗಿಯೂ ಸೇವೆಸಲ್ಲಿಸಿದ್ದಾರೆ.
ಬಹುಮುಖ ಚಟುವಟಿಕೆಗಳಲ್ಲಿನ ಆಸಕ್ತಿ
ಓದುವುದರ ಜೊತೆಗೆ ನೈಸರ್ಗಿಕ ಪ್ರದೇಶಗಳಿಗೆ 'ಚಾರಣ' ಮತ್ತು ಆಸಕ್ತ ವಿಶಯಗಳ ವಿಶೇಷ ಅಧ್ಯಯನಕ್ಕೆ ವಿದೇಶ ಪ್ರವಾಸ- ಇವು ರಾಯರ ಹವ್ಯಾಸಗಳು. [3]'ಉದಯಭಾನು ಸಂಸ್ಥೆ'ಯಲ್ಲಿ ನಡೆಸಿದ ಉಚಿತ ಪದವಿ ಪೂರ್ವ ತರಗತಿಗಳಿಗೆ, ಭೌತಶಾಸ್ತ್ರದ ಗೌರವವ ಪ್ರಾಧ್ಯಾಪಕ”ರಾಗಿ ಸತತವಾಗಿ ೧೦ ವರ್ಷ ದುಡಿದಿದ್ದಾರೆ ಮತ್ತು ವಿದ್ಯಾರ್ಥಿಗಳ, ಪೊಷಕರ ಮೆಚ್ಚುಗೆ ಗಳಿಸಿದ್ದಾರೆ. ಈಗ ಅವರು ೭೫ ವರ್ಷದ ಹರೆಯ ಮೇಷ್ಟ್ರು ! ವೈಜ್ಞಾನಿಕ ಮನೊವೃತ್ತಿಯನ್ನು ಚಿಕ್ಕಂದಿನಿಂದಲೇ ಮೈಗೂಡಿಸಿಕೊಂಡು ವಿಜ್ಞಾನದ ಪ್ರಚಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ೨೦೧೨ರಲ್ಲಿ 'ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ'ಯ ಅಧ್ಯಕ್ಷರಾಗಿ[4] ಆಯ್ಕೆಯಾಗಿದ್ದು, ಜನತೆಯಲ್ಲಿ ವೈಜ್ಞಾನಿಕ ಮನೋಭಾವ ಬಿತ್ತುವ ಜನ ವಿಜ್ಞಾನ ಅಂದೋಳನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಬೆಂಗಳೂರಿನ ಬಸವನಗುಡಿ ಜಿಲ್ಲೆಯಲ್ಲಿರುವ ಪ್ರತಿಷ್ಠಿತ 'ದ ನ್ಯಾಷನಲ್ ಕಾಲೇಜ್ ಸೈನ್ಸ್ ಫೋರಂ'[5] ನ ಕಾರ್ಯಕಾರಿ ಸಮಿತಿಯಲ್ಲಿ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
"ಸಮಾಜಸೇವಾ ಪುರಸ್ಕಾರ "
ರವರು[6] 'ಪ್ರತಿಷ್ಠಿತ ಉದಯಭಾನು ವಿದ್ಯಾರತ್ನ ಪುರಸ್ಕಾರ' ದಿಂದ ಸನ್ಮಾನಿತರಾದಾಗ]] ಬೆಂಗಳೂರಿನ ಕೆಂಪೇಗೌಡ ನಗರದಲ್ಲಿ, ರಾಮಕೃಷ್ಣ ಬಡಾವಣೆಯಲ್ಲಿರುವ, 'ಉದಯ ಭಾನು ಕಲಾಸಂಘ ' ನೋಂ. ಸಮಾಜ ಸೇವೆಯನ್ನು ನಿರಂತರವಾಗಿ ೪೦ ವರ್ಷಗಳಿಂದ ಮಾಡಿಕೊಂಡು ಬರುತ್ತಿದೆ. ಈ ಸಂಸ್ಥೆಯ ಈಗಿನ ಅಧ್ಯಕ್ಷರು, ಶ್ರೀ ಎನ್.ಆರ್.ಚಂದ್ರನ್ ಮತ್ತು ಸಂಸ್ಥಾಪಕ ಗೌ.ಕಾರ್ಯದರ್ಶಿಗಳು, ಎಂ.ನರಸಿಂಹರವರುಗಳು. ಬೆಂಗಳೂರು ನಗರದ ಸರ್ವತೋಮುಖ ಬೆಳವಣಿಗೆಯನ್ನು ದಾಖಲಿಸುವುದರ ಜೊತೆಗೆ, ನಗರದ ಸಾಂಸ್ಕೃತಿ ಸಾಹಿತ್ಯಗಳನ್ನು, ಸಮಾಜಸೇವೆಗಳನ್ನು ಗುರುತಿಸುವ, ಪ್ರೊತ್ಸಾಹಿಸುವ, ಗುರುತರ ಜವಾಬ್ದಾರಿಯನ್ನು ಸಂಘ ಯಶಸ್ವಿಯಾಗಿ ನಿರ್ವಹಿಸುತ್ತಿದೆ. 'ಉದಯ ಭಾನು ಉನ್ನತ ಅಧ್ಯಯನ ಕೇಂದ್ರ'ದ ಗೌ.ನಿರ್ದೇಶಕರಾಗಿಯೂ ಬೆಂಗಳೂರಿನ ಪ್ರತಿಷ್ಠಿತ 'ಸೈನ್ಸ್ ಫೋರಂನ ಖಜಾಂಚಿ'ಯಾಗಿ ಮತ್ತು 'ಕ್ರೈಸ್ಟ್ ಕಾಲೇಜಿನ ಕನ್ನಡ ಸಂಘದ ಸಂಸ್ಥಾಪಕ ಉಪಾಧ್ಯಕ್ಷ'ರಾಗಿ ಸೇವೆ ಸಲ್ಲಿಸುತ್ತಿರುವ, ಭೌತಶಾಸ್ತ್ರದ ಪ್ರಾಧ್ಯಾಪಕ, ಪ್ರೊ. ಶ್ರೀ ರಾಮಕೃಷ್ಣರಾಯರನ್ನು "ಉದಯಭಾನು ವಿದ್ಯಾರತ್ನ" ರೆಂದು ಗುರುತಿಸಿ ಸನ್ಮಾನಿಸಿದ್ದು ಒಂದು ಪ್ರಮುಖ ಸಂಗತಿಯಾಗಿದೆ.'ವಿಜ್ಞಾನ ಕ್ಷೇತ್ರದ ಪ್ರಾಮಾಣಿಕ ಪರಿಚಾಲಕ', ಪ್ರಾಮಾಣಿಕ ಕಳಕಳಿಯ ಚಿಂತಕರೂ, ಭೌತವಿಜ್ಞಾನದ ಪ್ರಾಧ್ಯಾಪಕರೂ ಆದ ಪ್ರೊ.ಶ್ರೀ ರಾಮಕೃಷ್ಣರಾವ್ ದಂಪತಿಗಳನ್ನು, 'ಉದಯ ಭಾನು ವಿದ್ಯಾರತ್ನ ಅಭಿನಂದನಾ ಪತ್ರ' ದಿಂದ ಗೌರವಿಸಿದರು. ಪ್ರೊ. ರಾಮಕೃಷ್ಣರಾವ್-ಲಲಿತ ದಂಪತಿಗಳಿಗೆ ಈ ಗೌರವ ಲಭ್ಯವಾದದ್ದು ಅವರ 'ಅಮೃತೋತ್ಸವ ಸಮಾರಂಭ'ದಂದು.
'ಉದಯಭಾನು ಸಂಸ್ಥೆ'ಯ ಸಮಾಜ ಸೇವಾ ಚಟುವಟಿಕೆಗಳು
[7] ’ಬೆಂಗಳೂರು ದರ್ಶನ'ದ ಎರಡು ಸಂಪುಟಗಳ ಪ್ರತಿಗಳನ್ನು ಓದಿದವರಿಗೆ 'ವಿಶ್ವಕೋಶ'ವನ್ನು ಓದಿದ ಅನುಭವವಾಗುತ್ತದೆ. ಬೆಂಗಳೂರು ನಗರ ಬೆಳೆದ ಬಗೆಯನ್ನು, ಅದರ ಬಹುಮುಖ ಸಾಧನೆಗಳನ್ನು ಮತ್ತು ವಿವರಗಳನ್ನು ಅತ್ಯಂತ ಸಮರ್ಥವಾಗಿ ಖಚಿತವಾಗಿ ಅದ್ಭುತವಾಗಿ ದಾಖಲಿಸಿರುವುದೇ ಇದರ ವಿಶಿಷ್ಠತೆಗಳಲ್ಲೊಂದು. ಇದರ ಪ್ರಧಾನ ಸಂಪಾದಕರು, ಹಿರಿಯ ಸಾಹಿತಿ, ಡಾ.ಎಲ್.ಎಸ್.ಶೇಷಗಿರಿರಾಯರು. ಅದರ ಪ್ರಕಾಶಕರು "ಉದಯಭಾನು ಕಲಾ ಸಂಘ, ಕೆಂಪೇಗೌಡ ನಗರ ಬೆಂಗಳೂರು-೫೬೦ ೧೧೯ ೧೨-೦೬-೧೯೬೫ ರಲ್ಲಿ, ಈ ಜನೋಪಕಾರಿ ಸಮಾಜಸೇವಾ ಮನೋಭಾವದ ಸಂಘ ಅಸ್ತಿತ್ವಕ್ಕೆ ಬಂತು.
ಕನ್ನಡ ಮತ್ತು ಆಂಗ್ಲಭಾಷೆಗಳಲ್ಲಿ ವಿಶೇಷ ಪ್ರಭುತ್ವ
ಪ್ರಮುಖವಾಗಿ ರಾಮಕೃಷ್ಣರಾಯರ ಕನ್ನಡ ಮತ್ತು ಆಂಗ್ಲಭಾಷೆಗಳ ಮೇಲಿರುವ, ಅದ್ಭುತ ಪ್ರಭುತ್ವ. ಯಾವ ವಿಷಯಗಳನ್ನಾದರೂ, ಅವುಗಳ ವಿವರಣೆಗಳನ್ನು ಸ್ಪಷ್ಟವಾಗಿ ಹೇಳುವ ಪರಿ ಅನನ್ಯ. ವಿಜ್ಞಾನದ ಪ್ರತಿಪದಗಳಿಗೂ ಕನ್ನಡದಲ್ಲಿ ಸೂಕ್ತ, ಸಮವಾದ ಅರ್ಥಕೊಡುವ ಪದಗಳನ್ನೂ, ವಾಕ್ಯಗಳನ್ನು ರಚಿಸುವ ಜಾಣ್ಮೆಯನ್ನು ಅವರ ಮಾತು-ಕತೆಗಳಲ್ಲಿ ಥಟ್ಟನೆ ಗುರುತಿಸಬಹುದು. ಇಂಗ್ಲೀಷ್ ಭಾಷೆಯಲ್ಲೂ, ತಮ್ಮ ಮಾತೃಭಾಷೆಯಷ್ಟೇ ಸುಲಭವಾಗಿ ಹೇಳಬಲ್ಲರು.
ವೈವಾಹಿಕ-ಜೀವನ
ಶ್ರೀಮತಿ. ಲಲಿತಾರವರೊಡನೆ ೪/೧/೨ ದಶಕಗಳ ಕಾಲದ ವೈವಾಹಿಕ ಜೀವನದಲ್ಲಿ ರಾಯರ ೩ ಹೆಣ್ಣು ಮಕ್ಕಳು ಮದುವೆಯಾಗಿ ಸಂತೃಪ್ತಿಯ ಜೀವನ ನಡೆಸುತ್ತಿದ್ದಾರೆ. ನಸುಕಿನಲ್ಲಿ ಎದ್ದು 'ವಾಯುವಿಹಾರ' ಮಾಡಿ ಮತ್ತೆ ಕೃತಿ ಅಭ್ಯಾಸದಲ್ಲಿ ತೊಡಗುತ್ತಾರೆ.ಕಣ್ಣಿನ ಶಸ್ತ್ರಚಿಕಿತ್ಸೆ ಯಾಗಿದೆ. ಹೃದಯದ ಆಪರೇಷನ್ ಕೂಡಾ ಆಗಿದೆ. ಆದರೆ ಇವ್ಯಾವೂ ಅವರ ಜೀವನೋತ್ಸಾಹ, ಕರ್ತವ್ಯಪ್ರಜ್ಞೆಯನ್ನು, ಕಿಂಚಿತ್ತೂ ಕಡಿಮೆಮಾಡಿಲ್ಲ. ಶ್ರೀಮತಿ.ಲಲಿತಾ ರಾಮಕೃಷ್ಣ, ೨೦೧೪ ರ ಮೇ, ೮ ನೇ ತಾರೀಖಿನ ಸಾಯಂಕಾಲ ಹೃದಯಾಘಾತದಿಂದ ನಿಧನರಾದರು.
ಸನ್ಮಾನಗಳು

- ಹವ್ಯಾಸಿ ಖಗೋಳ ಶಿಕ್ಷಕರ ಸಂಘ, ಶಿವಮೊಗ್ಗ. ಶಿವಮೊಗ್ಗ ಜಿಲ್ಲಾ ಪ್ರೌಢಶಾಲಾ ಸಹಶಿಕ್ಷಕರ ಸಂಘ ಶಿವಮೊಗ್ಗ. ’ಜ್ಞಾನವಿಜ್ಞಾನ ಭೂಷಣ’,[8] ಬಿರುದು ಕೊಟ್ಟು, ಗೌರವಿಸಿದ್ದಾರೆ.
ಬರೆದ ಪಠ್ಯಪುಸ್ತಕಗಳು, ಮತ್ತು ವಿಜ್ಞಾನವನ್ನು ಪ್ರಸಿದ್ಧಪಡಿಸಲು ವಿಶೇಷವಾಗಿ ರಚಿಸಿದ ಕೃತಿಗಳು :
- 'ನಿಶ್ಯಬ್ದದೊಳಗಿನ ಶಬ್ದ',
- 'ಶಕ್ತಿಗಾಥೆ',
- 'ಪರಮಾಣು ಪ್ರಪಂಚ',
- 'ಅದೃಷ್ಯ ಬೆಳಕು-ಎಕ್ಸ್ -ರೇ' ಮುಂತಾದವುಗಳು.[9]
ರಾಮಕೃಷ್ಣರಾವ್ ಸಂಪಾದಿಸಿದ ಕೃತಿಗಳು :
- ಬೆಂಗಳೂರಿನ ಪಿ.ಯು ವಿದ್ಯಾರ್ಥಿಗಳಿಗಾಗಿಯೇ ವಿಶೇಷವಾಗಿ ಬರೆದ ಭೌತಶಾಸ್ತ್ರದ ಪಠ್ಯ ಪುಸ್ತಕಗಳು
- 'The Quest'- A Biography of a Scientist,
- 'ಅಂತರಿಕ್ಷ',
- 'ಶುಕ್ರ ಸಂಕ್ರಮ',
- 'ಒಲವಿನ ಶಿಲೆ-ಅಯಸ್ಕಾಂತ',
- 'ನಂಬಿಕೆ-ಮೂಢನಂಬಿಕೆ',
- 'ಕಲಾಂ ಮೇಷ್ಟ್ರು'-(ಮಕ್ಕಳಿಗಾಗಿಯೇ ಬರೆದ ಸಚಿತ್ರ-ಪುಸ್ತಕ) [10]
- 'ಕಾಸ್ ಮಾಸ್' ಮತ್ತು 'ನಮ್ಮ ವಿಶ್ವ' ಎಂಬ 'ಸಾಕ್ಷಿಚಿತ್ರ'ಗಳನ್ನು ಮಾಡಿದರು.
- 'ನಿಮಗೆ ತಿಳಿದಿರಲಿ' ಎಂಬ ಧ್ವನಿ ಸುರಳಿ [CD] ಬಿಡುಗಡೆಮಾಡಿದರು.
- 'ಬಿಗ್ ಬ್ಯಾಂಗ್' !? ಎಂಬ ಮಾನೋಗ್ರಾಫ್, ಬೆಂಗಳೂರು ಸೈನ್ಸ್ ಫೋರಮ್ ನ ವತಿಯಿಂದ, ೪ ನೇ, ಅಕ್ಟೋಬರ್, ೨೦೦೮ ರಂದು, ಆಹ್ವಾನಿತ ಶ್ರೋತೃಗಳ ಸಮ್ಮುಖದಲ್ಲಿ ಬಿಡುಗಡೆಯಾಯಿತು. ಅನಂತರ ನಡೆದ ಸಂವಾದದಲ್ಲಿ, ಬಹಳಮಂದಿ ಉಪಸ್ಥಿತರಿದ್ದು, ಹಿರಿಯ ಪ್ರೊಫೆಸರ್ ರಾವ್ ಅವರ, ಜ್ಞಾನದ ಲಾಭ ಪಡೆದರು. ಪುಸ್ತಕದ ಪ್ರಕಟಣೆಯನ್ನು ’ಭಾರತ ಜ್ಞಾನ ವಿಜ್ಞಾನ ಸಮಿತಿ’ ವಹಿಸಿಕೊಂಡಿತ್ತು.
- 'ಸರ್ ಐಸಾಕ್ ನ್ಯೂಟನ್,
- 'ಇತಿಹಾಸದಲ್ಲಿ ವಿಜ್ಞಾನ'
- 'ಸಂಕ್ಷಿಪ್ತ ಖಗೋಳ ವಿಜ್ಞಾನ ಚರಿತ್ರೆ'
- 'ಪ್ರಳಯ-೨೦೧೨'
- 'Running through the storm'-Biography of Dr. S.S.Iyengar
- 'ಕರ್ಣಾಟಕ ಭಾಗವತ', ದ ಕೃತಿ ಸಂಪಾದನಾ ಸಮಿತಿಯ ಸದಸ್ಯರಾಗಿ, ಪ್ರೊ.ರಾವ್ ಬಹುಮೂಲ್ಯ ಯೋಗದಾನವನ್ನು ಮಾಡಿದ್ದಾರೆ. ಇದನ್ನು ಒಟ್ಟಾರೆ ಸಂಪಾದಿಸಿ, ಹೊರತಂದ, ಲಿಪಿಕಾರ ಡಾ.ಹೆಚ್.ಆರ್.ಚಂದ್ರಶೇಖರ್, ಈ ಬೃಹದ್ ಗ್ರಂಥದ ಸಂಪಾದನೆಯ ಕೆಲಸವನ್ನು ಸುಮಾರು ೧೩ ವರ್ಷಗಳ ಹಿಂದೆ ಕೈಗೆತ್ತಿಕೊಂಡಿದ್ದರು. ಅಮೆರಿಕೆಯ, 'ಹೂಸ್ಟನ್ ಕನ್ನಡ ವೃಂದ'ದ, ಬೆಳ್ಳಿ ಹಬ್ಬದ ಆಚರಣೆ, ಯ ಶುಭಾರಂಭದ ಶುಭ ಅವಸರದಲ್ಲಿ 'ಕರ್ಣಾಟಕ ಭಾಗವತ' ದ ಎರಡು ಸಂಪುಟಗಳು, ಏಪ್ರಿಲ್, ೧೨, ೨೦೦೮ ರಂದು, ಬಿಡುಗಡೆ ಯಾಗಿ, ಓದುಗರ ಕೈ ಸೇರಿವೆ. ಮುಂಬೈನ ಸಯಾಂ ಜಿಲ್ಲೆಯಲ್ಲಿರುವ 'ಗೋಕುಲ ಕನ್ನಡ ಸಂಘ'ದಲ್ಲಿ ಕರ್ಣಾಟಕ ಭಾಗವತದ ೨ ಗ್ರಂಥಗಳನ್ನು ಅಲ್ಲಿಯೇ ನಿರ್ಮಿಸಿರುವ 'ಕೃಷ್ಣ ಮಂದಿರದಲ್ಲಿ ಶ್ರೀಕೃಷ್ಣದೇವರಿಗೆ ಸಮರ್ಪಣೆ'ಮಾಡಲಾಯಿತು.[11] ಆ ದಿನವೇ ಆಹ್ವಾನಿತ ಶ್ರೋತೃಗಳ ಸಮ್ಮುಖದಲ್ಲಿ ಕರ್ಣಾಟಕ ಭಾಗವನ್ನು ಸಂಪಾದಿಸುವಾಗ ಆದ ಹಲವಾರು ತೊಡಕುಗಳ ಬಗ್ಗೆ ವಿಶದವಾಗಿ ಪ್ರೊ.ರಾವ್ ಬೆಳಕು ಚೆಲ್ಲಿದರು. ನಂತರ ಭಾಗವತದಿಂದ ಆಯ್ದ ಕೆಲವು ಶ್ಲೋಕಗಳನ್ನು ಸಭಿಕರ ಮುಂದೆ ಪಾರಾಯಣ ಮಾಡಲಾಯಿತು.
- ಪ್ರೊ. ರಾಮಕೃಷ್ಣರಾವ್ ಅಮೆರಿಕ ದೇಶದ ಬಾನುಲಿ ಕೇಂದ್ರದಲ್ಲಿ ವಿಜ್ಞಾನದ ಬಗ್ಗೆ ಉಪನ್ಯಾಸನೀಡಿ, ಅಲ್ಲಿನ ಜನರಆಸಕ್ತಿಗಳಿಗೆ ಸ್ಪಂದಿಸಿದ್ದರು.[12]
- 'ಕನ್ನಡದಲ್ಲಿ ವಿಜ್ಞಾನ ಸಂವಹನೆ' ಪುಸ್ತಕದ ಸಂಪಾದನೆ, ಶ್ರೀ.ಟಿ. ಅರ್. ಅನಂತರಾಮು ರವರ ಜೊತೆಗೂಡಿ.
'ಡಾ.ಸುಬ್ರಹ್ಮಣ್ಯನ್ ಚಂದ್ರಶೇಖರ್' ಬಗ್ಗೆ ಬರೆದ ಕನ್ನಡ-ಪುಸ್ತಕ
ಭೌತಶಾಸ್ತ್ರದಲ್ಲಿ ಸಾಧನೆಯನ್ನು ಮಾಡಿ, 'ನೊಬೆಲ್ ಪ್ರಶಸ್ತಿ ಪುರಸ್ಕೃತ'ರಾದ 'ಡಾ.ಎಸ್.ಚಂದ್ರಶೇಖರ್' ಅವರ 'ನೂರನೆ ಹುಟ್ಟುಹಬ್ಬದ ಶುಭ ಸಂದರ್ಭ'ಕ್ಕಾಗಿಯೇ 'ಪ್ರೊ.ಎಚ್.ಆರ್.ರಾಮಕೃಷ್ಣರಾವ್' ಬರೆದು ಸಿದ್ಧಪಡಿಸಿದ ಪುಸ್ತಕವನ್ನು, 'ಬೆಂಗಳೂರಿನ ಭವನದ ಗಾಂಧಿ ಸೈನ್ಸ್ ಸೆಂಟರ್' ನ ವತಿಯಿಂದ ಪ್ರಕಟಿಸಲಾಗಿತ್ತು. ಅದನ್ನು, ಮುಂಬೈನ ಪ್ರತಿಷ್ಠಿತ 'ಟಿ.ಐ.ಎಫ್.ಆರ್. ಸಂಸ್ಥೆಯ ಮಾಜೀ ನಿರ್ದೇಶಕ'ರಾದ, 'ಡಾ. ಬಿ.ವಿ.ಶ್ರೀಕಂಠನ್' ರವರು, 'ಬೆಂಗಳೂರಿನ ನ್ಯಾಷನಲ್ ಕಾಲೇಜಿನ ಸಭಾಂಗಣ'ದಲ್ಲಿ ಆಹ್ವಾನಿತ ಗಣ್ಯರ ಸಮ್ಮುಖದಲ್ಲಿ ಬಿಡುಗಡೆ ಮಾಡಿದರು.[13]
ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ (KJVS)
'ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಹೊಸ ಅಧ್ಯಕ್ಷರಾಗಿ [14] ಪ್ರೊ. ಎಚ್. ಆರ್. ರಾಮಕೃಷ್ಣರಾವ್ ಕಾರ್ಯನಿರ್ವಹಿಸುತ್ತಿದ್ದಾರೆ'.
೮೦ ನೆಯ ಹುಟ್ಟುಹಬ್ಬದ ಕಾರ್ಯಕ್ರಮ
ಪ್ರೊ. ಎಚ್.ಆರ್. ರಾಮಕೃಷ್ಣರಾವ್ ರವರ ೮೦ ನೆಯ ಹುಟ್ಟುಹಬ್ಬವನ್ನು ಅವರ ಗೆಳೆಯರು, ಹಿತೈಷಿಗಳು ಮತ್ತು ವಿದ್ಯಾರ್ಥಿಗಳು, ಕನ್ನಡಿಗರು, ೨೦೧೫ ರ, ಮೇ, ೩೦ ರಂದು, ಸಂಭ್ರಮದಿಂದ ಆಚರಿಸಿದರು.
ಉಲ್ಲೇಖಗಳು
- ಹೊಳಲ್ಕೆರೆಗ್ರಾಮದ ಬಗ್ಗೆ ಮಾಹಿತಿ
- http://www.shorpy.com/node/9052
- http://www.kscst.iisc.ernet.in/outreach/outreach1.html
- citizenmatters. in/articles/1215-bangalore-science-forum-2009 Bamgalore Science Forum
- The Bangalore Science Forum, 15-04-2015, Wednesday,(2631)Prof.H.R.RAMAKRISHNA RAO,Formerly,Head of the Dept.of Physics,Christ College & Treasurer, Spoke on the subject, Cosmos-21st Century'
- http://archive.deccanherald.com/Deccanherald/jan172005/snt6.asp
- http://bedrefoundation.blogspot.in/2011/03/subhashita-sukthi-mala-and-dr.html
- * 'Release of Karnataka Bhagavata on Sunday'
- Public lectures by Professor Ajit Varki
- ಕಲಾಂ ಮೇಷ್ಟ್ರು
- ನಮ್ಮ ಭಾರತೀಯ ಪರಂಪರೆಯ ಪುನರುತ್ಥಾನಕ್ಕೆ ನಾಂದಿಹಾಡಿದ ಅತ್ಯುತ್ತಮ ಗ್ರಂಥಗಳಲ್ಲೊಂದು-ಕರ್ಣಾಟಕ ಭಾಗವತ
- http://nammabellary.com/tourism/item/32-s-manjunatha/32-s-manjunatha.html?start=50
- http://www.gccworld.in/oct2007/newsandevents3.html
- ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಹೊಸ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ
ಬಾಹ್ಯ ಸಂಪರ್ಕಗಳು
- 'ಬೆಂಗಳೂರು ದರ್ಶನ, ಮೂರು ಸಂಪುಟಗಳ ಒಳನೋಟವೆಂಬ ಸಮಾಲೋಚನೆ'ಯ ಸಮಯದಲ್ಲಿ ಉದಯಭಾನು ಕಲಾ ಸಂಘದ ವೇದಿಕೆಯ ಮೇಲೆ ಆಹ್ವಾನಿತ ಗಣ್ಯರ ಮಧ್ಯೆ, ಸಭಿಕರನ್ನುದ್ದೇಶಿಸಿ ಮಾಡಿದ ಅಧ್ಯಕ್ಷೀಯ ಭಾಷಣದ ವೀಡಿಯೋ
- ಲೇಖಕ ಎಚ್.ಆರ್. ರಾಮಕೃಷ್ಣ ಅಭಿಮತ
- February 15, 2002, oneindia.com 'ಆಕಾಶ ಕಾಯಗಳು ಅಥವಾ ನಿದ್ದೆ ...ಯಾವುದನ್ನು ಆಯ್ದುಕೊಳ್ಳುತ್ತೀರಿ'?