ಮಾಲತಿ ಪಟ್ಟಣಶೆಟ್ಟಿ
ಶ್ರೀಮತಿ ಮಾಲತಿ ಪಟ್ಟಣಶೆಟ್ಟಿ ಇವರು ಕನ್ನಡ ಸಾಹಿತ್ಯಕ್ಕೆ ಬಹುಮುಖ ಸೇವೆ ಸಲ್ಲಿಸುತ್ತಿರುವ ಲೇಖಕಿ. ೧೯೪೦ ಡಿಸೆಂಬರ ೨೬ರಂದು ಇವರು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಜನಿಸಿದರು. ಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಮಾಲತಿಯವರು ಬೆಳಗಾವಿಯ ರಾಣಿ ಪಾರ್ವತಿದೇವಿ ಕಾಲೇಜಿನಲ್ಲಿ ಮೂರು ವರ್ಷ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿ ,ಆನಂತರ ಧಾರವಾಡದ ಜನತಾ ಶಿಕ್ಷಣ ಸಮಿತಿಯ ಕಾಲೇಜಿನಲ್ಲಿ ೩೧ ವರ್ಷಗಳವರೆಗೆ ಪ್ರಾಧ್ಯಾಪಕಿಯಾಗಿ ಹಾಗು ವಿಭಾಗ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಇವರು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದಾರೆ[1].
ಮಾಲತಿ ಪಟ್ಟಣಶೆಟ್ಟಿ | |
---|---|
ಜನನ | ಮಾಲತಿ ೧೯೪೦ ಡಿಸೆಂಬರ ೨೬ರಂದು ಜನಿಸಿದರು. ಮಹಾರಾಷ್ಟ್ರದ ಕೊಲ್ಲಾಪುರ |
ವೃತ್ತಿ | ಲೇಖಕಿ, ಪ್ರಾಧ್ಯಾಪಕಿ, ಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ, ನಂತರ,ಬೆಳಗಾವಿಯ ರಾಣಿ ಪಾರ್ವತಿದೇವಿ ಕಾಲೇಜಿನಲ್ಲಿ ಮೂರು ವರ್ಷ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದರು. ತದನಂತರ ಧಾರವಾಡದ ಜನತಾ ಶಿಕ್ಷಣ ಸಮಿತಿಯ ಕಾಲೇಜಿನಲ್ಲಿ ೩೧ ವರ್ಷಗಳವರೆಗೆ ಪ್ರಾಧ್ಯಾಪಕಿಯಾಗಿ ಹಾಗು ವಿಭಾಗ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. |
Years active | ಇಲ್ಲಿಯವರೆವಿಗೂ |
ಪ್ರಶಸ್ತಿಗಳು | (ಮುಖ್ಯವಾದವುಗಳು) * ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿಯ ೨೦೦೦ ಇಸವಿಯ ಗೌರವ ಪ್ರಶಸ್ತಿ ಲಭಿಸಿದೆ.
|
ಸಾಹಿತ್ಯ
ಕವಿತಾ ಸಂಕಲನ
- ಬಾ ಪರೀಕ್ಷೆಗೆ
- ಗರಿಗೆದರಿ ತಂದೆ ಬದುಕು
- ಗುಲಾಬಿ
- ದಾಹ ತೀರ
- ಮೌನ ಕರಗುವ ಹೊತ್ತು
- ಇತ್ತೀಚಿನ ಕವಿತೆಗಳು
- ಹೂದಂಡಿ (ಆಯ್ದ ಕವಿತಾ ಸಂಗ್ರಹ)
ಕಥಾ ಸಂಕಲನ
- ಇಂದು ನಿನ್ನಿನ ಕತೆಗಳು
- ಸೂರ್ಯ ಮುಳುಗುವದಿಲ್ಲ
ವಿಮರ್ಶೆ
- ಬಸವರಾಜ ಕಟ್ಟೀಮನಿ-ಬದುಕು ಬರಹ (ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಕಟಣೆ)
ಸಂಪಾದನೆ
- ಕಾವ್ಯ ೯೬ (ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಕಟಣೆ)
- ಪ್ರಶಾಂತ (ಶ್ರೀಮತಿ ಶಾಂತಾದೇವಿ ಮಾಳವಾಡ ಇವರ ಷಷ್ಟ್ಯಬ್ದಿ ಸಮಾರೋಹ ಅಭಿನಂದನ ಗ್ರಂಥ)
- ಸಮತಾ (ಸಮುದಾಯ ಸಂಸ್ಥೆಯ ಪ್ರಕಟಣೆ)
ಸಾರ ಸಂಗ್ರಹ
- ‘ಮಾಡಿ ಮಡಿದವರು’ (ಲೇಖಕರು: ಬಸವರಾಜ ಕಟ್ಟೀಮನಿ; ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಕಟಣೆ)
ಆಕಾಶವಾಣಿ/ದೂರದರ್ಶನ
ಶ್ರೀಮತಿ ಮಾಲತಿ ಪಟ್ಟಣಶೆಟ್ಟಿಯವರು ಚಿಂತನ, ಭಾಷಣ, ನಾಟಕರಚನೆ, ರೂಪಕರಚನೆ, ಪಾತ್ರನಿರ್ವಹಣೆ,ಚರ್ಚೆ, ಕಥಾವಾಚನ, ಮುಂತಾದ ಆಕಾಶವಾಣಿಯ ಕಾರ್ಯಕ್ರಮಗಳಲ್ಲಿ ಸುಮಾರು ೧೯೭೦ರಿಂದಲೇ ಭಾಗವಹಿಸುತ್ತಿದ್ದಾರೆ. ಆಕಾಶವಾಣಿಯಂತೆಯೆ ದೂರದರ್ಶನದಲ್ಲಿ ಸಹ ಇವರ ಸಂದರ್ಶನ, ಕಾವ್ಯವಾಚನ ಹಾಗು ಕವಿಗೋಷ್ಠಿ ಕಾರ್ಯಕ್ರಮ ಜರುಗಿವೆ.
ಸಾಂಸ್ಕೃತಿಕ ಚಟುವಟಿಕೆಗಳು
ಶ್ರೀಮತಿ ಮಾಲತಿ ಪಟ್ಟಣಶೆಟ್ಟಿಯವರು ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸದೈವ ನಿರತರಾಗಿರುತ್ತಾರೆ.
- ಗೋರೆಗಾಂವ, ಮುಂಬಯಿಯ ಲೇಖಕಿಯರ ಪ್ರಥಮ ಸಮ್ಮೇಳನದ ಪ್ರಥಮ ಅಧ್ಯಕ್ಷೆ (೧೯೯೪)ಯಾಗಿದ್ದರು.
- ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಜರುಗಿದ ಆಖಿಲ ಭಾರತ ಮಹಿಳಾ ಸಮ್ಮೇಳನಗಳಲ್ಲಿ ಮೂರು ಸಲ ಕವಿಗೋಷ್ಠಿಯ ಅಧ್ಯಕ್ಷೆಯಾಗಿದ್ದರು.
- ಕರ್ನಾಟಕ ಲೇಖಕಿಯರ ಸಂಘ ಹಾಗು ಉತ್ತರ ಕರ್ನಾಟಕ ಲೇಖಕಿಯರ ಸಂಘದ ವಿಶೇಷ ಸಾಹಿತ್ಯ ಸಮ್ಮೇಳನಗಳಲ್ಲಿ ಎರಡು ಬಾರಿ ಕವಿಗೋಷ್ಠಿಯ ಅಧ್ಯಕ್ಷೆಯಾಗಿದ್ದರು.
ಇದಲ್ಲದೆ ಕೆಳಗಿನ ಕವಿಗೋಷ್ಠಿಗಳಲ್ಲಿ ಕಾವ್ಯವಾಚನ ಮಾಡಿದ್ದಾರೆ.
- ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ (ಮೈಸೂರು)
- ಕನ್ನಡ ಸಾಹಿತ್ಯ ಪರಿಷತ್ತಿನ ಅಮೃತ ಮಹೋತ್ಸವ
- ಮೈಸೂರು ದಸರಾ ಕವಿಗೋಷ್ಠಿ (ನಾಲ್ಕು ಬಾರಿ)
- ಇಂದೂರಿನ ಅಂತರರಾಜ್ಯ ಕವಿಸಮ್ಮೇಳನ
- ರಾಜ್ಯ ಮಹಿಳಾ ಸಾಹಿತ್ಯ ಸಮ್ಮೇಳನ (ಮೂರು ಬಾರಿ)
- ರಾಜ್ಯ ಸಾಹಿತ್ಯ ಪರಿಷತ್ತಿನ ಸಮ್ಮೇಳನ (ನಾಲ್ಕು ಬಾರಿ)
ರಾಜ್ಯ ಸಾಹಿತ್ಯ ಅಕಾಡೆಮಿಯ ಸಾಹಿತ್ಯ ಗೋಷ್ಠಿಗಳಲ್ಲಿ, ವಿಶ್ವವಿದ್ಯಾಲಯಗಳ ವಿಶೇಷ ಗೋಷ್ಠಿಗಳಲ್ಲಿ ಹಾಗು ರಾಜ್ಯ ಸಾಹಿತ್ಯ ಪರಿಷತ್ತಿನ ಸಮ್ಮೇಳನಗಳಲ್ಲಿ ಪ್ರಬಂಧಗಳನ್ನು ಮಂಡಿಸಿದ್ದಾರೆ ಮತ್ತು ಸಂವಾದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.
ಸದಸ್ಯತ್ವ
- ರಾಜ್ಯ ಸಾಹಿತ್ಯ ಅಕಾಡೆಮಿ ಸದಸ್ಯೆ (೧೯೮೭ರಿಂದ ೧೯೮೯ರವರೆಗೆ).
- ಕೇಂದ್ರ ಸಾಹಿತ್ಯ ಅಕಾಡೆಮಿ ಸಲಹಾ ಸದಸ್ಯೆ (೧೯೮೮ರಿಂದ ೧೯೯೩).
- ಉತ್ತರ ಕರ್ನಾಟಕ ಲೇಖಕಿಯರ ಸಂಘ,[[ಧಾರವಾಡ-ಹುಬ್ಬಳ್ಳಿ, ಕಾರ್ಯಾಧ್ಯಕ್ಷೆ (೧೯೯೩ರಿಂದ ೧೯೯೬) ಹಾಗು ಗೌರವ ಉಪಾಧ್ಯಕ್ಷೆ(೨೦೦೦ದಿಂದ….).
- ಕರ್ನಾಟಕ ವಿದ್ಯಾವರ್ಧಕ ಸಂಘದ ಮಹಿಳಾ ಮಂಟಪದ ಕಾರ್ಯಾಧ್ಯಕ್ಷೆ (೧೯೭೩-೧೯೭೬).
- ಕರ್ನಾಟಕ ವಿದ್ಯಾವರ್ಧಕ ಸಂಘದ ಶಿಕ್ಷಣ ಮಂಟಪದ ಸದಸ್ಯೆ (೧೯೯೬-೧೯೯೮).
- ರಾಜ್ಯ ಸಾರ್ವಜನಿಕ ಗ್ರಂಥಾಲಯ ಪುಸ್ತಕ ಆಯ್ಕೆ ಸಮಿತಿ ಸದಸ್ಯೆ (೧೯೯೮-೨೦೦೦).
- ಧಾರವಾಡ ವಿಭಾಗದ ಜೀವವಿಮಾ ಯೋಜನಾ ಕಾರ್ಯಾಲಯದ ಮಹಿಳಾ ಉದ್ಯೋಗಿಗಳಿಗಾಗಿ ರಚಿಸಲಾದ ‘ದೌರ್ಜನ್ಯ ನಿಯಂತ್ರಕ ಸಮಿತಿ’ ಸದಸ್ಯೆ.
- ಉತ್ತರ ಕರ್ನಾಟಕದ ಲೇಖಕಿಯರ ಸಂಘದ ಅಧ್ಯಕ್ಷೆ (೨೦೦೭ರಿಂದ..)
ಪ್ರಶಸ್ತಿ
ಶ್ರೀಮತಿ ಮಾಲತಿ ಪಟ್ಟಣಶೆಟ್ಟಿಯವರ ಕೃತಿಗಳಿಗೆ ಪ್ರಶಸ್ತಿಗಳ ಸುರಿಮಳೆಯೆ ಸಂದಿದೆ.
- ‘ಗರಿಗೆದರಿ ತಂದೆ ಬದುಕು ' ಕೃತಿಗೆ ಕರ್ನಾಟಕ ವಿದ್ಯಾವರ್ಧಕ ಸಂಘದ ರತ್ನಮ್ಮ ಹೆಗ್ಗಡೆ ಪ್ರಥಮ ಬಹುಮಾನ ಹಾಗು ಕನ್ನಡ ಸಾಹಿತ್ಯ ಪರಿಷತ್ತಿನ ಮಲ್ಲಿಕಾ ಪ್ರಶಸ್ತಿ ಲಭಿಸಿವೆ.
- ‘ಇಂದು ನಿನ್ನಿನ ಕತೆಗಳು’ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ರತ್ನಾಕರ ವರ್ಣಿ ಅನಾಮಿಕ ದತ್ತಿ ಪ್ರಶಸ್ತಿ ದೊರೆತಿದೆ.
- ‘ದಾಹ ತೀರ ‘ ಕೃತಿಗೆ ಕರ್ನಾಟಕ ವಿದ್ಯಾವರ್ಧಕ ಸಂಘದ ರತ್ನಮ್ಮ ಹೆಗ್ಗಡೆ ಪ್ರಥಮ ಬಹುಮಾನ ಹಾಗು ಕನ್ನಡ ಸಾಹಿತ್ಯ ಪರಿಷತ್ತಿನ ಮಲ್ಲಿಕಾ ಪ್ರಶಸ್ತಿ ಮತ್ತು ಡಾ| ಬಸಪಟ್ಟದ ಕಾವ್ಯಪ್ರಶಸ್ತಿ ದೊರೆತಿವೆ.
- ‘ಸೂರ್ಯ ಮುಳುಗುವದಿಲ್ಲ’ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಗಂಗಾದೇವಿ ಸಿಂಧೂರ ಪ್ರಶಸ್ತಿ ಹಾಗು ಕಲಬುರ್ಗಿಯ ಮಾಣಿಕಬಾಯಿ ಪಾಟೀಲ ಪ್ರತಿಷ್ಠಾನದ ಪ್ರಶಸ್ತಿ ಲಭಿಸಿವೆ.
- ‘ಮೌನ ಕರಗುವ ಹೊತ್ತು’ ಕೃತಿಗೆ ಗೊರೂರು ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದ ಪ್ರಶಸ್ತಿ ಹಾಗು ದಿ|ಗೀತಾ ದೇಸಾಯಿ ಕಾವ್ಯ ಪ್ರಶಸ್ತಿ ದೊರೆತಿವೆ.
- ‘ಬದುಕಿನ ಮೋಹ’ ಕೃತಿಗೆ ಎಚ್.ಎಮ್.ಟಿ. ಕಥಾಪ್ರಶಸ್ತಿ ದೊರೆತಿದೆ.
- ಸಾಹಿತ್ಯಸೇವೆಗಾಗಿ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿಯ ೨೦೦೦ ಇಸವಿಯ ಗೌರವ ಪ್ರಶಸ್ತಿ ಲಭಿಸಿದೆ.
- ಸಾಹಿತ್ಯಸೇವೆಗಾಗಿ ಬೆಳಗಾವಿಯ ನಾಡೋಜ ಪತ್ರಿಕೆಯ ಕಾತ್ಯಾಯಿನಿ ಸಾಹಿತ್ಯ ಪ್ರಶಸ್ತಿ ದೊರೆತಿದೆ.
- ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸನ್ಮಾನ ನೀಡಿದೆ.
- ದಿಲ್ಲಿಯ ಕನ್ನಡಿಗ ಪತ್ರಿಕೆ ದಿ|ಎಮ್.ಕೆ.ಇಂದಿರಾ ಪ್ರಶಸ್ತಿ ನೀಡಿ ಸನ್ಮಾನಿಸಿದೆ.
- ರಾಷ್ಟ್ರೀಯ ಸರ್ವಭಾಷಾ ಕವಯಿತ್ರಿ ಸಮ್ಮೇಳನದಲ್ಲಿ ಸರಸ್ವತಿ ಚಿಮ್ಮಲಗಿ ಪ್ರಶಸ್ತಿ ನೀಡಲಾಗಿದೆ.
- ೨೦೦೫ನೆಯ ಸಾಲಿನ ಡಾ|ಡಿ.ಎಸ್.ಕರ್ಕಿ ಪ್ರಶಸ್ತಿ ಲಭಿಸಿದೆ.
ಪ್ರಶಸ್ತಿ ಹಾಗು ಸನ್ಮಾನಗಳಲ್ಲದೆ ಶ್ರೀಮತಿ ಮಾಲತಿ ಪಟ್ಟಣಶೆಟ್ಟಿಯವರ ಕೆಲವು ಕವಿತೆಗಳು ಕರ್ನಾಟಕ ವಿಶ್ವವಿದ್ಯಾಲಯದ ಪದವಿ ಪರೀಕ್ಷೆಗಳ ಕನ್ನಡ ಪಠ್ಯಗಳಲ್ಲಿ ಆಯ್ಕೆಯಾಗಿವೆ. ಮಹಾರಾಷ್ಟ್ರ ರಾಜ್ಯದ ಹನ್ನೆರಡನೆಯ ತರಗತಿಯ ಕನ್ನಡ ಪಠ್ಯಗಳಲ್ಲಿ ಸಹ ಇವರ ಕವಿತೆ ಆಯ್ಕೆಯಾಗಿದೆ.