ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ
ಸಂಸ್ಥಾನಗಳು ಬ್ರಿಟಿಷರ ವಶವಾಗಿದ್ದವು. ಇದರಿಂದಾಗಿ ಭಾರತೀಯರು ಅಸಮಾಧಾನಗೊಂಡರು. ಇವರ ಆಡಳಿತದ ಬಗ್ಗೆಯೂ ಕೂಡಾ ಜನರಲ್ಲಿ ಅಸಮಾಧಾನವಿತ್ತು. ಸಮಾಧಾನವು 1857ರಲ್ಲಿ ಮಹಾಪ್ರತಿಭಟನೆಯ ರೂಪದಲ್ಲಿ ಸ್ಫೋಟಿಸಿತ್ತು. ಇದನ್ನು ಕೆಲವು ಭಾರತೀಯ ಇತಿಹಾಸಕಾರರು 'ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ' ಎಂದು ಕರೆದರೆ, ಇಂಗ್ಲಿಷ್ ಇತಿಹಾಸಕಾರರು ಇದೊಂದು 'ಸಿಪಾಯಿ ದಂಗೆ' ಮಾತ್ರ ಎಂದಿದ್ದಾರೆ,
=ಪಿಠಿಕೆ಼
ಭಾರತದಲ್ಲಿ ತಮ್ಮ ಅಧಿಕಾರ ವಿಸ್ತರಣೆ ಉದ್ದೇಶದಿಂದ ಇಂಗ್ಲಿಷರು ಸಹಾಯಕ ಸೈನ್ಯ ಪದ್ಧತಿ ಮತ್ತು ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಗಳನ್ನು ಜಾರಿಗೆ ತಂದಿದ್ದರು. ನೀತಿಗಳಿಂದ ಹಲವು
ವಿವಿಧ ವಿದ್ವಾಂಸರ ಪ್ರಕಾರ ಇದೊಂದು ಸಂಪೂರ್ಣ ಸಿಪಾಯಿ ದಂಗೆ ಹೊರತು ಮತ್ತೇನೂ ಅಲ್ಲ ಸ್ವಲ್ಪ ಮಟ್ಟಿನ ಜನತೆಯ ಹೋರಾಟವಾಗಿತ್ತು ಎಂದು ಆಂಗ್ಲ ವಿದ್ವಾಂಸರಾದ ವಿ.ಎ .ಸ್ಮಿತ್ ಹೇಳಿದ್ದಾರೆ. ಭಾರತೀಯ ಇತಿಹಾಸಗಾರ ಹಾಗು ವಿದ್ವಾಂಸ ವಿ. ಡಿ ಸರ್ವಕರ್ ತಮ್ಮ 1857' ಭಾರತ ಸ್ವಾತಂತ್ರ್ಯ ಸಂಗ್ರಾಮ' ಎಂಬ ಕೃತಿಯಲ್ಲಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎಂದು ಉಲ್ಲೇಖಿಸಿದ್ದಾರೆ.
- -ರಾಜಕೀಯ ಕಾರಣ
1.ಬಿಟಿಷರ ದತ್ತು ಮಕ್ಕಳಿಗೆ ಹಕ್ಕಿಲ್ಲ ಮತ್ತು ಸಹಾಯಕ ಸೈನ್ಯ ಪದ್ಧತಿ ನೀತಿಗಳು ಅಸಮಾಧಾನ ಉಂಟುಮಾಡಿತು.
2. ಜಮೀನ್ದಾರಿ ಭೂಮಿಯನ್ನು ವಶಪಡಿಸಿ ಕೊಂಡಿದ್ದು. 3. ಭಾರತೀಯರಿಗೆ ಉನ್ನತ ಹುದ್ದೆಗಳ ನಿರಾಕರಣೆ. 4. ಬ್ರಿಟಿಷ್ ಅಧಿಕಾರಿಗಳ ಭ್ರಷ್ಟ ಮತ್ತು ನಿರಂಕುಶ ಆಡಳಿತ. ರಾಜಕೀಯ ಕಾರಣಗಳು : ಬ್ರಿಟಿಷರು ಜಾರಿಗೆ ತಂದಿದ್ದ 'ದತ್ತು | ದತ್ತು ಮಕ್ಕಳಿಗೆ ಹಕ್ಕಿಲ್ಲ: ಈ ನೀತಿಯನ್ನು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯಿಂದಾಗಿ ಹಲವು ದೇಶಿ | ಇಂಗ್ಲಿಷರ ಕಾಲದಲ್ಲಿ ಲಾರ್ಡ್ ಡಾಲ್ ಸಂಸ್ಥಾನಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳಬೇಕಾಯುತು. ಹೌಸಿಂದು ಜಾರಿಗೆ ತಂದಿದ್ದನು. ಈ ನೀತಿಯಿಂದಾಗಿ ಸತಾರ, ಜೈಪುರ, ರವಾನಿ, ಉದಯಪುರ | ರಾಮ ಕೆ ತರ ಇ ದಯರರ ಯಾವುದೇ ದೇಶೀಯ ಸಂಸ್ಥಾನದ ಮೊದಲಾದ ಸಂಸ್ಥಾನಗಳು ಬ್ರಿಟಿಷರ ವಶವಾದವು. ರಾಜನು ತನಗೆ ಮಕ್ಕಳಿಲ್ಲದಿದ್ದರೆ ರಾಜ್ಯವನ್ನು ದತ್ತು ಮಕ್ಕಳಿಗೆ ಡಾಲ್ಹೌಸಿಯು ತಂಜಾವೂರು ಮತ್ತು ಕರ್ನಾಟಕ ನವಾಬರಿಗಿದ್ದ | 'ಸಮ ತಂದವರು ಜಮುತ್ತು ರೆರ್ಟ ಟರ್ ಬಳಿಗಿಟ್ಟ | ನೀಡುವಂತಿರಲಿಲ್ಲ. ಇದರಿಂದಾಗಿ 9 ರಾಜ ಪದವಿಗಳನ್ನು ರದ್ದುಪಡಿಸಿದನು, ಮೊಘಲ್ ಚಕ್ರವರ್ತಿ. | ಸಂಸ್ಥಾನವು ಸಹಜವಾಗಿ ಇಂಗ್ಲಿಷರ ಔದ್ನ ನವಾಬ ಮೊದಲಾದ ರಾಜರುಗಳನ್ನು ಇಂಗ್ಲಿಷರು | ಆಕೆಗೆ ಒಳಪಡುತ್ತಿದ್ದವು. ಅಧಿಕಾರದಿಂದ ಪದಚ್ಯುತಗೊಳಿಸಿದರು. ಪರಿಣಾಮವಾಗಿ ಇವರನ್ನು ಅವಲಂಬಿಸಿದ ಲಕ್ಷಾಂತರ ಸೈನಿಕರು ನಿರುದ್ಯೋಗಿಗಳಾದರು. ಇದು ಬ್ರಿಟಿಷರ ವಿರುದ್ಧದ 1857ರ ಪ್ರತಿಭಟನೆಗೆ ಪ್ರೇರಕವಾಯಿತು,
- -ಆರ್ಥಿಕ ಕಾರಣ
1. ಬ್ರಿಟಿಷರ ಭೂಕಂದಾಯ ನೀತಿಗಳಿಂದಾಗಿ ಜೀವನಾಧಾರ ಉದ್ಯೋಗಗಳನ್ನು ಭಾರತೀಯರು ಕಳೆದುಕೊಂಡರು. 2. ಬ್ರಿಟಿಷರ ಕೈಗಾರಿಕಾ ನೀತಿಯಿಂದಾಗಿ ಭಾರತದ ಗುಡಿ ಕೈಗಾರಿಕೆಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಂಡವು. 3. ಕಡಿಮೆ ಬೆಲೆಗೆ ಭಾರತದಿಂದ ಕಚ್ಚಾ ವಸ್ತುಗಳನ್ನು ಕೊಂಡು ಅವುಗಳನ್ನು ನಮ್ಮ ದೇಶಕ್ಕೆ ಸಾಗಿಸಿ ಸಿದ್ಧ ವಸ್ತುಗಳನ್ನು ಮಾಡಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ್ದು. 4 ದಾದಾಬಾಯಿ ನವರೋಜಿ ಅವರ ಸಂಪತ್ತಿನ ಸೋರಿಕೆ ಸಿದ್ದಾಂತ ಪುಸ್ತಕವೂ ಭಾರತೀಯರಲ್ಲಿ ಬ್ರಿಟಿಷರ ಆಡಳಿತ ವಿರುದ್ಧ ದನಿ ಎತ್ತುವ ಮಾಡಿತು.
- -ಸಾಮಾಜಿಕ ಕಾರಣ
1. ಭಾರತೀಯರ ಧಾರ್ಮಿಕ ವಿಷಯಗಳಲ್ಲಿ ಬ್ರಿಟಿಷರ ಮಧ್ಯಪ್ರವೇಶ. 2.ಕ್ರಿಶ್ಚಿಯನ್ ಮಿಷನರಿಗಳಿಗೆ ಭಾರತೀಯರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಿಸಲು ಉತ್ತೇಜನ ಕೊಟ್ಟಿದ್ದು. 3. ಸತಿ ಪದ್ದತಿ ರದ್ದು ಮಾಡಿದ್ದು ಹಾಗೂ ವಿಧವಾ ಪುನರ್ ವಿವಾಹಕ್ಕೆ ಅವಕಾಶ ಮಾಡಿಕೊಟ್ಟಿದ್ದು ಹಾಗೂ ಇತರ ಇಂದು ಸುಧಾರಣೆಗಳಿಂದ ಬ್ರಿಟಿಷರ ಮೇಲೆ ಹೋರಾಟ ಮಾಡಲು ಭಾರತೀಯರಲ್ಲಿ ಪ್ರೇರಣೆ ಆಯ್ತು. 4. ಭಾರತೀಯರ ಬಗ್ಗೆ ಅವಹೇಳನಕಾರಿ ಮನೋಭಾವನೆ ಹಾಗೂ ಬ್ರಿಟಿಷರು ಇಂದು ಧರ್ಮದ ಆಚಾರ ವಿಚಾರಗಳನ್ನು ಅವಹೇಳನ ಮಾಡಿದ್ದು ಸಂಪ್ರದಾಯಬದ್ಧ ಸಮಾಜಕ್ಕೆ ಬ್ರಿಟಿಷರ ವಿರುದ್ಧ ಹೋರಾಟ ಮಾಡಲು ಕಾರಣವಾಯಿತು.
- -ಸೈನಿಕ ಕಾರಣ
ಬ್ರಿಟಿಷ್ ಮತ್ತು ಭಾರತೀಯ ಸೈನಿಕರ ನಡುವೆ ಸ್ಥಾನಮಾನ ಮತ್ತು ವೇತನ ಗಳಲ್ಲಿ ತಾರತಮ್ಯ, ಭಾರತೀಯರಿಗೆ ಸೈನ್ಯದಲ್ಲಿ ಉನ್ನತ ಹುದ್ದೆಗಳು ನಿರಾಕರಣೆ, ಈ ದಂಗೆ ತಕ್ಷಣ ಕಾರಣವೆಂದರೆ ವಾಸ enfield ಬಂದೂಕುಗಳ ತೋಪುಗಳಿಗೆ ಹಂದಿ ಮತ್ತು ಹಸುವಿನ ಕೊಬ್ಬನ್ನು ಸವರಿದ್ದು ಈ ಬಂದೂಕಿನ ಮುಟ್ಟಲು ಹಿಂದೂಗಳು ಮತ್ತು ಮುಸ್ಲಿಮರು ನಿರಾಕರಿಸಿದರು. ಇದರಿಂದ ಸಿಟ್ಟಿಗೆದ್ದ ಮಂಗಲ್ ಪಾಂಡೆ ಸೈನಿಕರು ಬ್ರಿಟಿಷ್ ಅಧಿಕಾರಿಯನ್ನು ಕೊಂದು. ಸಿಪಾಯಿಗಳು ಈ ಬಂದೂಕನ್ನು ಮುಟ್ಟಲು ನಿರಾಕರಿಸಿದರು ಈ ಸಿಪಾಯಿಗಳನ್ನು ಬ್ರಿಟಿಷರು ಕಾರಾಗೃಹಕ್ಕೆ ತಳ್ಳಿದರು ನೀರು ಸಿಪಾಯಿಗಳು ಕಾರಾಗ್ರಹದಿಂದ ಒಡೆದು ದೆಹಲಿಯತ್ತ ಸಾಗಿ ಕೆಂಪುಕೋಟೆಯಲ್ಲಿ ಎರಡನೇ ಬಹದ್ದೂರ್ ಷಾ ನ ಭಾರತದ ಚಕ್ರವರ್ತಿ ಎಂದು ಘೋಷಿಸಿದರು.
ಸಂಗ್ರಾಮದ ಹಾದಿ
ಧಾರ್ಮಿಕ ಭಾವನೆಯನ್ನು ಕೆರಳಿಸುವಂತಹ ಸುದ್ದಿ ಉದ್ರೇಕಗೊಳಿಸಿತು ಮಾರ್ಚ್ 29 18 57 ರಲ್ಲಿ ಬ್ರಾಹ್ಮಣ ಸೈನಿಕ ಮಂಗಲಪಾಂಡೆ ಸೈನಿಕನು ಬಹಿರಂಗವಾಗಿ ದಂಗೆಯೆದ್ದು ,ಇಬ್ಬರು ಬ್ರಿಟಿಷ್ ಅಧಿಕಾರಿಗಳನ್ನು ಕೊಂದು ಹಾಕಿದನು.
ಜೊತೆಗಾರ ಸೈನಿಕರನ್ನೆಲ್ಲಾ ಸೇರಿಸಿ ನನ್ನ ಜೊತೆಗೂಡಿ, ನಮ್ಮ ಧರ್ಮ ಮತ್ತು ಜಾತಿ ರಕ್ಷಣೆಗೆ ಹೋರಾಡಲು ಕರೆ ನೀಡಿದರು. ಈ ಕ್ರಾಂತಿಯ ಮೊದಲು ಉಗಮವಾಗಿದ್ದು ಮೀರತ್ ನಲ್ಲಿ, ಮೀರತ್ ತಿನ ಒಂದು ತುಕಡಿ ಯು ಬಂದೂಕು ಮುಟ್ಟಲು ನಿರಾಕರಿಸಿದರು. ಇದರಿಂದ ಕೆರಳಿದ ಬ್ರಿಟಿಷರು 10 ವರ್ಷ ಕಠಿಣ ಶಿಕ್ಷೆ ವಿಧಿಸಿತು. ಸಾರ್ವಜನಿಕವಾಗಿ ಚಿತ್ರ ಹಿಂಸೆ ನೀಡಿ ಅವರಿಂದ ಸಮವಸ್ತ್ರ ಕಸಿದುಕೊಳ್ಳಲಾಯಿತು ಇದನ್ನು ನೋಡಿದ ಇತರ ಸೈನಿಕರು ಉದ್ರೇಕಗೊಂಡು ಸೈನಿಕರನ್ನು ಬಂಧಿಸಿಟ್ಟಿದ್ದ ಜೈಲಿಗೆ ನುಗ್ಗಿ ಅಲ್ಲಿದ್ದ ಬ್ರಿಟಿಷ್ ಅಧಿಕಾರಿಗಳನ್ನು ಕೊಂದು ಹಾಕಿ ತಮ್ಮ ಸೈನಿಕರನ್ನು ಬಂಧಮುಕ್ತಗೊಳಿಸಿದರು.
ನಂತರ ಈ ಸೈನಿಕರು ದೆಹಲಿಯತ್ತ ತೆರಳಿ ಮೊಘಲ್ ದೊರೆ ಬಹುಶಃ ನಾನು ರಾಜನಾಗಿ ಮಾಡಿದರು. ಇದನ್ನು ತಿಳಿದ ಬ್ರಿಟಿಷರ ಕೆಂಪು ಕೋಟೆಯ ಮೇಲೆ ಬಾರಿ ದಾಳಿ ಮಾಡಿ ಬಹುದೂರ್ ಷಾ ಮೊಗಲ್ ದೊರೆಯ ಇಬ್ಬರು ಮಕ್ಕಳನ್ನು ಲೆಫ್ಟಿನೆಂಟ್ ಹಸ್ಸನ್ ಕೊಂದು ಹಾಕಿದ ಬಹುದುರ್ ಶಾನು ಅಲ್ಲಿಂದ ತಪ್ಪಿಸಿಕೊಂಡು ಪರಾರಿಯಾದ ಇದೇ ರೀತಿ ಕಾನ್ ಪುರ್ ಲಕ್ನೋ ಜಾನ್ಸಿ ಗ್ವಾಲಿಯರ್ ಇತರೆ ಸ್ಥಳಗಳಲ್ಲಿ ಬಿಟಿಷರ ವಿರುದ್ಧ ಹೋರಾಟಗಳು ಸ್ಪೋಟಗೊಂಡ ಭಾರತದ ಬಹುತೇಕ ಸ್ಥಳಗಳಲ್ಲಿ ಆರಂಭವಾಯಿತು
ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ
ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಭಾರತದ ಉಪಖಂಡದ ಮೇಲೆ ಬ್ರಿಟಿಷ್ ಆಕ್ರಮಣದ ವಿರುದ್ಧ ನಡೆದ ಶಸ್ತ್ರಸಜ್ಜಿತ ಬಂಡಾಯ. ಇದನ್ನು ವಿವಿಧ ರೀತಿಯಾಗಿ ಸಿಪಾಯಿ ದಂಗೆ ಮತ್ತು '1857 ರ ಭಾರತೀಯ ದಂಗೆ ಎಂದು ಬ್ರಿಟೀಷರು ಕರೆಯುತ್ತಾರೆ. ಈ ಸಂಗ್ರಾಮ ದ ಪರಿಣಾಮವಾಗಿ ಭಾರತದಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿಯ ಆಳ್ವಿಕೆ ಕೊನೆಗೊಂಡು ಬ್ರಿಟಿಷ್ ಸರ್ಕಾರದ ನೇರ ಆಳ್ವಿಕೆ ಆರಂಭವಾಯಿತು.
ಕಾರಣಗಳು
ಈ ಬಂಡಾಯ ಆರಂಭವಾಗಲು ಹಲವಾರು ಕಾರಣಗಳನ್ನು ಹುಡುಕಬಹುದು.
- ಭಾರತೀಯರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುವ ವದಂತಿ
- ಲಾರ್ಡ್ ಡಾಲ್ಹೌಸಿಯ "ರದ್ದತಿಯ ಸಿದ್ಧಾಂತ" (ಡಾಕ್ಟ್ರಿನ್ ಆಫ್ ಲ್ಯಾಪ್ಸ್) ದ ಪ್ರಕಾರ ಉತ್ತರಾಧಿಕಾರಿಗಳಿಲ್ಲದ ಕಾರಣ ಝಾನ್ಸಿ, ಅವಧ, ಸತಾರಾ, ನಾಗ್ಪುರ, ಮತ್ತು ಸಂಭಲ್ಪುರ ರಾಜ್ಯಗಳನ್ನು ಬ್ರಿಟಿಷ್ ಆಳ್ವಿಕೆಗೆ ವಶಪಡಿಸಿಕೊಳ್ಳಲಾಯಿತು. ನಾಗ್ಪುರ ರಾಜಮನೆತನದ ಒಡವೆಗಳನ್ನು ಸಾರ್ವಜನಿಕವಾಗಿ ಹರಾಜು ಹಾಕಲಾಯಿತು.
- ಹಿಂದೂ ಮತ್ತು ಮುಸ್ಲಿಂ ಧರ್ಮದ ಅನೇಕ ನಂಬಿಕೆ-ಆಚಾರಗಳನ್ನು (ಸತಿ, ಬಾಲ್ಯ ವಿವಾಹ) ಬ್ರಿಟಿಷರು ’ಅನಾಗರಿಕ’ ಎಂಬ ಕಾರಣವೊಡ್ಡಿ ನಿಷೇಧಿಸಿದರು. ಇದು ಅನೇಕರ ಆಕ್ರೋಶಕ್ಕೆ ಕಾರಣವಾಯಿತು.
- ಬ್ರಿಟಿಷರ ನ್ಯಾಯಪದ್ಧತಿ ಮೂಲಭೂತವಾಗಿ ಭಾರತೀಯರ ವಿರುದ್ಧವಾಗಿಯೇ ಇತ್ತು.
- ಭಾರತೀಯರ ಮೇಲೆ ವಿಧಿಸಲಾಗಿದ್ದ ಕಟ್ಟಲಾಗದ ತೆರಿಗೆ. ಇದರ ಕಾರಣವಾಗಿ ರೈತರು ಆಹಾರ ಧಾನ್ಯಗಳನ್ನು ಬಿಟ್ಟು ವಾಣಿಜ್ಯ ಬೆಳೆಗಳನ್ನು ಬೆಳೆಯುವಂತಾಗಿ, ಆಹಾರ ಧಾನ್ಯಗಳ ಬೆಲೆಯೇರಿಕೆ ಉಂಟಾಯಿತು.
- ಈಸ್ಟ್ ಇಂಡಿಯಾ ಕಂಪನಿಯು ಲೆಕ್ಕವಿಲ್ಲದಷ್ಟು ಚಿನ್ನ, ಬೆಳ್ಳಿ, ಒಡವೆಗಳು, ರೇಷ್ಮೆ, ಮತ್ತು ಹತ್ತಿಯನ್ನು ಬ್ರಿಟನ್ನಿಗೆ ಪ್ರತಿ ವರ್ಷವೂ ರಫ್ತು ಮಾಡುತ್ತಿತ್ತು. ಇದರ ಮೇಲೆ ವಿಧಿಸಲಾಗುತ್ತಿದ್ದ ತೆರಿಗೆಯಿಂದ ದುಡಿದ ಐಶ್ವರ್ಯವೇ ಕೈಗಾರಿಕಾ ಕ್ರಾಂತಿಯಲ್ಲಿ ಬ್ರಿಟನ್ ಮುಂಚೂಣಿಯಲ್ಲಿರಲು ಕಾರಣವಾಗಿದ್ದಿತು.
- ಬ್ರಿಟಿಷರ ಉತ್ಪನ್ನಗಳನ್ನು ಅತಿ ಕಡಿಮೆ ಬೆಲೆಯಲ್ಲಿ ಭಾರತದಲ್ಲಿ ಮಾರಾಟ ಮಾಡಿ ಪ್ರಾದೇಶಿಕ ಕುಶಲಕರ್ಮಿಗಳು ನಿರುದ್ಯೋಗಿಗಳಾಗಬೇಕಾಯಿತು.
- ಬ್ರಿಟಿಷ್ ಸೈನ್ಯದಲ್ಲಿದ್ದ ಭಾರತೀಯ ಸಿಪಾಯಿಗಳಿಗೆ ಹೊಸ "ಎನ್ಫೀಲ್ಡ್" ಬಂದೂಕುಗಳನ್ನು ಉಪಯೋಗಿಸುವಂತೆ ಸೂಚಿಸಲಾಯಿತು. ಇದರಲ್ಲಿ ಬಳಸಲಾಗುತ್ತಿದ್ದ ಕಾಡತೂಸುಗಳನ್ನು (ಹಿಂದೂಗಳಿಗೆ ಪವಿತ್ರವಾದ) ಹಸು ಮತ್ತು (ಮುಸ್ಲಿಮರಿಗೆ ನಿಷಿದ್ಧವಾದ) ಹಂದಿಯ ಕೊಬ್ಬಿನಿಂದ ತಯಾರು ಮಾಡಲಾಗಿದೆಯೆಂಬ ವದಂತಿ ಹರಡಿತು.
ಸಂಗ್ರಾಮದ ಆರಂಭ
೨೬ ಫೆಬ್ರವರಿ ೧೮೫೭ರಂದು ೧೯ನೇ ಬಂಗಾಳ ಸ್ಥಳೀಯ ಕಾಲಾಳು ಸೈನಿಕರು ಹೊಸ ಕಾಡತೂಸುಗಳ ಬಗ್ಗೆ ತಿಳಿದು ಅವುಗಳನ್ನು ಉಪಯೋಗಿಸಲು ನಿರಾಕರಿಸಿದರು. ಸೈನ್ಯದ ಕರ್ನಲ್ ಇದನ್ನು ತಿಳಿದು ಆವೇಶಗೊಂಡರೂ, ಕೊನೆಗೆ ಸೈನಿಕರ ಒತ್ತಾಯಕ್ಕೆ ಮಣಿದು ಮರು ದಿನದ ತಾಲೀಮನ್ನು ರದ್ದು ಮಾಡಬೇಕಾಯಿತು.
ಮಂಗಲ ಪಾಂಡೆ
- ಕಲ್ಕತ್ತದ ಸಮೀಪ ಬಾರಕ್ಪುರದಲ್ಲಿ ೨೯ ಮಾರ್ಚ್ ೧೮೫೭ರಂದು ೩೪ನೇ ಬಂಗಾಳ ಸ್ಥಳೀಯ ಕಾಲಾಳು ಸೈನ್ಯದ ಮಂಗಲ ಪಾಂಡೆ ಎಂಬ ಸಿಪಾಯಿಯು ದಳದ ನಾಯಕ ಲೆ. ಬಾಗ್ ನನ್ನು ಗುಂಡಿಕ್ಕಿದ ನಂತರ ಖಡ್ಗದಿಂದ ಇರಿದನು. ಇದನ್ನರಿತ ಜನರಲ್, ಜಮಾದಾರ ಈಶ್ವರೀ ಪ್ರಸಾದರಿಗೆ ಮಂಗಲ ಪಾಂಡೆಯನ್ನು ಬಂಧಿಸಲು ಸೂಚಿಸಿದನು.
- ಆದರೆ ಜಮಾದಾರನು ನಿರಾಕರಿಸಿದನು. ಇದರ ಬಳಿಕ ಸೈನ್ಯದ ಎಲ್ಲ ಸಿಪಾಯಿಗಳೂ ಜನರಲ್ ಆಜ್ಞೆಯನ್ನು ಪಾಲಿಸಲು ನಿರಾಕರಿಸಿದರು (ಶೇಖ್ ಪಲ್ಟು ಎಂಬ ಸಿಪಾಯಿಯನ್ನು ಹೊರತುಪಡಿಸಿ.). ತನ್ನ ಪದಾತಿಗಳನ್ನು ದಂಗೆಯೇಳಲು ಹುರಿದುಂಬಿಸಲು ವಿಫಲನಾದ ಕಾರಣ ಮಂಗಲ ಪಾಂಡೆ ಬಂದೂಕನ್ನು ತನ್ನ ಕುತ್ತಿಗೆಗೆ ತೋರಿಸಿ ಕಾಲಿನಿಂದ ಅದರ ಕುದುರೆಯನ್ನು ಎಳೆದನು.
- ಆದರೆ ಇದರ ನಂತರ ಬದುಕಿದ ಅವನನ್ನು ಕೋರ್ಟ್ ಮಾರ್ಷಲ್ ಮಾಡಿ ಏಪ್ರಿಲ್ ೭ರಂದು ಗಲ್ಲಿಗೇರಿಸಲಾಯಿತು. ನಂತರ ಜಮಾದಾರ ಈಶ್ವರೀ ಪ್ರಸಾದನನ್ನೂ ಗಲ್ಲಿಗೇರಿಸಲಾಯಿತು. ಇಡೀ ಕಾಲಾಳು ಸೈನ್ಯವನ್ನು ಬರಖಾಸ್ತುಗೊಳಿಸಿ, ಅವರ ಸಮವಸ್ತ್ರವನ್ನು ಕಿತ್ತು ಹಾಕಲಾಯಿ ತು. ಶೇಖ್ ಪಲ್ಟುನನ್ನು ಜಮಾದಾರನನ್ನಾಗಿ ಬಡ್ತಿ ನೀಡಲಾಯಿತು. ಇದರಿಂದ ಅವಮಾನಿತರಾದ ಮಾಜಿ ಸಿಪಾಯಿಗಳು ಸೂಕ್ತ ರೀತಿಯಾಗಿ ಈ ಸೇಡನ್ನು ತೀರಿಸಲು ಕಾಯುತ್ತಿದ್ದರು.
ಮೀರಟ್ನಲ್ಲಿ ೩ನೇ ಲಘು ಅಶ್ವದಳ
- ಮೇ ೯ರಂದು ೩ನೇ ಬಂಗಾಳ ಲಘು ಅಶ್ವ ದಳದ ೮೫ ಸೈನಿಕರು ಹೊಸ ಕಾಡತೂಸುಗಳನ್ನು ಬಳಸಕು ನಿರಾಕರಿಸಿದ ಕಾರಣ ಅವರನ್ನು ಬಂಧಿಸಿ, ಸಾರ್ವಜನಿಕವಾಗಿ ಸಮವಸ್ತ್ರವನ್ನು ಕಿತ್ತು ಹಾಕಿ, ೧೦ ವರ್ಷ ಕಾರಾಗೃಹ ವಾಸ ಮತ್ತು ಕಠಿಣ ಸಜೆಯನ್ನು ವಿಧಿಸಲಾಯಿತು. ಬಂಧಿತ ಸೈನಿಕರನ್ನು ಕಾರಾಗೃಹಕ್ಕೆ ಕೊಂಡೊಯ್ಯುತ್ತಿರುವಾಗ ಅವರನ್ನು ವಿವಿಧ ರೀತಿಯಾಗಿ ಅವಮಾನಿಸಿ ಹೀಯಾಳಿಸಲಾಯಿತು. ಸೈನಿಕರನ್ನು ಹೀಗೆ ನಡೆಸಿಕೊಂಡ ರೀತಿಯೇ ಇತರ ಸಿಪಾಯಿಗಳು ದಂಗೆಯೇಳಲು ಕಾರಣವಾಯಿತು.
- ಮೀರಟ್ನಲ್ಲಿ ತಾಲೀಮು ನಡೆಸಿದ ೧೧ನೇ ಮತ್ತು ೨೦ನೇ ಕಾಲಾಳುಗಳು ಆಜ್ಞೆಯನ್ನು ಉಲ್ಲಂಘಿಸಿ ಐರೋಪ್ಯ ದಂಡು ಪ್ರದೇಶದ ಮೇಲೆ ದಾಳಿ ಮಾಡಿ ಕೈಗೆ ಸಿಕ್ಕ ಎಲ್ಲ ಐರೋಪ್ಯರನ್ನು ಕೊಂದು ಹಾಕಿ ಅವರ ಮನೆಗಳನ್ನು ಸುಟ್ಟರು. ಆದರೆ ಕೆಲವು ಮೂಲಗಳ ಪ್ರಕಾರ ಸಿಪಾಯಿಗಳು ತಮ್ಮ ಹಿರಿಯ ಸೈನ್ಯಾಧಿಕಾರಿಗಳನ್ನು ಸುರಕ್ಷಿತ ತಾಣಗಳಿಗೆ ಸೇರಿಸಿ ದಂಗೆಯನ್ನು ಮುಂದುವರೆಸಿದರು.
ಪರ ಮತ್ತು ವಿರೋಧ

- ಬಂಡಾಯವು ಸೇನೆಯಿಂದ ಹೊರಗೆ ಚೆಲ್ಲಿತಾದರೂ, ಭಾರತದ ನಾಯಕರು ಅಪೇಕ್ಷಿಸಿದಷ್ಟು ಯಶಸ್ವಿಯಾಗಲಿಲ್ಲ. ಭಾರತದ ಪರ ಒಗ್ಗಟ್ಟಿನ ಕೊರತೆಯಿತ್ತು. ಮುಖ್ಯವಾಗಿ ಸಂಗ್ರಾಮವು ಉತ್ತರ ಮತ್ತು ಕೇಂದ್ರ ಪ್ರದೇಶಗಳಾದ ದೆಹಲಿ, ಲಖನೌ, ಕಾನ್ಪುರ, ಝಾನ್ಸಿ , ಬರೇಲಿಗಳಲ್ಲಿ ಕೇಂದ್ರೀಕೃತವಾಗಿತ್ತು.
- ಬಹಳಷ್ಟು ಭಾರತೀಯರು ಬ್ರಿಟಿಷರ ಪರವಾಗಿ ನಿಂತರು. ಇದರ ಕಾರಣ ಮುಘಲರ ಮೇಲಿನ ಅಪನಂಬಿಕೆ ಮತ್ತು ಭಾರತೀಯತೆಯ ಭಾವನೆಯ ಕೊರತೆ. ಪಂಜಾಬಿನ ಮತ್ತು ವಾಯವ್ಯ ಗಡಿನಾಡಿನ ಸಿಖ್ಖರು ಮತ್ತು ಪಠಾಣರು ಬ್ರಿಟಿಷರು ದೆಹಲಿಯನ್ನು ಮರು ಕಬಳಿಸಲು ಸಹಾಯ ಮಾಡಿದರು. ನೇಪಾಳವು ಸ್ವತಂತ್ರ ರಾಜ್ಯವಾಗಿದ್ದರೂ ಕೂಡ ನೇಪಾಳಿ ಗೂರ್ಖಾಗಳು ಬ್ರಿಟಿಷರಿಗೆ ಸಹಾಯ ಮಾಡಿದರು.
- ಸಣ್ಣ-ಪುಟ್ಟ ಗಲಭೆಗಳನ್ನು ಹೊರತುಪಡಿಸಿದರೆ ದಕ್ಷಿಣ ಭಾರತದ ಬಹಳಷ್ಟು ಪ್ರಾಂತ್ಯಗಳು ಸಂಗ್ರಾಮದಲ್ಲಿ ಪಾತ್ರ ವಹಿಸಲಿಲ್ಲ. ಇದಕ್ಕೆ ಕಾರಣ ಈ ಪ್ರಾಂತ್ಯಗಳು ನಿಜಾಮರ ಅಥವಾ ಮೈಸೂರು ರಾಜ್ಯದ ಆಳ್ವಿಕೆಗೆ ಒಳಪಟ್ಟಿದ್ದರು. ಇದರಿಂದ ಈ ಭಾಗದ ಜನರು ನೇರವಾಗಿ ಬ್ರಿಟಿಷ್ ಆಳ್ವಿಕೆಯಲ್ಲಿರಲಿಲ್ಲ.
ಆರಂಭಿಕ ಹಂತಗಳು
- ಆರಂಭದಲ್ಲಿ ಭಾರತದ ಸಿಪಾಯಿಗಳು ಕಂಪನಿಯ ಸೈನ್ಯವನ್ನು ಸೋಲಿಸಿ ಹರಿಯಾಣ, ಬಿಹಾರ, ಮತ್ತು ಕೇಂದ್ರೀಯ ಪ್ರಾಂತ್ಯಗಳ ಹಲವು ಪ್ರಮುಖ ಸ್ಥಳಗಳನ್ನು ವಶಪಡಿಸಿಕೊಂಡರು.
- ಆದರೆ ಆಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ ಬ್ರಿಟಿಷರು ದೀರ್ಘ ಹೋರಾಟ ನಡೆಸಿದರು. ದಂಗೆಯೆದ್ದ ಸಿಪಾಯಿಗಳಿಗೆ ಕೇಂದ್ರೀಕೃತ ನಾಯಕತ್ವದ ಕೊರತೆಯಿತ್ತು.
ದೆಹಲಿ
- ಬ್ರಿಟಿಷರು ಹಂತ-ಹಂತವಾಗಿ ಪ್ರದೇಶಗಳನ್ನು ಮರು ವಶಪಡಿಸಿಕೊಂಡರು. ಯುರೋಪಿನಿಂದ ಚೀನಕ್ಕೆ ಹೋಗುತ್ತಿದ್ದ ಹಲವು ತುಕಡಿಗಳನ್ನು ಭಾರತಕ್ಕೆ ಕಳುಹಿಸಲಾಯಿತು.
- ದಂಗೆಯೆದ್ದ ಸಿಪಾಯಿಗಳನ್ನು ಎರಡು ತಿಂಗಳು ಸತತವಾಗಿ ದೆಹಲಿಯನ್ನು ದಾಳಿ ಮಾಡಲಾಯಿತು. ಆಗ ಸಿಖ್ಖರ ಮತ್ತು ಪಠಾಣರ ಬೆಂಬಲದಿಂದ ಅಂತಿಮವಾಗಿ ದೆಹಲಿಯನ್ನು ಮರು ವಶಪಡಿಸಿಕೊಳ್ಳಲಾಯಿತು.
ಉಲ್ಲೇಖ
???