ಭಾರತೀಯ ತತ್ವಶಾಸ್ತ್ರ

ಭಾರತೀಯ ತತ್ತ್ವಶಾಸ್ತ್ರ

ಭಾರತವು ವೇದಿಕ ಕಾಲದ ಕೊನೆಯಲ್ಲಿ ಉಪನಿಷತ್ತುಗಳ ರಚನೆಯಷ್ಟು ಹಿಂದಿನದಾದ ಸಮೃದ್ಧ ಮತ್ತು ಭಿನ್ನವಾದ ತತ್ವಶಾಸ್ತ್ರೀಯ ಸಂಪ್ರದಾಯವನ್ನು ಹೊಂದಿದೆ. ರಾಧಾಕೃಷ್ಣನ್‍ರ ಪ್ರಕಾರ, ಇವುಗಳಲ್ಲಿ ಅತ್ಯಂತ ಹಳೆಯದು "...ವಿಶ್ವದ ಅತ್ಯಂತ ಮುಂಚಿನ ತತ್ವಶಾಸ್ತ್ರೀಯ ರಚನೆಗಳಾಗಿವೆ." ಮಧ್ಯಯುಗದ ಕೊನೆಯ ವರ್ಷಗಳಿಂದ (ಕ್ರಿ.ಶ. ೧೦೦೦-೧೫೦೦) ಭಾರತೀಯ ತತ್ವಶಾಸ್ತ್ರದ ವಿವಿಧ ಪರಂಪರೆಗಳು (ದರ್ಶನಗಳು) ಅವು ವೇದವನ್ನು ಜ್ಞಾನದ ದೋಷಾತೀತ ಮೂಲವೆಂದು ಪರಿಗಣಿಸುತ್ತವೆಯೋ ಎಂಬುದನ್ನು ಆಧರಿಸಿ ಸಾಂಪ್ರದಾಯಿಕ (ಆಸ್ತಿಕ) ಅಥವಾ ಅಸಾಂಪ್ರದಾಯಿಕ (ನಾಸ್ತಿಕ) ಎಂದು ಗುರುತಿಸಲ್ಪಟ್ಟಿವೆ.

ಭಾರತೀಯ ತತ್ವಶಾಸ್ತ್ರವು ಭಾರತ ಭೂಖಂಡದ ಪುರಾತನದ ತಾತ್ವಿಕ ಸಂಪ್ರದಾಯಗಳನ್ನು ಒಳಗೊಂಡಿದೆ. ಭಾರತೀಯ ತತ್ವಶಾಸ್ತ್ರದ ಶಾಲೆಗಳಲ್ಲಿ ಶಾಸ್ತ್ರೀಯ ಅಥವ ಅಶಾಸ್ತ್ರೀಯ - ಆಸ್ತಿಕ ಮತ್ತು ನಾಸ್ತಿಕ ದ ಬಗ್ಗೆ ಹೇಳಿಕೊಡುತ್ತಿದ್ದರು. ಇದು ಮೂರು ಪರ್ಯಾಯದ ಮಾನದಂಡದ ಮೇಲೆ ಪರಿಗಣಿಸಲಾಗಿದೆ. ಅವು ಬಹುಶಃ ವೇದವೇ ಜ್ಞಾನದ ಸೂಕ್ತ ಮೂಲ ಎಂದು; ಅಥವಾ ಶಾಲೆಯ ಬ್ರಹ್ಮ ಮತ್ತು ಆತ್ಮನ್ ಆವರಣದಲ್ಲಿ ನಂಬಿಕೆಯೇ ಎಂದು; ಮತ್ತು ಶಾಲಾ ಮರಣಾನಂತರದ ಮತ್ತು ದೇವತೆಗಳ ನಂಬಿಕೆ ಎಂಬುದನ್ನು.

ಶಾಸ್ತ್ರೀಯ ಶಾಲೆಯ ೬ ಪ್ರಮುಖ ಹಿಂದು ತತ್ವಗಳಾದ - ನ್ಯಾಯ, ವೈಶೇಷಿಕ, ಸಾಂಖ್ಯ, ಯೋಗ, ಮೀಮಾಂಸ ಹಾಗೂ ವೇದಾಂತವನ್ನು ಮತ್ತು ಅಶಾಸ್ತ್ರೀಯ ಶಾಲೆಯ ನಾಲ್ಕು ಪ್ರಮುಖ ಜೈನ್, ಬೌದ್ಧ, ಅಜೀವಿಕ ಮತ್ತು ಚಾರ್ವಾಕ ಎಂಬ ತತ್ವಗಳು ಇವೆ.

ನೋಡಿ

ದರ್ಶನಶಾಸ್ತ್ರ
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.