ಸಾವಿರಾರು ನದಿಗಳು

ಕವಿ ಸಿದ್ಧಲಿಂಗಯ್ಯನವರ ಎರಡನೆಯ ಕವನ ಸಂಕಲನ ೧೯೭೯ ರಲ್ಲಿ ಪ್ರಕಟವಾಯಿತು. ಮೊದಲ ಸಂಕಲನ 'ಹೊಲೆಮಾದಿಗರ ಹಾಡು' ರಚನೆಗಳಿಗಿಂತ ಇದರ ಕವಿತೆಗಳು ಕವಿಯ ಪ್ರಬುದ್ಧ ಬೆಳವಣಿಗೆಗೆ ಸಾಕ್ಷಿಯಾಗಿ ನಿಲ್ಲುತ್ತವೆ. 'ಸಾವಿರಾರು ನದಿಗಳು' ಸಂಕಲನದಲ್ಲಿ ಕ್ರಮವಾಗಿ ಹದಿನಾರು ಕವಿತೆಗಳಿವೆ. ಅವುಗಳು ಯಾವುವು ಎಂದರೆ; ಸಾವಿರಾರು ನದಿಗಳು, ಬೆಲ್ಚಿಯಹಾಡು, ಕೆಂಪುಸೂರ್ಯ, ದಲಿತರು ಬರುವರು, ಬಿದ್ದಾವು ಮನೆಗಳು, ಕರಳ ರಾಣಿಯ ಕಥೆ, ಕತ್ತೆ ಮತ್ತು ಧರ್ಮ, ಈ ದೇಶದ ಸೆರಮನೆ, ಕಂಡೆ ನನ್ನವಳ ಒಂದು ದಿವಸ, ಹೋರಾಟದ ದಾರಿ, ನಿನ್ನ ಮಗನ ಕೊಂದರು, ಚೋಮನ ಮಕ್ಕಳ ಹಾಡು, ಮಾತಾಡಬೇಕು, ಮೆರವಣಿಗೆ, ಬಂದಿರುವರು ಹುಲಿಗಳಾಗಿ, ಅಲ್ಲೆ ಕುಂತವರೆ- ಇವುಗಳನ್ನು ಎರಡು ರೀತಿಯ ರಚನೆಗಳೆಂದು ಇಲ್ಲಿ ಗುರುತಿಸಲಾಗಿದೆ.

ಸಾವಿರಾರು ನದಿಗಳು - ಕವನ ಸಂಕಲನವು, ಸಿದ್ದಲಿಂಗಯ್ಯನವರು ದಲಿತರ ಮೇಲೆ ಇದ್ದ ಅಭಿಮಾನವನ್ನು ಕಾಣಬಹುದು. ಅವರು ಕನ್ನಡದ ಕವಿ ಹಾಗೂ ದಲಿತ ಸಂಘರ್ಷ ಸಮಿತಿಯ ಸಹ ಸಂಸ್ಥಾಪಕರಾಗಿದ್ದು, ದಲಿತರಿಗೆ ಮತ್ತು ದಲಿತ ಕುಟುಂಬದವರಿಗೆ ಸಹಕರಿಸಿದ್ದಾರೆ. ಈ ಕವನ ಸಂಕಲನದಲ್ಲಿ, ಅವರು ದಲಿತರ ಸಹಕಾರಕ್ಕೆ ಪಟ್ಟ ಶ್ರಮದ ಹಾದಿಯನ್ನು ಹೇಳಿದ್ದಾರೆ. ಈ ಕವನ ಸಂಕಲನದ ಒಂದು ಸಾಲು ಸಂಕಲನದ ಬಗ್ಗೆ ಹೇಳುತ್ತದೆ - "To the ocean of struggle, flow of thousand rivers". ಇದರ ಅನುವಾದ - ಸಾವಿರಾರು ನದಿಗಳು ಹರಿಯುತ್ತಿವೆ, ಹೋರಾಟದ ಹಾದಿಯಲಿ.

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.