ಸನಾದಿ ಅಪ್ಪಣ್ಣ (ಚಲನಚಿತ್ರ)

ಈ ಚಿತ್ರವು ಕೃಷ್ಣಮೂರ್ತಿ ಪುರಾಣಿಕ ರ ಅದೇ ಹೆಸರಿನ ಕಾದಂಬರಿ ಆಧಾರಿತವಾಗಿದೆ.ಚಿತ್ರದ ನಾಯಕ ಅಪ್ಪಣ್ಣ ಶಹನಾಯಿ ವಾದಕ. ಅಪ್ಪಣ್ಣ ಮತ್ತು ಬಸಂತಿ (ನಾಟ್ಯ ಕಲಾವಿದೆ) ಒಬ್ಬರನ್ನೊಬ್ಬರು ಮೆಚ್ಚಿ ಮದುವೆಯಾಗುತ್ತಾರೆ. ಇವರಿಬ್ಬರ ಪ್ರ್ರೇಮಕ್ಕೆ ಜಾತಿ ಅಡ್ಡಗೋಡೆಯಾದರೂ ಅದನ್ನು ಮೀರಿ ನಿಲ್ಲುತ್ತಾರೆ. ಕಾಲಾನುಕ್ರಮದಲ್ಲಿ ಬಸಂತಿ ಒಂದು ಗಂಡು ಮಗುವಾದ ನಂತರ ಮರಣವನ್ನಪ್ಪುತ್ತಾಳೆ. ಆದರೆ ಮಗುವಿಗೆ ಪರಂಪರೆಯಿಂದ ಬಂದಿರುವ ಶಹನಾಯಿ ವಾದನವನ್ನು ಕಲಿಸದೆ ದೊಡ್ಡ ವಿದ್ಯಾವಂತನನ್ನಾಗಿ ಮಾಡಬೇಕೆಂದು ಅಪ್ಪಣ್ಣನಿಂದ ಭಾಷೆ ತೆಗೆದುಕೊಂಡಿರುತ್ತಾಳೆ.ಆದರೆ ಮುಂದೆ ಮಗನು ವಿದ್ಯೆ ಮತ್ತು ಹಣದ ಅಹಂನಿಂದ ತಂದೆಯನ್ನು ಕಡೆಗಣಿಸುತ್ತಾನೆ. ಮುಂದಿನ ಕಥೆ ತಿಳಿಯಲು ಚಿತ್ರ ನೋಡಿ.

ಸನಾದಿ ಅಪ್ಪಣ್ಣ (ಚಲನಚಿತ್ರ)
ಸನಾದಿ ಅಪ್ಪಣ್ಣ
ನಿರ್ದೇಶನವಿಜಯ್
ನಿರ್ಮಾಪಕವಿ.ಎಸ್.ಮುರಳಿ
ಕಥೆಕ್ರಿಶ್ನಮೂರ್ತಿ ಪುರನಿಕ್
ಪಾತ್ರವರ್ಗಡಾ.ರಾಜ್‍ಕುಮಾರ್ ಜಯಪ್ರದ ಪ್ರಾಪಮ್ಮ, ತೂಗುದೀಪ ಶ್ರೀನಿವಾಸ್
ಸಂಗೀತಜಿ.ಕೆ.ವೆಂಕಟೇಶ್
ಛಾಯಾಗ್ರಹಣಆರ್.ಚಿಟ್ಟಿಬಾಬು
ಬಿಡುಗಡೆಯಾಗಿದ್ದು೧೯೭೭
ಚಿತ್ರ ನಿರ್ಮಾಣ ಸಂಸ್ಥೆಆನಂದ ಲಕ್ಷ್ಮೀ ಎಂಟರ್ಪ್ರೈಸಸ್
ಹಿನ್ನೆಲೆ ಗಾಯನಡಾ.ರಾಜ್‍ಕುಮಾರ್,ಎಸ್.ಜಾನಕಿ,ಉಡುಪಿ ಜಯರಾಂ
ಇತರೆ ಮಾಹಿತಿ"ಅಭಿನಯ" ಚಿತ್ರ ಮಂದಿರದಲ್ಲಿ ಬಿಡುಗಡೆಯಾದ ಮೊದಲ ಚಲನಚಿತ್ರ. ಭಾರತದ ಪ್ರಖ್ಯಾತ ಶಹನಾಯಿ ವಾದಕ [ಬಿಸ್ಮಿಲ್ಲಾ ಖಾನ್] ಈ ಚಿತ್ರದಲ್ಲಿ ಅಪ್ಪಣ್ಣನ ಸನಾದಿಗೆ ಉಸಿರನ್ನು ತುಂಬಿರುವುದು ವಿಶೇಷ."ನಮನ"

ಚಿತ್ರದ ಸಾರಾಂಶ:

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.