ಕುಸುಮಾಕರ ದೇವರಗೆಣ್ಣೂರು
ಕುಸುಮಾಕರ ದೇವರಗೆಣ್ಣೂರು ( ೧೯೩೦-೨೦೧೨) ಕಾವ್ಯನಾಮದಲ್ಲಿ ಸಾಹಿತ್ಯಕೃಷಿ ಮಾಡುತ್ತಿರುವ ವಸಂತ ಅನಂತ ದಿವಾಣಜಿ ಇವರು ವಿಜಯಪುರ ಜಿಲ್ಲೆಯ ವಿಜಯಪುರ ತಾಲ್ಲೂಕಿನ ದೇವರಗೆಣ್ಣೂರ ಗ್ರಾಮದಲ್ಲಿ ಜನಿಸಿದರು. ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದ ಬಳಿಕ , ಪುಣೆ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದರು.
೧೯೫೬ರಲ್ಲಿ ಸೊಲ್ಲಾಪುರದ ದಯಾನಂದ ಮಹಾವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ೩೫ ವರ್ಷಗಳವರೆಗೆ ಸೇವೆ ಸಲ್ಲಿಸಿ ನಿವೃತ್ತರಾದರು.
ಇವರು ೨೦೧೨ರಲ್ಲಿ ತೀರಿಕೊಂಡರು.
ಸಾಹಿತ್ಯ
ಕುಸುಮಾಕರ ದೇವರಗೆಣ್ಣೂರು ಇವರು ಅನೇಕ ಮರಾಠಿ ಕೃತಿಗಳನ್ನು ಕನ್ನಡಕ್ಕೆ ಭಾಷಾಂತರಿಸಿದ್ದಾರೆ.ಕನ್ನಡದಲ್ಲಿ ೫ ಕಾದಂಬರಿಗಳನ್ನು ರಚಿಸಿದ್ದಾರೆ.
- ನಾಲ್ಕನೆಯ ಆಯಾಮ,
- ನಿರೀಂದ್ರಿಯ,
- ಪರಿಘ,
- ಬಯಲು-ಬಸಿರು,
- ದುರ್ದಮ್ಯ(ಮರಾಠಿಯಿಂದ ಕನ್ನಡಕ್ಕೆ ಅನುವಾದ)
- ಕಾವ್ಯ:- ಸ್ವಪ್ನನೌಕೆ.
- ಪಿ.ಎಚ್ ಡಿ. ಮಹಾಪ್ರಬಂಧ :- ಪ್ರಸಾದ ಯೋಗ (ಪುರಂದರ ದಾಸರನ್ನು ಕುರಿತು)
- ಸಾಹಿತ್ಯ ವಿಮರ್ಶೆ:- ಗಾಳಿ ಹೆಜ್ಜೆ ಹಿಡಿದ ಸುಗಂಧ
- ೧೯೬೬‘ನಾಲ್ಕನೆಯ ಆಯಾಮ’ ಕಾದಂಬರಿ
‘ನಿರೀಂದ್ರಿಯ’ ಕಾದಂಬರಿ
- ‘ಬಯಲು-ಬಸಿರು’
.
- ಗೌರವ ಗ್ರಂಥ:-ಅವಗಾಹ.
ಪ್ರಶಸ್ತಿ
ಉಲ್ಲೇಖಗಳು
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.