ಸು.ರಂ.ಎಕ್ಕುಂಡಿ
ಸು.ರಂ. ಎಕ್ಕುಂಡಿ - ಕನ್ನಡದ ಅತ್ಯಂತ ಶ್ರೇಷ್ಠ ಕಥನ ಕವನಗಳ ಕವಿ ಮತ್ತು ಸಾಹಿತಿ.ಇವರ ಪೂರ್ಣ ಹೆಸರು ಸುಬ್ಬಣ್ಣ ರಂಗಣ್ಣ ಎಕ್ಕುಂಡಿ. ಇವರು ಹುಟ್ಟಿದ್ದು ೧೯೨೩ ಜನವರಿ ೨೦ರಂದು, ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನಲ್ಲಿ. ೧೯೪೪ರಲ್ಲಿ ಬಿ.ಎ.(ಆನರ್ಸ್) ಪದವಿ ಪಡೆದ ಎಕ್ಕುಂಡಿಯವರು ಉತ್ತರ ಕನ್ನಡ ಜಿಲ್ಲೆಯ ಬಂಕಿಕೊಡ್ಲದಲ್ಲಿ ಪ್ರೌಢಶಾಲೆಯ ಅಧ್ಯಾಪಕರಾದರು. ೩೫ ವರ್ಷಗಳ ಸೇವೆಯ ನಂತರ ಅಲ್ಲಿಯೆ ಮುಖ್ಯಾಧ್ಯಾಪಕರಾದರು.[1] [2] [3]
ಸು. ರಂ. ಎಕ್ಕುಂಡಿ | |
---|---|
ಜನನ | ೧೯೨೩ ರಾಣೆಬೆನ್ನೂರು, ಹಾವೇರಿ ಜಿಲ್ಲೆ, ಕರ್ನಾಟಕ |
ಮರಣ | ೧೯೯೫ ಬೆಂಗಳೂರು |
ವೃತ್ತಿ | ಕವಿ ಮತ್ತು ಶಿಕ್ಷಕ |
ರಾಷ್ಟ್ರೀಯತೆ | ಭಾರತ |
ಪ್ರಕಾರ/ಶೈಲಿ | ಕವಿತೆ |
ಪ್ರಮುಖ ಪ್ರಶಸ್ತಿ(ಗಳು) | ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ನ್ಯಾಶನಲ್ ಅವಾರ್ಡ್ ಫಾರ್ ಟೀಚರ್ಸ್s, ಸೋವಿಯತ್ ಲ್ಯಾಂಡ್ ಅವಾರ್ಡ್. |
ಕೃತಿಗಳು
ಕಾವ್ಯ
- ಶ್ರೀ ಆನಂದತೀರ್ಥರು
- ಸಂತಾನ
- ಹಾವಾಡಿಗರ ಹುಡುಗ
- ಮತ್ಸ್ಯಗಂಧಿ
- ಬೆಳ್ಳಕ್ಕಿಗಳು
ಕಥಾಸಂಕಲನ
- ನೆರಳು
ಕಾದಂಬರಿ
- ಪ್ರತಿಬಿಂಬಗಳು
ಪರಿಚಯ
- ಶ್ರೀ ಪು.ತಿ.ನರಸಿಂಹಾಚಾರ್ಯರು
ಅನುವಾದ
- ಎರಡು ರಶಿಯನ್ ಕಾದಂಬರಿಗಳು
ಪುರಸ್ಕಾರ
- "ಲೆನಿನ್ನರ ನೆನಪಿಗೆ" ಎನ್ನುವ ಕೃತಿಗೆ ೧೯೭೦ರಲ್ಲಿ ಸೋವಿಯತ್ ಲ್ಯಾಂಡಿನ ನೆಹರು ಪುರಸ್ಕಾರ ದೊರೆತಿದೆ.
- "ಮತ್ಸ್ಯಗಂಧಿ" ಕವನ ಸಂಕಲನಕ್ಕೆ ೧೯೭೫ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ ದೊರೆತಿದೆ.
- "ಬೆಳ್ಳಕ್ಕಿಗಳು" ಹಸ್ತಪ್ರತಿಗೆ ೧೯೮೨ರಲ್ಲಿ ಮುದ್ದಣ ಸ್ಮಾರಕ ಕಾವ್ಯ ಬಹುಮಾನ ದೊರೆತಿದೆ.
- "ಬಕುಲದ ಹೂವುಗಳು" ಎಂಬ ಕೃತಿಗೆ ೧೯೯೨ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ.
ಉಲ್ಲೇಖಗಳು
- K. M. George (1992). Modern Indian Literature, an Anthology. Sahitya Akademi. p. 678. ISBN 81-7201-324-8.
- Amaresh Datta (1988). Encyclopaedia of Indian literature vol. 2. Sahitya Akademi. p. 1142. ISBN 81-260-1194-7.
- Article In The Hindu newspaper ಸು.ರಂ.ಎಕ್ಕುಂಡಿ.
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.