ಮುಹಮ್ಮದ್
ಮುಹಮ್ಮದ್ ಇಬ್ನ್ ಆಬ್ದುಲ್ಲಾಹ್ (محمد[1] [2] (ಸು. ೫೭೦ ಮೆಕ್ಕಾ - ಜೂನ್ ೮, ೬೩೨ ಮದೀನ),[3] ಇಸ್ಲಾಂ ಧರ್ಮದ ಪ್ರಕಾರ ಅಲ್ಲಾಹನ ಕೊನೆಯ ಪ್ರವಾದಿ[4] ಮತ್ತು ಇವರು ಹೊಸ ಧರ್ಮವನ್ನು ಸೃಷ್ಟಿಸಿದವರಲ್ಲ; ಆದರೆ ಆಡಮ್, ಅಬ್ರಾಹಮ್ ಇತ್ಯಾದಿ ಪ್ರವಾದಿಗಳಿಂದ ಸೃಷ್ಟಿಸಲಾದ ಮೂಲ ಧರ್ಮವನ್ನು ಪುನರ್ಸ್ಥಾಪನೆ ಮಾಡಿದವರು.[5]
ಮುಹಮ್ಮದ್(ಸ) ರ ಜನನ ರಬೀಉಲ್ ಅವ್ವಲ್ ೯ನೇ ದಿನಾಂಕ ಕ್ರಿ.ಶ. ೫೭೧ರ ಎಪ್ರೀಲ್ ೨೦ ರಂದು ಮಕ್ಕಾ ಪಟ್ಟಣದಲ್ಲಿ ಆಗುತ್ತದೆ. ಇವರು ಇಡೀ ವಿಶ್ವದ ಪ್ರಭುವಾದ ಅಲ್ಲಾಹನ ವತಿಯಿಂದ ಬಂದಂತಹ ಪ್ರವಾದಿಯೂ ಲೋಕನಾಯಕರೂ ಆಗಿದ್ದಾರೆ. ನಿರಕ್ಷರಿಯಾದ ಪ್ರವಾದಿಗೆ ಅಲ್ಲಾಹನ ವಾಣಿಯು (ಪವಿತ್ರ ಕುರ್ಆನ್) ಜಿಬ್ರೀಲ್ ಎಂಬ ದೇವದೂತನ ಮುಖಾಂತರ ಅವತೀರ್ಣವಾಗುತ್ತದೆ. ತಂದೆ ತಾಯಿಗಳಾದ ಆಮಿನ ಮತ್ತು ಅಬ್ದುಲ್ಲಾ ಬಾಲ್ಯದಲ್ಲಿಯೇ ತೀರಿಹೋಗುತ್ತಾರೆ. ೪೦ನೇ ವರ್ಷದಲ್ಲಿ ಪ್ರಾವಾದಿತ್ವ ಲಭಿಸುತ್ತದೆ. ನಂತರ ೨೩ ವರ್ಷಗಳಲ್ಲಿ ಇಸ್ಲಾಮ್ ಧರ್ಮವನ್ನು ಸಂಸ್ಥಾಪಿಸುತ್ತಾರೆ. ೧೦ ವರ್ಷ ಮಕ್ಕಾದಲ್ಲಿ ಹಾಗೂ ೧೩ ವರ್ಷ ಮದೀನಾದಲ್ಲಿ ಅನೇಕ ಸಂಕಷ್ಟಗಳನ್ನು ಸಹಿಸಿ ಅಲ್ಲಾಹನ ಸಂಪ್ರೀತಿಗಾಗಿ ಅಂದಿನ ಕೆಡುಕುಗಳ ವಿರುದ್ಡ ಹೋರಾಡಿ ಶ್ರೇಷ್ಠ ಜೀವನ ಪದ್ದತಿಯಾದ ಇಸ್ಲಾಮನ್ನು ಸಂಸ್ಥಾಪಿಸುತ್ತಾರೆ.
ಮುಹಮ್ಮದ್ (ಸ)ರವರು ಕೇವಲ ಇಪ್ಪತ್ತಮೂರು ವರ್ಷಗಳ ತಮ್ಮ ದೌತ್ಯಜೀವನದ ಅತಿಸಂಕ್ಷಿಪ್ತ ಅವಧಿಯಲ್ಲಿ ಸಂಪೂರ್ಣ ಅರಬಿ ಪರ್ಯಾಯ ದ್ವೀಪವನ್ನು ಬಹುದೇವಾರಾಧನೆ, ಅಂಧವಿಶ್ವಾಸ ಮತ್ತು ಸೃಷ್ಟಿಪೂಜೆಯಿಂದ ಏಕದೇವಾರಾಧನೆಯೆಡೆಗೆ, ಜನಾಂಗೀಯ ಕಲಹ ಮತ್ತು ಸಮರಗಳಿಂದ ರಾಷ್ಟ್ರೀಯ ಒಗ್ಗಟ್ಟು ಮತ್ತು ಭಾವೈಕ್ಯತೆಯೆಡೆಗೆ, ಮದ್ಯಪಾನ ಮತ್ತು ವ್ಯಭಿಚಾರದಿಂದ ಸಮಚಿತ್ತತೆ ಮತ್ತು ದೇವಭಕ್ತಿಯೆಡೆಗೆ, ಅನಿರ್ಬಂಧತೆ ಮತ್ತು ಅರಾಜಕತೆಯಿಂದ ಶಿಸ್ತುಬದ್ಧ ಮತ್ತು ಮಾದರೀಯೋಗ್ಯ ಜೀವನದೆಡೆಗೆ, ಪರಿಪೂರ್ಣ ದಿವಾಳಿತ್ವದಿಂದ ನೈತಿಕ ಉತ್ಕೃಷ್ಟತೆಯ ಪಾರಮ್ಯದೆಡೆಗೆ ಪರಿಪೂರ್ಣವಾಗಿ ಪರಿವರ್ತಿಸಿದರು. ಮಾನವ ಚರಿತ್ರೆಯು ಎಂದೂ ಕಂಡರಿಯದ ಅಥವಾ ಆಲಿಸಿರದ ಇಂತಹ ಅಭೂತಪೂರ್ವ ಮತ್ತು ಅಮೂಲಾಗ್ರ ಬದಲಾವಣೆ! ಮತ್ತೆ ಊಹಿಸಿರಿ! ನಂಬಲಸಾಧ್ಯವಾದ ಈ ಅದ್ಭುತಗಳೆಲ್ಲವೂ ಕೇವಲ ಎರಡು ದಶಕಗಳ ಹೃಸ್ವಾವಧಿಯಲ್ಲಿ ಸಂಭವಿಸಿವೆ.
ಪ್ರವಾದಿ [ಸ]ರವರ ಕೊನೆಯ ವಚನ ಅರಫಾ ಮೈದಾನದಲ್ಲಿ:
ಪ್ರವಾದಿ ಮುಹಮ್ಮದ್ [ಸ]ರು ಹೇಳಿದರು: ಓ ಜನರೇ ನಿಮ್ಮ ದೇವನು ಒಬ್ಬನು ಮತ್ತು ನಿಮ್ಮ ತಂದೆಯೂ ಒಬ್ಬನು. ಅರಬನಿಗೆ ಅರಬೇತರ ಮೇಲೆ ಯಾವುದೇ ಶ್ರೇಷ್ಠತೆಯಿಲ್ಲ ಮತ್ತು ಅರಬೇತರನಿಗೆ ಅರಬರ ಮೇಲೆ ಯಾವುದೇ ಶ್ರೇಷ್ಠತೆಯಿಲ್ಲ. ಕೆಂಪು ಬಣ್ಣದವನಿಗೆ (ಅಂದರೆ ಕೆಂಪು ಮಿಶ್ರಿತ ಬಿಳಿಬಣ್ಣದವನು) ಕರಿಯನ ಮೇಲೆ ಯಾವುದೇ ಶ್ರೇಷ್ಠತೆಯಿಲ್ಲ ಮತ್ತು ಕರಿಯನಿಗೆ ಕೆಂಪು ಬಣ್ಣದವನ ಮೇಲೆ ಯಾವುದೇ ಶ್ರೇಷ್ಠತೆಯಿಲ್ಲ. ಭಯಭಕ್ತಿಯ ಮಾನದಂಡದಲ್ಲೇ ಹೊರತು. [ಮುಸ್ನಾದ್ ಅಹ್ಮದ್ # 22978]
ಪ್ರವಾದಿ [ಸ]ರವರ ಸರಳ ಜೀವನ:
"ಮುಹಮ್ಮದ್ [ಸ]ರ ಅನುಯಾಯಿಗಳಲ್ಲಿ ಒಬ್ಬರಾದ ಸಹ್ಲ್ ಇಬ್ನ್ ಸಹ್'ದ್ ಹೇಳುತ್ತಾರೆ: ಅಲ್ಲಾಹನ ಪ್ರವಾದಿಯವರು ಪ್ರವಾದಿಯಾದ ಬಳಿಕ ಮರಣದ ತನಕ ಜರಡಿಯಲ್ಲಿ ಸೋಸಿದ ಹಿಟ್ಟನ್ನು ಕಂಡೇ ಇಲ್ಲ [ಸಹೀಹುಲ್ ಬುಖಾರಿ, #5413, ತಿರ್ಮಿದಿ, #2364]". "ಮುಹಮ್ಮದ್ [ಸ]ರ ಪತ್ನಿ ಆಯಿಶಾ ಹೇಳುತ್ತಾರೆ "ಪ್ರವಾದಿಯವರು ಮಲಗುತ್ತಿದ್ದ ಚಾಪೆಯು ಕರ್ಜೂರದ ನಾರುಗಳನ್ನು ತುಂಬಿದ ಚರ್ಮದಿಂದ ನಿರ್ಮಿಸಿದ್ದಾಗಿತ್ತು [ಸಹೀಹ್ ಮುಸ್ಲಿಮ್, #2082, ಸಹೀಹುಲ್ ಬುಖಾರಿ, # 6456]". "ಒಬ್ಬ ಪ್ರವಾದಿ, ಶಿಕ್ಷಕ, ಆಡಳಿತಗಾರ, ನ್ಯಾಯಾಧೀಶ ಮೊದಲಾದ ಜಾವಾಬ್ದಾರಿಗಳನ್ನು ನಿಭಾಯಿಸುವುದರೊಂದಿಗೆ ಅವರು ಸ್ವತಃ ಆಡಿನ ಹಾಲು ಹಿಂಡುತ್ತಿದ್ದರು [ಮುಸ್ನಾದ್ ಅಹ್ಮದ್, #25662]". "ಮುಹಮ್ಮದ್ [ಸ] ತಮ್ಮ ಬಟ್ಟೆಗಳನ್ನು ಮತ್ತು ಚಪ್ಪಲಿಯನ್ನು ಸ್ವತಃ ದುರಸ್ತಿ ಮಾಡುತ್ತಿದ್ದರು [ಮುಸ್ನಾದ್ ಅಹ್ಮದ್, #676, ಮುಸ್ನಾದ್ ಅಹ್ಮದ್, #25517]". "ಮುಹಮ್ಮದ್ [ಸ] ಮನೆಗೆಳಸಗಳಲ್ಲಿ ನೆರವಾಗುತ್ತಿದ್ದರು [ಮುಸ್ನಾದ್ ಅಹ್ಮದ್, #676, ಮುಸ್ನಾದ್ ಅಹ್ಮದ್, #23706]". "ಮುಹಮ್ಮದ್ [ಸ] ರೋಗಿಗಳನ್ನು ಸಂದರ್ಶಿಸುತ್ತಿದ್ದರು [ಮೊವತ್ತ ಮೊವತ್ತ ಮಾಲಿಕ್, #531]". "ಮುಹಮ್ಮದ್ [ಸ] ಹೊಂಡ ತೋಡುವಾಗಲೂ ಅವರು ತಮ್ಮ ಅನುಯಾಯಿಗಳಿಗೆ ನೆರವಾಗುತ್ತಿದ್ದರು [ಮುಸ್ನಾದ್ ಅಹ್ಮದ್, #3034, ಸಹೀಹ್ ಮುಸ್ಲಿಮ್, #1803, ಮುಸ್ನಾದ್ ಅಹ್ಮದ್, #18017]". "ಮುಹಮ್ಮದ್ {ಸ}ರ ಅನುಯಾಯಿಗಳಲ್ಲಿ ಒಬ್ಬರಾದ ಅನಸ್ ಕೇಳುವಂತೆ ಮುಹಮ್ಮದ್ [ಸ]ರಿಗಿಂತಲೂ ಹೆಚ್ಚಾಗಿ ಅವರ ಅನುಯಾಯಿಗಳು ಯಾರನ್ನೂ ಪ್ರೀತಿಸುತ್ತಿರಲಿಲ್ಲ, ಆದರೂ ಮುಹಮ್ಮದ್ [ಸ]ರು ಅವರ ಬಳಿಗೆ ಬಂದಾಗ ಅವರು ಎದ್ದು ನಿಲ್ಲುತ್ತಿರಲಿಲ್ಲ, ಯಾಕೆಂದರೆ ದೊಡ್ಡ ದೊಡ್ಡ ಜನರಿಗಾಗಿ ಎದ್ದು ನಿಲ್ಲುವಂತೆ ತನಗೆ ಕೂಡಾ ಎದ್ದು ನಿಲ್ಲುವುದನ್ನು ಮುಹಮ್ಮದ್ [ಸ]ರು ಅಸಹ್ಯಪಡುತ್ತಿದ್ದರು [ಮುಸ್ನಾದ್ ಅಹ್ಮದ್, #12117, ಸಹೀಹ್ ಮುಸ್ಲಿಮ್, #2754]".
ಪ್ರವಾದಿ ಮುಹಮ್ಮದ್ [ಸ]ರವರ ಕುರಿತು ಅಮುಸ್ಲಿಮೆತರ ಅಬಿಪ್ರಾಯವೇನು? :
ಜಾರ್ಜ್ ಬರ್ನಾರ್ಡ್ ಶಾ:
ಇಸ್ಲಾಮಿನಲ್ಲಿರುವ ಜೀವಸತ್ವದಿಂದಾಗಿ ನಾನು ಯಾವಾಗಲೂ ಅದನ್ನು ಗೌರವಾನ್ವಿತ ಸ್ಥಾನದಲ್ಲೇ ಕಾಣುತ್ತಿರುವೆನು. ಬದಲಾಗುತ್ತಿರುವ ಸ್ಥಿತಿಗತಿಗಳಿಗೆ ಸರ್ವಕಾಲಿಕವಾದ ಸ್ವತಃ ಅನುಯೋಜ್ಯವಾಗುವಂತಹ ಸಮೀಕರಿಸುವ ಶಕ್ತಿಯನ್ನು ಹೊಂದಿರುವ ಏಕೈಕ ಧರ್ಮ ಇಸ್ಲಾಮ್ ಮಾತ್ರವಾಗಿದೆಯೆಂದು ನಾನು ಕಾಣುತ್ತಿರುವೆನು. ಆ ಅದ್ಬುತ ವ್ಯಕ್ತಿ ಮುಹಮ್ಮದ್'ರನ್ನು ನಾನು ಪೂರ್ಣವಾಗಿ ಅಧ್ಯಯನ ಮಾಡಿರುವೆನು. ನನ್ನ ಪ್ರಕಾರ ಅವರನ್ನು ಕ್ರಿಸ್ತವಿರೋಧಿ ಎಂದು ಕರೆಯುವುದಕ್ಕಿಂತಲೂ ಹೆಚ್ಚಾಗಿ ಮಾನವೀಯತೆಯ ಸಂರಕ್ಷಕರೆಂದೇ ಕರೆಯಬೇಕಾಗಿದೆ. ಅವರಂತಿರುವ ಓರ್ವ ವ್ಯಕ್ತಿ ಆಧುನಿಕ ಜಗತ್ತಿನ ಸರ್ವಾಧಿಕಾರವನ್ನು ವಹಿಸಿದರೆ, ಅದಕ್ಕೆ ಅತ್ಯಂತ ಅಗತ್ಯವಿರುವ ಶಾಂತಿ ಮತ್ತು ಸಂತೋಷವನ್ನು ತರುವಂತಹ ರೀತಿಯಲ್ಲಿ ಅದರ ಸಮಸ್ಯೆಗಳನ್ನು ಪರಿಹರಿಸುವುದರಲ್ಲಿ ಅವರು ಯಶಸ್ವಿಯಾಗುವರೆಂದು ನಾನು ನಂಬುತ್ತೇನೆ. George Bernard Shaw (The Genuine Islam, Singapore Vol. 1, No. X 1936]
ಇತಿಹಾಸ ತಜ್ಞರಾದ ಲಾಮರ್ಟೈನ್:
“ಉದ್ದೇಶದ ಪ್ರಾಧಾನ್ಯತೆ, ಉಪಕರಣಗಳ ಮಿತತ್ವ ಮತ್ತು ದಿಗಿಲುಗೊಳಿಸುವಂತಹ ಫಲಿತಾಂಶಗಳು ಓರ್ವ ವ್ಯಕ್ತಿಯ ಶ್ರೇಷ್ಠತೆಯನ್ನು ಅಳೆಯಲು ಮೂರು ಮಾನದಂಡಗಳಾಗಿದ್ದರೆ, ಮುಹಮ್ಮದ್ರೊಂದಿಗೆ ಆಧುನಿಕ ಇತಿಹಾಸದ ಯಾವುದೇ ಶ್ರೇಷ್ಠ ವ್ಯಕ್ತಿಯನ್ನು ಹೋಲಿಸಲು ಧೈರ್ಯಪಡುವವರಾರು? ಅತಿಪ್ರಸಿದ್ಧ ವ್ಯಕ್ತಿಗಳು ಕೇವಲ ಶಸ್ತ್ರಾಸ್ತ್ರ, ಕಾನೂನು ಮತ್ತು ಸಾಮ್ರಾಜ್ಯಗಳನ್ನಷ್ಟೇ ನಿರ್ಮಿಸಿದರು. ಕೊನೆಗೆ ಅವರು ಏನನ್ನಾದರೂ ಸಾಧಿಸಿದ್ದರೆ ಅದು ಅವರ ಕಣ್ಣುಗಳ ಮುಂದೆಯೇ ನಿರಂತರವಾಗಿ ಹೊಸಕಿ ಹಾಕಲ್ಪಡುತ್ತಿದ್ದ ಭೌತಿಕ ಅಧಿಕಾರಗಳಲ್ಲದೆ ಬೇರೇನೂ ಆಗಿರಲಿಲ್ಲ. ಆದರೆ ಈ ವ್ಯಕ್ತಿ (ಮುಹಮ್ಮದ್) ಸೈನ್ಯಗಳನ್ನೂ, ಶಾಸನಗಳನ್ನೂ, ಸಾಮ್ರಾಜ್ಯಗಳನ್ನೂ, ಜನರನ್ನೂ, ರಾಜವಂಶಗಳನ್ನೂ ಮುನ್ನಡೆಸಿದ್ದು ಮಾತ್ರವಲ್ಲದೆ ಅಂದಿನ ಜಾಗತಿಕ ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟಿದ್ದ ಕೋಟ್ಯಂತರ ಜನತೆಯನ್ನು ಮುನ್ನಡೆಸಿದ್ದರು. ಅದಕ್ಕಿಂತ ಮಿಗಿಲಾಗಿ ಅವರು (ಜನರಲ್ಲಿ ಮನೆಮಾಡಿದ್ದ) ಬಲಿಪೀಠಗಳು, ದೇವರುಗಳು, ಧರ್ಮಗಳು, ಪರಿಕಲ್ಪನೆಗಳು, ನಂಬಿಕೆಗಳು ಮತ್ತು ಆತ್ಮಗಳೆಲ್ಲವನ್ನೂ ಬದಲಾಯಿಸಿದರು.ಗೆದ್ದಾಗ ಅವರಿಗಿದ್ದ ಆತ್ಮಸಂಯಮ, ಅವರ ಮಹತ್ವಾಕಾಂಕ್ಷೆ, ಎಲ್ಲವನ್ನೂ ಸಂಪೂರ್ಣವಾಗಿ ಒಂದೇ ಗುರಿಯತ್ತ ಸಮರ್ಪಿಸಲಾಗಿತ್ತು. ಇದು ಯಾವುದೇ ರೀತಿಯಲ್ಲೂ ಒಂದು ಸಾಮ್ರಾಜ್ಯ ಸ್ಥಾಪನೆಯತ್ತ ನಡೆಸಿದ ಹೋರಾಟವಾಗಿರಲಿಲ್ಲ. ಅವರ ಕೊನೆಯಿಲ್ಲದ ಪ್ರಾರ್ಥನೆಗಳು, ತನ್ನ ದೇವನೊಡನೆ ನಡೆಸುವ ನಿಗೂಢ ಸಂಭಾಷಣೆಗಳು, ಅವರ ಮರಣ ಮತ್ತು ಮರಣಾನಂತರದ ವಿಜಯ, ಎಲ್ಲವೂ ಅವರೊಬ್ಬ ವಿಶಿಷ್ಠ ವ್ಯಕ್ತಿಯಾಗಲು ಬಯಸಿದ ನಯವಂಚಕನೆಂದು ದೃಢೀಕರಿಸುವುದಿಲ್ಲ. ಬದಲಾಗಿ ಒಂದು ಸಿದ್ಧಾಂತವನ್ನು ಸಂರಕ್ಷಿಸುವುದಕ್ಕಾಗಿ ಅವರಿಗೆ ಶಕ್ತಿ ನೀಡುತ್ತಿರುವ ಒಂದು ಬಲಿಷ್ಠವಾದ ವಿಶ್ವಾಸದಾರ್ಢ್ಯತೆಯು ಅವರಲ್ಲಿತ್ತೆಂಬುದನ್ನು ದೃಢೀಕರಿಸುತ್ತದೆ. ಈ ಸಿದ್ಧಾಂತವು ಎರಡೆಸಲಿನಂತಿದೆ.ದೇವನ ಏಕತ್ವ ಮತ್ತು ದೇವನ ಅಭೌತಿಕತೆ. ಮೊದಲನೆಯದು ದೇವನು ಏನು ಎಂಬುದನ್ನು ಸೂಚಿಸುತ್ತದೆ ಮತ್ತು ಎರಡನೆಯದು ದೇವನು ಏನು ಅಲ್ಲ ಎಂಬುದನ್ನು ಸೂಚಿಸುತ್ತದೆ. ಒಂದು ಖಡ್ಗದೊಂದಿಗೆ ಮಿಥ್ಯ ದೇವರುಗಳನ್ನು ಕಿತ್ತೊಗೆಯುವಾಗ ಮತ್ತೊಂದು ಮಾತುಗಳ ಮೂಲಕ ಚಿಂತನೆಗಳಿಗೆ ಚಾಲನೆ ನೀಡುತ್ತದೆ. ತತ್ವಜ್ಞಾನಿ, ವಾಗ್ಮಿ, ಧರ್ಮಪ್ರಚಾರಕ, ಶಾಸನಕಾರ, ಯೋಧ, ಊಹೆಗಳನ್ನು ದಮನಿಸಿದವನು, ವೈಚಾರಿಕ ಸಿದ್ಧಾಂತಗಳ, ಪ್ರತಿಮೆಗಳಿಲ್ಲದ ಉಪಾಸನಾ ಪದ್ಧತಿಯ ಸಂರಕ್ಷಕ, ಇಪ್ಪತ್ತು ಭೂಸಾಮ್ರಾಜ್ಯಗಳ ಮತ್ತು ಒಂದು ಆಧ್ಯಾತ್ಮಿಕ ಸಾಮ್ರಾಜ್ಯದ ಸ್ಥಾಪಕ, ಅವರೇ ಮುಹಮ್ಮದ್. ಮನುಷ್ಯ ಶ್ರೇಷ್ಠತೆಯನ್ನಳೆಯುವ ಸರ್ವ ಮಾನದಂಡಗಳನ್ನು ಬಳಸಿ ಪರಿಶೋಧಿಸಿದ ನಂತರ ಖಂಡಿತವಾಗಿಯೂ ನಾವು ಕೇಳುವೆವು. ಮುಹಮ್ಮದ್ರಿಗಿಂತಲೂ ಶ್ರೇಷ್ಠವಾದ ವ್ಯಕ್ತಿ ಯಾರಾದರೂ ಇದ್ದಾರೆಯೇ? A. De Lamartine [Histoire de la Turquie, Paris, 1854, Vol. II, pp. 276
ಮಹಾತ್ಮಾ ಗಾಂಧಿ :
“ಮಾನವ ಸಮೂಹದ ಕೋಟ್ಯಂತರ ಹೃದಯಗಳಲ್ಲಿ ವಿವಾದರಹಿತವಾಗಿ ಪ್ರಭುತ್ವವನ್ನು ಸ್ಥಾಪಿಸಿದ ಓರ್ವ ಅತ್ಯುನ್ನತ ವ್ಯಕ್ತಿಯ ಕುರಿತು ತಿಳಿಯಬಯಸಿದ್ದೆ…. ಅಂದಿನ ಜೀವನ ರಂಗದಲ್ಲಿ ಇಸ್ಲಾಮಿಗೆ ಸ್ಥಾನವನ್ನು ಗಳಿಸಿಕೊಟ್ಟದ್ದು ಖಡ್ಗವಲ್ಲ ಬದಲಾಗಿ ಪ್ರವಾದಿಯ ತೀವ್ರ ನಿರಾಡಂಬರತೆ, ಪರಿಪೂರ್ಣ ನಿಷ್ಕಾಪಟ್ಯತೆ, ವಾಗ್ದಾನಗಳ ಕುರಿತು ಆತ್ಯಂತಿಕವಾದ ನಿಷ್ಠೆ, ತನ್ನ ಸ್ನೇಹಿತರು ಮತ್ತು ಅನುವರ್ತಿಗಳಿಗೆ ಅವರು ನೀಡುತ್ತಿದ್ದ ತೀವ್ರ ಪರಿಗಣನೆ, ಮತಪ್ರಚಾರ ಕಾರ್ಯದ ಕುರಿತು ಅವರಿಗಿದ್ದ ಎದೆಗಾರಿಕೆ, ನಿರ್ಭಯತೆ ಮತ್ತು ದೇವನಲ್ಲಿದ್ದ ಪರಿಪೂರ್ಣ ನಂಬಿಕೆ ಮತ್ತು ಭರವಸೆಗಳಾಗಿದ್ದವು ಎಂಬ ವಾಸ್ತವಿಕತೆಯನ್ನು ನಾನು ಚೆನ್ನಾಗಿ ಮನದಟ್ಟುಮಾಡಿಕೊಂಡೆ. ಇವುಗಳಾಗಿದ್ದವು ಅವರ ಮುಂದಿದ್ದ ಸರ್ವ ಅಡೆತಡೆಗಳನ್ನು ನಿವಾರಿಸಿದ ಅಸ್ತ್ರವೇ ಹೊರತು ಖಡ್ಗವಾಗಿರಲಿಲ್ಲ. ನಾನು (ಪ್ರವಾದಿ ಜೀವನಚರಿತ್ರೆಯ) ಎರಡನೇ ಭಾಗವನ್ನು ಓದಿ ಮುಚ್ಚಿದಾಗ ಆ ಶ್ರೇಷ್ಠ ಜೀವನದ ಕುರಿತು ಇನ್ನೇನೂ ಓದಲು ಉಳಿದಿಲ್ಲವೆಂದು ಮರುಕಪಟ್ಟಿದ್ದೆ.” M. K Gandhi, Young India, September 23, 1924
ಥಾಮಸ್ ಕಾರ್ಲೈಲ್:
ಮುಹಮ್ಮದ್ ರೋಗಿಗಳನ್ನು ಸಂದರ್ಶಿಸುತ್ತಿದ್ದರು, ಯಾರಾದರೂ ಮೃತದೇಹವನ್ನು ಹೊತ್ತೊ ಯ್ಯುವುದನ್ನು ಕಂಡರೆ ಅದನ್ನು ಹಿಂಬಾಲಿಸುತ್ತಿದ್ದರು, ಗುಲಾಮರ ಔತಣದೂಟದ ಆಮಂತ್ರಣಗಳನ್ನು ಸ್ವೀಕರಿಸುತ್ತಿದ್ದರು, ತಮ್ಮ ವಸ್ತ್ರಗಳನ್ನು ತಾವೇ ಹೊಲಿಯುತ್ತಿದ್ದರು, ಆಡುಗಳನ್ನು ತಾವೇ ಸ್ವತಃ ಹಾಲು ಹಿಂಡುತ್ತಿದ್ದರು, ಮತ್ತು ಅವುಗಳನ್ನು ತಾವೇ ಸ್ವತಃ ಮೇಯಿಸುತ್ತಿದ್ದರು. ಇನ್ನೊಂದು ಚರ್ಯೆಯು (ಹದೀಸ್) ಹೀಗೆನ್ನುತ್ತದೆ: ಯಾರಾದರೂ ಹಸ್ತಲಾಘವ ಮಾಡಿದರೆ ಆ ವ್ಯಕ್ತಿ ತನ್ನ ಕೈಯನ್ನು ಹಿಂದಕ್ಕೆಳೆಯುವವರೆಗೆ ಅವರು ತಮ್ಮ ಕೈಯನ್ನು ಹಿಂದೆಳೆಯುತ್ತಿರಲಿಲ್ಲ. ಆ ವ್ಯಕ್ತಿ ತಮ್ಮ ಬಳಿಯಿಂದ ಹೊರಡುವವರೆಗೆ ಅವರು ಅಲ್ಲಿಂದ ಕದಲುತ್ತಿರಲಿಲ್ಲ. ಅವರ ಕುಟುಂಬವು ಅತ್ಯಂತ ಮಿತವ್ಯಯಿಯಾಗಿತ್ತು, ಅವರ ದೈನಂದಿನ ಆಹಾರ ಗಂಜಿ, ರೊಟ್ಟಿ ಮತ್ತು ನೀರಾಗಿದ್ದವು. ಕೆಲವೊಮ್ಮೆ ಅವರ ಮನೆಯ ಒಲೆಯಲ್ಲಿ ತಿಂಗಳುಗಳವರೆಗೆ ಬೆಂಕಿಯುರಿಸಲ್ಪಡುತ್ತಿರಲಿಲ್ಲ, ಅವರು ತಮ್ಮ ಬಟ್ಟೆಗಳನ್ನು ತಾವೇ ಸ್ವತಃ ಹೊಲಿಯುತ್ತಿದ್ದರು, ತಮ್ಮ ಚಪ್ಪಲಿಗಳನ್ನು ತಾವೇ ಸ್ವತಃ ಸರಿಪಡಿಸುತ್ತಿದ್ದರು, ತಮ್ಮ ಹರಿದ ಅಂಗಿಯನ್ನು ತಾವೇ ಸ್ವತಃ ತೇಪೆಹಚ್ಚುತ್ತಿದ್ದರೆಂದು ಅವರು (ಅನುಯಾಯಿಗಳು) ಅತ್ಯಂತ ಹೆಮ್ಮೆಯಿಂದ ದಾಖಲಿಸಿದ್ದಾರೆ. ಸಾಮಾನ್ಯ ಜನರು ಪರಿಶ್ರಮಿಸುವಂತೆ ಪರಿಶ್ರಮಿಸುವ ಓರ್ವ ಬಡವ, ಓರ್ವ ಕಠಿಣ ಪರಿಶ್ರಮಿ ಮತ್ತು ಸವಲತ್ತುಗಳಿಲ್ಲದ ವ್ಯಕ್ತಿಯಾಗಿದ್ದರು ಅವರು….. ತಾನೇ ಸ್ವತಃ ತೇಪೆ ಹಚ್ಚಿದ ವಸ್ತ್ರಗಳನ್ನು ಧರಿಸಿದ ಈ ವ್ಯಕ್ತಿಯನ್ನು ಅನುಸರಿಸಿದಂತೆ ಜಗತ್ತಿನ ಯಾವುದೇ ಮಹಾನ್ ಸಾಮ್ರಾಟನನ್ನೂ ಜನರು ಅನುಸರಿಸಿಲ್ಲ. Thomas Carlyle, Heroes and Hero Worship, 1840
ಆರ್ಥರ್ ಗ್ಲ್ಯನ್ ಲಿಯೊನಾರ್ಡ್:
ಇಸ್ಲಾಮಿನ ಆತ್ಮದ ಮೂಲಕ ಮಹಮ್ಮದ್'ರು ಅರಬರಿಗೆ ಉಸಿರಾಡಿಕೊಟ್ಟ ಸ್ಪೂರ್ತಿಯು - ಅವರ ವಿಶಿಷ್ಟ ಸ್ವಭಾವವು - ಅರಬರನ್ನು ಅತ್ಯುನ್ನತಗೊಳಿಸಿತು. ಅದು ಅವರನ್ನು ಮುಂಪರಿನಿಂದ ಮತ್ತು ಜನಾಂಗೀಯ ಜಡತೆಯ ಅತಿ ನೀಚ ಮಟ್ಟದಿಂದ ಎಬ್ಬಿಸಿ ರಾಷ್ಟ್ರೀಯ ಏಕತೆ ಮತ್ತು ಸಾರ್ವಭೌಮತ್ವದೆಡೆಗೆ ಸಾಗಿಸಿತು.” Arthur Glyn Leonard, Islam, Her Moral and Spiritual Values
ಡಬ್ಲ್ಯೂ. ಮಾಂಟ್ಗೊಮೆರಿ ವ್ಯಾಟ್:
"ತಮ್ಮ ನಂಬಿಕೆಗಳಿಗಾಗಿ ಹಿಂಸೆ ಅನುಭವಿಸಲು ಸಿದ್ದರಾಗುವ ಅವರ ಸನ್ನದ್ಧತೆ, ಅವರಲ್ಲಿ ನಂಬಿಕೆಯಿಟ್ಟು ಅವರನ್ನು ನಾಯಕನಾಗಿ ಅಂಗೀಕರಿಸಿದ ಅವರ ಅನುಯಾಯಿಗಳ ಉದಾತ್ತವಾದ ಚಾರಿತ್ರ್ಯ, ಅವರ ಅತ್ಯಂತಿಕ ಸಾಧನೆಯ ಮಹತ್ವ, ಎಲ್ಲವೂ ಅವರ ಮೂಲಭೂತ ಸಮಗ್ರತೆಯನ್ನು ಸಾರಿ ಹೇಳುತ್ತವೆ. ಮುಹಮ್ಮದ್'ರನ್ನು ಆಷಾಢಭೂತಿಯೆಂದು ಭಾವಿಸುವುದಾದರೆ ಅದು ಸಮಸ್ಯೆಗಳನ್ನು ತಂದೊಡ್ದುತ್ತವೆ. ದೂರದೃಷ್ಟವಶಾತ್, ಪಶ್ಚಿಮದಲ್ಲಿ ಮುಹಮ್ಮದ್'ರಷ್ಟು ಕಿಳಾಗಿ ಬೆಳೆಕಟ್ಟುಲಾಗದ ಬೇರೊಬ್ಬ ವ್ಯಕ್ತಿಯಿರಲಾರರು." W. Montgomery Watt, Muhammad at Mecca, Oxford, 1953
ಡಾಕ್ಟರ್ ಜಾನ್ ವಿಲಿಯಂ ದ್ರಪೆರ್:
"ಕ್ರಿ.ಶ. ರಲ್ಲಿ, ಜಸ್ಟೀನಿಯನ್ ಸತ್ತ ನಾಲ್ಕು ವರ್ಷಗಳ ಬಳಿಕ, ಮಾನವಕುಲದ ಮೇಲೆ ಅಪಾರ ಪ್ರಭಾವ ಬೀರಿದ ಒಬ್ಬ ವ್ಯಕ್ತಿ, ಮುಹಮ್ಮದ್, ಅರೇಬಿಯಾದ ಮಕ್ಕಾದಲ್ಲಿ ಜನ್ಮ ತಾಳಿದರು." Dr. John William Draper, History of Intellectual, Development of Europe
ಪ್ರೊಫೆಸ್ಸರ್ K. S ರಾಮಕೃಷ್ಣ ರಾವ್:
ಮುಹಮ್ಮದ್'ರ ವ್ಯಕ್ತಿತ್ವದ ಕುರಿತು ಹೇಳುವುದಾದರೆ ಅದರ ಸಂಪೂರ್ಣ ಸತ್ಯವನ್ನು ಗ್ರಹಿಸಿಕೊಳ್ಳುವುದು ಅಸಾಧ್ಯ. ಅದರ ಒಂದು ಸಣ್ಣ ತುಣುಕನ್ನು ಮಾತ್ರ ನನಗೆ ಅರಿಯಲು ಸಾಧ್ಯವಾಗಿದೆ. ಒಂದರ ಹಿಂದೆ ಒಂದು ಎಂಬಂತೆ ಬರುವ ಅವರ ಜೀವನದ ಮುಗ್ಗುಗಳು ಅದ್ಬುತವಾಗಿವೆ. ಮುಹಮ್ಮದ್ ಎಂಬ ಪ್ರವಾದಿ, ಮುಹಮ್ಮದ್ ಎಂಬ ಯೋಧ, ಮುಹಮ್ಮದ್ ಎಂಬ ವ್ಯಾಪಾರಿ, ಮುಹಮ್ಮದ್ ಎಂಬ ಆಡಳಿತಗಾರ, ಮುಹಮ್ಮದ್ ಎಂಬ ವಾಗ್ಮಿ, ಮುಹಮ್ಮದ್ ಎಂಬ ಸುಧಾರಕ, ಮುಹಮ್ಮದ್ ಎಂಬ ಅನಾಥರ ಅಭಯಕೆಂದ್ರ, ಮುಹಮ್ಮದ್ ಎಂಬ ಗುಲಾಮರ ಸಂರಕ್ಷಕ, ಮುಹಮ್ಮದ್ ಎಂಬ ಮಹಿಳಾ ವಿಮೋಚಕ, ಮುಹಮ್ಮದ್ ಎಂಬ ನ್ಯಾಯಾಧೀಶ, ಮುಹಮ್ಮದ್ ಎಂಬ ಭಕ್ತ... ಈ ಎಲ್ಲ ಪ್ರಮುಖ ಪಾತ್ರಗಳಲ್ಲೂ, ಬದುಕಿನ ಈ ಎಲ್ಲ ವಿಭಾಗಗಳಲ್ಲೂ ಅವರೊಬ್ಬ ನಾಯಕರೇ ಆಗಿದ್ದರು. Prof. K.S. Ramakrishna Rao, Muhammad: The Prophet of Islam, 1989
ಉಲ್ಲೇಖಗಳು
- Unicode has a special "Muhammad" ligature at U+FDF೪ ﷴ
-
click here for the Arabic pronunciation. - Elizabeth Goldman (1995). Believers: spiritual leaders of the world. Oxford University Press. p. 63.
- The Cambridge History of Islam (೧೯೭೭) writes that "It is appropriate to use the word 'God' rather than the transliteration 'Allah'. For one thing it cannot be denied that Islam is an offshoot of the Judaeo-Christians tradition, and for another the Christian Arabs of today have no other word for 'God' than 'Allah'." cf p.೩೨.
- See:
- Esposito (೧೯೯೮), p.೧೨
- Esposito (೨೦೦೨b), pp.೪–೫
- F. E. Peters (೨೦೦೩), p.೯